janadhvani

Kannada Online News Paper

ಎಸ್ಸೆಸ್ಸೆಫ್ ರಾಜ್ಯ ಕ್ಯಾಂಪಸ್ ಗಾಲ್ವನೈಝ್ ಕ್ಯಾಂಪ್

ಬೆಂಗಳೂರು : ಎಸ್ಸೆಸ್ಸೆಫ್ ರಾಜ್ಯ ಕ್ಯಾಂಪಸ್ ವಿಂಗ್ ವತಿಯಿಂದ ಬೆಂಗಳೂರು ಕಬ್ಬನ್ ಪಾರ್ಕ್ ನಲ್ಲಿ ಗಾಲ್ವನೈಝ್ ಕ್ಯಾಂಪಸ್ ಲೀಡರ್ಸ್ ಕ್ಯಾಂಪ್ ಇತ್ತೀಚೆಗೆ ನಡೆಯಿತು.

ಎಸ್ಸೆಸ್ಸೆಫ್ ರಾಷ್ಟೀಯ ಕಾರ್ಯದರ್ಶಿ ಶೆರೀಫ್ ಮಾಸ್ಟರ್ ತರಗತಿ ನಡೆಸಿದರು.
ಅಕ್ಟೇೂಬರ್ ತಿಂಗಳಲ್ಲಿ ಹೊನ್ನಾವರದಲ್ಲಿ ನಡೆಯಲಿರುವ ಕ್ಯಾಂಪಸ್ ಅಸೆಂಬ್ಲಿ ಕುರಿತ ಕಾರ್ಯಯೇೂಜನೆ ವಿವರಿಸಲಾಯಿತು.

ರಾಜ್ಯ ಕ್ಯಾಂಪಸ್ ಕನ್ವೀನರ್ ಶೆರೀಫ್ ಕೊಡಗು,ವಿಸ್ಡಂ ಕನ್ವೀನರ್ ಸಫ್ವಾನ್ ಚಿಕ್ಕಮಗಳೂರು,ಮುಸ್ತಫಾ ಮಾಸ್ಟರ್ ಮತ್ತು ವಿವಿದ ಜಿಲ್ಲೆ ಹಾಗೂ ಡಿವಿಶನ್ ಗಳಿಂದ ಆಗಮಿಸಿದ ಕ್ಯಾಂಪಸ್ ಕಾರ್ಯದರ್ಶಿಗಳು ಉಪಸ್ಥಿತರಿದ್ದರು