janadhvani

Kannada Online News Paper

ಉಜಿರೆ: ಮಲ್ಜಅ್ ಹೆಲ್ಪ್ ಕೇರ್ ಸಮಿತಿ ಅಸ್ತಿತ್ವಕ್ಕೆ

ಉಜಿರೆ: ಮಲ್ಜಅ್ ದಅ್’ವಾ ಮತ್ತು ರಿಲೀಫ್ ಸೆಂಟರ್ ಉಜಿರೆ, ಇದರ ಹೆಲ್ಪ್ ಕೇರ್ ಸಮಿತಿಯು ದಿನಾಂಕ 04.08.2019 ನೇ ಅದಿತ್ಯವಾರದಂದು ಸಯ್ಯಿದ್ ಅಲವಿ ಜಲಾಲುದ್ದೀನ್ ಮದನಿ ಅಲ್’ಹಾದಿ ತಂಙಳ್ ಉಜಿರೆ ಇವರ ನೇತೃತ್ವದಲ್ಲಿ ಮಲ್ಜ’ಅ್ ಕ್ಯಾಂಪಸ್ ನಲ್ಲಿ ನಡೆಯಿತು.

ಮಲ್ಜಅ್ ಬ್ರಾಂಚ್ ಕಮಿಟಿಗಳ ಸಬಲೀಕರಣಕ್ಕಾಗಿ “ಮಲ್ಜಅ್ ಹೆಲ್ಪ್ ಕೇರ್ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.ಈ ಸಭೆಯನ್ನು ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಉದ್ಘಾಟಿಸಿದರು. ಪತ್ರಕರ್ತರಾದ ಅಶ್ರಫ್ ಅಲಿಕುಂಞಿ ಮುಂಡಾಜೆ ಹಾಗೂ ಮಲ್ಜ’ಅ್ ಜನರಲ್ ಮೇನೆಜರ್ ಮೆಹಬೂಬ್ ರಹ್ಮಾನ್ ಸಖಾಫಿ ಯವರು ಸಮಿತಿಯ ಕಾರ್ಯವಿಧಾನವನ್ನು ತಿಳಿಸಿದರು.

ಮಲ್ಜಅ್ ಶಿಲ್ಫಿ ಸಯ್ಯಿದ್ ಅಲವಿ ಜಲಾಲುದ್ದೀನ್ ಮದನಿ ಅಲ್’ಹಾದಿ ತಂಙಳ್ ಉಜಿರೆ ಸಮಿತಿಯನ್ನು ಘೋಷಿಸಿದರು. ಸಭೆಯಲ್ಲಿ SSF ಉಜಿರೆ ಸೆಕ್ಟರ್ ಅಧ್ಯಕ್ಷರಾದ ಇಕ್ಬಾಲ್ ಮಾಚಾರು, SMA ನಾಯಕರಾದ ಬದ್ರುದ್ದೀನ್ ಪರಪ್ಪು,SSF ಬೆಳ್ತಂಗಡಿ ಡಿವಿಷನ್ ಪ್ರ.ಕಾರ್ಯದರ್ಶಿ ಶರೀಫ್ ನಾವೂರು, SSF ಬೆಳ್ತಂಗಡಿ ಡಿವಿಷನ್ ಮಾಜಿ ಅಧ್ಯಕ್ಷರಾದ MAM ಖಾಸಿಂ ಮುಸ್ಲಿಯಾರ್ ಮಾಚಾರು, ಬ್ರಾಂಚ್ ಕಮಿಟಿ ಸದಸ್ಯರುಗಳು, ಸಂಘಟನಾ ಕಾರ್ಯಕರ್ತರು ಉಪಸ್ಥಿತಿತರಿದ್ದರು. ಮಲ್ಜಅ್ ಜನರಲ್ ಮ್ಯಾನೇಜರ್ ಮಹ್ಬೂಬುರ್ರಹ್ಮಾನ್ ಸಖಾಫಿ ಕಿನ್ಯ ಸ್ವಾಗತಿಸಿ ಸಾರ್ವಜನಿಕ ಸಂಪರ್ಕಾಧಿಕಾರಿ ಮುಹಮ್ಮದ್ ಶರೀಫ್ ಬೆರ್ಕಳ ಕಾರ್ಯಕ್ರಮ ನಿರೂಪಿಸಿದರು, ಕೊನೆಯಲ್ಲಿ ಸಮಿತಿ ಅಧ್ಯಕ್ಷರಾದ ಮುಹಮ್ಮದ್ ಶರೀಫ್ ಸಖಾಫಿ ವಂದಿಸಿದರು.

ಹೆಲ್ಪ್ ಕೇರ್ ಸಮಿತಿ:-
ಅದ್ಯಕ್ಷರು:-
ಶರೀಫ್ ಸಖಾಫಿ ನೆಕ್ಕಿಲು

ಪ್ರ.ಕಾರ್ಯದರ್ಶಿ:-
ನಝೀರ್ ಪೆರ್ದಾಡಿ

ಉಪಾದ್ಯಕ್ಷರುಗಳು:-
ಅಶ್ರಫ್ ಜೋಗಿಬೆಟ್ಟು
ಅಶ್ರಫ್ MH ಉಜಿರೆ

ಜೊತೆ ಕಾರ್ಯದರ್ಶಿಗಳು:-
BK ಹನೀಫ್ ಮುಸ್ಲಿಯಾರ್
ನಝೀರ್ ಪೆರ್ದಾಡಿ
ಇವರನ್ನು ಆಯ್ಕೆ ಮಾಡಲಾಯಿತು.

ವರದಿ:ಎಂ.ಎಂ.ಉಜಿರೆ.