ರಿಯಾದ್: ಸೌದಿ ಅರೇಬಿಯಾದಲ್ಲಿ ಪ್ರಾಯೋಜಕತ್ವ ವ್ಯವಸ್ಥೆಯನ್ನು ಕೊನೆಗೊಳಿಸಬೇಕು ಎಂದು ಶೂರಾ ಕೌನ್ಸಿಲ್ ಸದಸ್ಯ ಫಹದ್ ಬಿನ್ ಜುಮುಅ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಿನಾಮಿ ವ್ಯವಹಾರ ಮತ್ತು ಹಿಂಬದಿಯ ಆರ್ಥಿಕ ವಿನಿಮಯವನ್ನು ಈ ಮೂಲಕ ಕೊನೆಗಾಣಿಸ ಬಹುದೆಂದು ಅವರು ತಿಳಿಸಿದರು.
ವಿದೇಶೀ ಕೆಲಸಗಾರರು ತಮ್ಮ ವ್ಯವಹಾರಗಳು, ಸ್ವಭಾವಗಳು ಮುಂತಾದವುಗಳಿಗೆ ತಾವೇ ಸಂಪೂರ್ಣ ಹೊಣೆಗಾರರಾಗುವ ಕಾರಣ ಹೆಚ್ಚಿನ ಮುತುವರ್ಜಿಯಿಂದ ಕಾರ್ಯಾಚರಿಸುವರು. ಪ್ರಾಯೋಜಕರ ಅಡಿಯಲ್ಲಿ ಇರುವ ಕೆಲಸಗಾರರ ಸಂಪೂರ್ಣ ಹೊಣೆಗಾರಿಕೆಯು ಪ್ರಾಯೋಜಕನ ಮೇಲಿರುತ್ತದೆ. ಅದು ವಿದೇಶೀಯರಿಗೆ ಕಾನೂನಿನ ಉಲ್ಲಂಘನೆಗೆ ಪ್ರೇರಣೆಯಾಗುತ್ತಿದೆ. ಬೇನಾಮಿ ವ್ಯವಹಾರ ಹೆಚ್ಚುವುದಕ್ಕೆ ಕಾರಣವೂ ಪ್ರಾಯೋಜಕತ್ವವಾಗಿದೆ.
ಝಕಾತ್, ತೆರಿಗೆ, ಸರಕಾರಿ ಶುಲ್ಕ ಮುಂತಾದವುಗಳ ಉಲ್ಲಂಘನೆಗೆ ಬೇನಾಮಿ ವ್ಯವಹಾರ, ಪ್ರಾಯೋಜಕತ್ವ ಮುಂತಾದವು ಕಾರಣವಾಗಿತ್ತಿದೆ ಎಂದು ತನ್ನ ಟ್ವಿಟರ್ ಖಾತೆಯಲ್ಲಿ ಜುಮುಅ ಅಭಿಪ್ರಾಯ ಪಟ್ಟಿದ್ದಾರೆ. ಸ್ವದೇಶೀಕರಣನನ್ನು ಇನ್ನಷ್ಟು ಪರಿಣಾಮ ಕಾರಿಯಾಗಿ ಜಾರಿಗೆ ತರುವುದು ಈ ಮೂಲಕ ಸಾಧ್ಯವಿದೆ. ಬೇನಾಮೀ ವ್ಯವಹಾರ ಸ್ಥಿಗಿತಗೊಳ್ಳುವ ಮೂಲಕ ಸಣ್ಣಪುಟ್ಟ ವ್ಯವಹಾರಗಳತ್ತ ಸ್ವದೇಶೀಯರು ಆಕರ್ಷಿತರಾಗಲಿದ್ದಾರೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು