ವೇಣೂರು:ಕರಿಮಣೇಲು ಗ್ರಾಮದ ಶಾಂತಿನಗರ ಎಂಬಲ್ಲಿ ಬಡ-ಅನಾಥ-ನಿರ್ಗತಿಕರ ಆಶಾಕಿರಣವಾಗಿ ಮತ್ತು ಸಮುದಾಯದ ಏಳಿಗೆಗಾಗಿ ಸ್ಥಾಪಿಸಲ್ಪಟ್ಟ ಸಂಸ್ಥೆ “ನುಸ್ರತುಲ್ ಮಸಾಕೀನ್ ಶಾಂತಿನಗರ(ರಿ.)” ಇದರ ಮಹಾಸಭೆಯು ದಿನಾಂಕ 22.08.2019 ರಂದು ಸಂಸ್ಥೆಯ ಗೌರವಾಧ್ಯಕ್ಷ ಉಮರುಲ್ ಫಾರೂಕ್ ಸಖಾಫಿಯವರ ದುಆ ಮತ್ತು ಸಭಾಧ್ಯಕ್ಷತೆಯಲ್ಲಿ ಕೈರೋಳಿಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು G.S.ಅನ್ಸಾರ್ ಸಖಾಫಿಯವರು ನೆರವೇರಿಸಿದರು.ವಾರ್ಷಿಕ ವರದಿಯನ್ನು ಪ್ರ.ಕಾರ್ಯದರ್ಶಿ ಝುಭೈರ್ ಶಾಂತಿನಗರ ವಾಚಿಸಿದರು, ಕೋಶಾಧಿಕಾರಿ K.ಮುಹಮ್ಮದ್ ಗುಂಪಕಲ್ಲು ಇವರು ಲೆಕ್ಕಪತ್ರ ಮಂಡನೆ ಮಾಡಿದರು.
2019-20 ರ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ S.A.ರಶೀದ್ ಶಾಂತಿನಗರ, ಪ್ರ.ಕಾರ್ಯದರ್ಶಿಯಾಗಿ ನೌಶಾದ್ ಕೈರೋಳಿ,ಕೋಶಾಧಿಕಾರಿಯಾಗಿ P.M.ಲತೀಫ್ ಮತ್ತು ಸಂಘದ ಉಸ್ತುವಾರಿಯಾಗಿ K.ಮುಹಮ್ಮದ್ ಗುಂಪಕಲ್ಲು ಆಯ್ಕೆಯಾದರು. ಉಪಾಧ್ಯಕ್ಷರುಗಳಾಗಿ ಝುಭೈರ್ ಕೈರೋಳಿ, ಶಾಹುಲ್ ಹಮೀದ್ ಶಾಂತಿನಗರ ಮತ್ತು G.S.ಅನ್ಸಾರ್ ಸಖಾಫಿಯವರನ್ನು ಆಯ್ಕೆಮಾಡಲಾಯಿತು ಜೊತೆಕಾರ್ಯದರ್ಶಿಗಳಾಗಿ ನಾಸಿರ್ ಪಡ್ಡಂದಡ್ಕ ಮತ್ತು ತೌಫೀಕ್ ವೇಣೂರು ಇವರನ್ನು ಆಯ್ಕೆ ಮಾಡಲಾಯಿತು. ನಂತರ ಸಂಸ್ಥೆಯ ಅಬಿವೃದ್ಧಿಯ ಬಗ್ಗೆ ಚರ್ಚೆ ನಡೆಸಲಾಯಿತು.
ಇಸ್ಮಾಯಿಲ್ ಮರ್ಝೂಕ್ ಸ್ವಾಗತಿಸಿದರು,ಕೊನೆಯಲ್ಲಿ ನೂತನ ಕಾರ್ಯದರ್ಶಿ ನೌಶಾದ್ ಕೈರೋಳಿ ಧನ್ಯವಾದ ಮಾಡಿದರು.
ವರದಿ: ಝುಭೈರ್ ಶಾಂತಿನಗರ






