janadhvani

Kannada Online News Paper

ನಾಳೆ ತಿಬ್ಲಪದವಿನಲ್ಲಿ ಅನುಸ್ಮರಣೆ ಹಾಗೂ ಬೃಹತ್ ಮುತಅಲ್ಲಿಂ ಸಂಗಮ

ಕೋಣಾಜೆ:ಕರ್ನಾಟಕ ಅಮಾನೀಸ್ ಅಸೋಶಿಯೇಷನ್ ವತಿಯಿಂದ ಆಕ್ಟೋಬರ್ 01/2019 ಮಂಗಳವಾರ ಶೈಖುನಾ ಕಂಝುಲ್ ಉಲಮಾ ಚಿತ್ತಾರಿ ಉಸ್ತಾದ್ ಪ್ರಥಮ ಆಂಡ್ ನೇರ್ಚೆಯ ಪ್ರಯುಕ್ತ ಅನುಸ್ಮರಣಾ ಸಮಾವೇಶ ಹಾಗೂ ಬೃಹತ್ ಮುತಅಲ್ಲಿಂ ಸಂಗಮ ಅಲ್ ಮದೀನಾ ಕಮ್ಯುನಿಟಿ ಹಾಲ್ ತಿಬ್ಲಪದವಿನಲ್ಲಿ ಬೆಳಗ್ಗೆ 10ರಿಂದ 12:15 ರ ತನಕ ನಡೆಯಲಿದೆ.

ಖ್ಯಾತ ಮನಶಾಸ್ತ್ರಜ್ಞ ಹಾಗೂ ಹಿಪ್ನೋಥೆರಪಿಸ್ಟ್ ಮೌಲಾನಾ ಇಬ್ರಾಹೀಂ ಸಖಾಫಿ ಕೋಟೂರ್ (ಕಾರ್ಯದರ್ಶಿ SJU ವಯನಾಡ್ ಜಿಲ್ಲೆ) ರವರು ವಿಷಯ ಮಂಡನೆ ಮಾಡಲಿದ್ದಾರೆ.

ಮಧ್ಯಾಹ್ನ 12:30 ಕ್ಕೆ ನಡೆಯುವ ಅನುಸ್ಮರಣಾ ಸಮಾವೇಶದ ಅಧ್ಯಕ್ಷತೆಯನ್ನು ಶೈಖುನಾ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉಸ್ತಾದ್ ವಹಿಸಲಿದ್ದಾರೆ. ಎಚ್.ಐ ಅಬೂಸುಫ್ಯಾನ್ ಇಬ್ರಾಹೀಂ ಮದನಿ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಖ್ಯಾತ ವಾಗ್ಮಿ ಅನಸ್ ಅಮಾನಿ ಪುಷ್ಪಗಿರಿ ಅನುಸ್ಮರಣಾ ಪ್ರಭಾಷಣ ನಡೆಸಲಿದ್ದಾರೆ.

ಕಾರ್ಯಕ್ರಮದಲ್ಲಿ ಕರ್ನಾಟಕ ಸುನ್ನಿ ಸಂಘ ಸಂಸ್ಥೆಗಳ ಅಗ್ರಗಣ್ಯ ನಾಯಕರು, ರಾಜಕೀಯ ಸಾಮಾಜಿಕ ನೇತಾರರು ಭಾಗವಹಿಸಲಿದ್ದಾರೆ.