janadhvani

Kannada Online News Paper

ಮನೆ ನಿರ್ಮಾಣದಲ್ಲಿ ಬಾಗಿಯಾದ ಎಸ್ಸೆಸ್ಸೆಫ್ ಸುಳ್ಯ ಸಾಂತ್ವನ ಟೀಂ ಸದಸ್ಯರಿಗೆ ಸನ್ಮಾನ

ಅಜ್ಜಾವರ ಅಡ್ಪಂಗಾಯದಲ್ಲಿ ತಹಶೀಲ್ದಾರ್ ರವರ ನೇತೃತ್ವದಲ್ಲಿ ಬಡ ಕುಟುಂಬದ ರಾಮ ನಾಯ್ಕ್ ರವರಿಗೆ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಿರ್ಮಿಸಿಕೊಟ್ಟ “ಬೆಳಕು” ಮನೆ ಯೋಜನೆಯ ಹಸ್ತಾಂತರ ಸಮಾರಂಭದಲ್ಲಿ ಮನೆ ನಿರ್ಮಾಣಕ್ಕೆ ಕಾರ್ಯಾಚರಿಸಿದ ಎಲ್ಲಾ ಸಂಘ ಸಂಸ್ಥೆಗಳಿಗೆ ತಹಶೀಲ್ದಾರ್ ರವರು ಶಾಲು ಹೊದಿಸಿ ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ SSF ಸಾಂತ್ವನ ಟೀಂ ಕಾರ್ಯಕರ್ತರನ್ನು ಹಾಗೂ ಅವರ ಕಾರ್ಯ ಚಟುವಟಿಕೆಗಳನ್ನು ಕೊಂಡಾಡಿ ಶ್ಲಾಘಿಸಿದ ತಹಶೀಲ್ದಾರರು ಇತರ ಸಂಘ ಸಂಸ್ಥೆಗಳ ಸೇವೆಯನ್ನೂ ಶ್ಲಾಘಿಸಿ ನಂತರ ಶಾಲು ಹೊದಿಸಿ ಎಲ್ಲಾ ಕಾರ್ಯಕರ್ತರನ್ನೂ ಸನ್ಮಾನಿಸಿದರು.