ವೇಣೂರು:ಕರಿಮಣೇಲು ಗ್ರಾಮದ ಶಾಂತಿನಗರ ಎಂಬಲ್ಲಿ ಬಡ-ಅನಾಥ-ನಿರ್ಗತಿಕರ ಆಶಾಕಿರಣವಾಗಿ ಮತ್ತು ಸಮುದಾಯದ ಏಳಿಗೆಗಾಗಿ ಸ್ಥಾಪಿಸಲ್ಪಟ್ಟ ಸಂಸ್ಥೆ “ನುಸ್ರತುಲ್ ಮಸಾಕೀನ್ ಶಾಂತಿನಗರ(ರಿ.)” ಇದರ ಮಹಾಸಭೆಯು ದಿನಾಂಕ 22.08.2019 ರಂದು ಸಂಸ್ಥೆಯ ಗೌರವಾಧ್ಯಕ್ಷ ಉಮರುಲ್ ಫಾರೂಕ್ ಸಖಾಫಿಯವರ ದುಆ ಮತ್ತು ಸಭಾಧ್ಯಕ್ಷತೆಯಲ್ಲಿ ಕೈರೋಳಿಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು G.S.ಅನ್ಸಾರ್ ಸಖಾಫಿಯವರು ನೆರವೇರಿಸಿದರು.ವಾರ್ಷಿಕ ವರದಿಯನ್ನು ಪ್ರ.ಕಾರ್ಯದರ್ಶಿ ಝುಭೈರ್ ಶಾಂತಿನಗರ ವಾಚಿಸಿದರು, ಕೋಶಾಧಿಕಾರಿ K.ಮುಹಮ್ಮದ್ ಗುಂಪಕಲ್ಲು ಇವರು ಲೆಕ್ಕಪತ್ರ ಮಂಡನೆ ಮಾಡಿದರು.
2019-20 ರ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ S.A.ರಶೀದ್ ಶಾಂತಿನಗರ, ಪ್ರ.ಕಾರ್ಯದರ್ಶಿಯಾಗಿ ನೌಶಾದ್ ಕೈರೋಳಿ,ಕೋಶಾಧಿಕಾರಿಯಾಗಿ P.M.ಲತೀಫ್ ಮತ್ತು ಸಂಘದ ಉಸ್ತುವಾರಿಯಾಗಿ K.ಮುಹಮ್ಮದ್ ಗುಂಪಕಲ್ಲು ಆಯ್ಕೆಯಾದರು. ಉಪಾಧ್ಯಕ್ಷರುಗಳಾಗಿ ಝುಭೈರ್ ಕೈರೋಳಿ, ಶಾಹುಲ್ ಹಮೀದ್ ಶಾಂತಿನಗರ ಮತ್ತು G.S.ಅನ್ಸಾರ್ ಸಖಾಫಿಯವರನ್ನು ಆಯ್ಕೆಮಾಡಲಾಯಿತು ಜೊತೆಕಾರ್ಯದರ್ಶಿಗಳಾಗಿ ನಾಸಿರ್ ಪಡ್ಡಂದಡ್ಕ ಮತ್ತು ತೌಫೀಕ್ ವೇಣೂರು ಇವರನ್ನು ಆಯ್ಕೆ ಮಾಡಲಾಯಿತು. ನಂತರ ಸಂಸ್ಥೆಯ ಅಬಿವೃದ್ಧಿಯ ಬಗ್ಗೆ ಚರ್ಚೆ ನಡೆಸಲಾಯಿತು.
ಇಸ್ಮಾಯಿಲ್ ಮರ್ಝೂಕ್ ಸ್ವಾಗತಿಸಿದರು,ಕೊನೆಯಲ್ಲಿ ನೂತನ ಕಾರ್ಯದರ್ಶಿ ನೌಶಾದ್ ಕೈರೋಳಿ ಧನ್ಯವಾದ ಮಾಡಿದರು.
ವರದಿ: ಝುಭೈರ್ ಶಾಂತಿನಗರ















ಇನ್ನಷ್ಟು ಸುದ್ದಿಗಳು
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ