ರಿಯಾದ್: ಸೌದಿ ಅರೇಬಿಯಾದಲ್ಲಿ ಪ್ರಾಯೋಜಕತ್ವ ವ್ಯವಸ್ಥೆಯನ್ನು ಕೊನೆಗೊಳಿಸಬೇಕು ಎಂದು ಶೂರಾ ಕೌನ್ಸಿಲ್ ಸದಸ್ಯ ಫಹದ್ ಬಿನ್ ಜುಮುಅ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಿನಾಮಿ ವ್ಯವಹಾರ ಮತ್ತು ಹಿಂಬದಿಯ ಆರ್ಥಿಕ ವಿನಿಮಯವನ್ನು ಈ ಮೂಲಕ ಕೊನೆಗಾಣಿಸ ಬಹುದೆಂದು ಅವರು ತಿಳಿಸಿದರು.
ವಿದೇಶೀ ಕೆಲಸಗಾರರು ತಮ್ಮ ವ್ಯವಹಾರಗಳು, ಸ್ವಭಾವಗಳು ಮುಂತಾದವುಗಳಿಗೆ ತಾವೇ ಸಂಪೂರ್ಣ ಹೊಣೆಗಾರರಾಗುವ ಕಾರಣ ಹೆಚ್ಚಿನ ಮುತುವರ್ಜಿಯಿಂದ ಕಾರ್ಯಾಚರಿಸುವರು. ಪ್ರಾಯೋಜಕರ ಅಡಿಯಲ್ಲಿ ಇರುವ ಕೆಲಸಗಾರರ ಸಂಪೂರ್ಣ ಹೊಣೆಗಾರಿಕೆಯು ಪ್ರಾಯೋಜಕನ ಮೇಲಿರುತ್ತದೆ. ಅದು ವಿದೇಶೀಯರಿಗೆ ಕಾನೂನಿನ ಉಲ್ಲಂಘನೆಗೆ ಪ್ರೇರಣೆಯಾಗುತ್ತಿದೆ. ಬೇನಾಮಿ ವ್ಯವಹಾರ ಹೆಚ್ಚುವುದಕ್ಕೆ ಕಾರಣವೂ ಪ್ರಾಯೋಜಕತ್ವವಾಗಿದೆ.
ಝಕಾತ್, ತೆರಿಗೆ, ಸರಕಾರಿ ಶುಲ್ಕ ಮುಂತಾದವುಗಳ ಉಲ್ಲಂಘನೆಗೆ ಬೇನಾಮಿ ವ್ಯವಹಾರ, ಪ್ರಾಯೋಜಕತ್ವ ಮುಂತಾದವು ಕಾರಣವಾಗಿತ್ತಿದೆ ಎಂದು ತನ್ನ ಟ್ವಿಟರ್ ಖಾತೆಯಲ್ಲಿ ಜುಮುಅ ಅಭಿಪ್ರಾಯ ಪಟ್ಟಿದ್ದಾರೆ. ಸ್ವದೇಶೀಕರಣನನ್ನು ಇನ್ನಷ್ಟು ಪರಿಣಾಮ ಕಾರಿಯಾಗಿ ಜಾರಿಗೆ ತರುವುದು ಈ ಮೂಲಕ ಸಾಧ್ಯವಿದೆ. ಬೇನಾಮೀ ವ್ಯವಹಾರ ಸ್ಥಿಗಿತಗೊಳ್ಳುವ ಮೂಲಕ ಸಣ್ಣಪುಟ್ಟ ವ್ಯವಹಾರಗಳತ್ತ ಸ್ವದೇಶೀಯರು ಆಕರ್ಷಿತರಾಗಲಿದ್ದಾರೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ