janadhvani

Kannada Online News Paper

ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ.ಜಿಲ್ಲಾ ನಾಯಕರಿಂದ ಸಸಿ ವಿತರಣೆ

ಬಂಟ್ವಾಳ: ಕರ್ನಾಟಕ ಮುಸ್ಲಿಂ ಜಮಾಅತ್ ಇದರ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಘೋಷಣಾ ಸಮಾವೇಶವು ಶುಕ್ರವಾರ ಬಿ.ಸಿ.ರೋಡ್ ಸಾಗರ್ ಅಡಿಟೋರಿಯಂ ನಲ್ಲಿ ನಡೆಯಿತು.

ಸಮಾವೇಶದಲ್ಲಿ ವನಮಹೋತ್ಸವದ ಅಂಗವಾಗಿ ನೂರಕ್ಕಿಂತಲೂ ಮಿಕ್ಕ ಸಸಿಗಳನ್ನು ವಿತರಿಸಲಾಯಿತು.

ಖಾಝಿ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದ್, ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಯೇನೆಪೊಯ ಯುನಿವರ್ಸಿಟಿ ಕುಲಾಧಿಪತಿ ವೈ.ಅಬ್ದುಲ್ಲ ಕುಂಞ ಹಾಜಿ, ಕಾರ್ಯಾಧ್ಯಕ್ಷ SMR ರಷೀದ್ ಹಾಜಿ, ಪ್ರಧಾನ ಕಾರ್ಯದರ್ಶಿ BM ಮಮ್ತಾಜ್ ಅಲಿ ಮುಂತಾದ ನಾಯಕರು ಸಸಿ ವಿತರಣೆಗೆ ನೇತೃತ್ವ ನೀಡಿದರು.

✍ ಅಶ್ರಫ್ ಕಿನಾರ ಮಂಗಳೂರು