janadhvani

Kannada Online News Paper

SSF ಮಿತ್ತರಾಜೆ ಶಾಖೆಯ ವತಿಯಿಂದ ಇರ್ಶಾದಿಯ್ಯಾ ಇಲ್ಫಾ ಕ್ಯಾಂಪ್ ಮತ್ತು ಮಿಹ್ರಾಜ್ ಸಂಗಮ

ಸಾಲೆತ್ತೂರ್: ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್ (ಎಸ್.ಎಸ್.ಎಫ್) ರಾಜ್ಯಾದ್ಯಂತ ಹಮ್ಮಿಕೊಂಡಿರುವ ಇರ್ಶಾದಿಯ್ಯಾ ‘ಇಲ್ಫಾ’ ಕ್ಯಾಂಪ್ ಇದರ ಮಿತ್ತರಾಜೆ ಶಾಖಾ ಕಾರ್ಯಕರ್ತರ ಸಮ್ಮಿಲನ ಹಾಗೂ ಮಿಹ್ರಾಜ್ ಮೌಲಿದ್ ದಿನಾಂಕ (2-3-2019) ರಾತ್ರಿ ಪಂಜರಕೋಡಿ ನೂರುಲ್ ಉಲೂಂ ಮದ್ರಸ ಹಾಲ್’ನಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಜರಕೋಡಿ ಜುಮಾ ಮಸೀದಿ ಖತೀಬರಾದ ಅಬೂಬಕ್ಕರ್ ಮದನಿ ಉಸ್ತಾದ್ ವಹಿಸಿದ್ದರು, ಮುಅಲ್ಲಿಂ ಶರೀಫ್ ಹನೀಫಿ ಉಸ್ತಾದ್ ಸ್ವಾಗತಿಸಿದರು, SSF ಬಂಟ್ವಾಳ ಡಿವಿಷನ್ ಅಧ್ಯಕ್ಷರಾದ ಅಕ್ಬರ್ ಮದನಿ ಆಲಂಪಾಡಿ, ಡಿವಿಷನ್ ಕೋಶಾಧಿಕಾರಿ ಅಲೀ ಮದನಿ ಉಸ್ತಾದ್ ತರಗತಿ ಮಂಡಿಸಿದರು.

ಪಂಜರಕೋಡಿ ಜುಮಾ ಮಸೀದಿ ಅಧ್ಯಕ್ಷರಾದ ಮಜೀದ್ ಕೆ, ಪ್ರಧಾನ ಕಾರ್ಯದರ್ಶಿ ಉಮ್ಮರ್ ಕೆ, SYS ಪಂಜರಕೋಡಿ ಬ್ರಾಂಚ್ ಅಧ್ಯಕ್ಷರಾದ ಇಬ್ರಾಹಿಂ ಮಿತ್ತರಾಜೆ, SSF ಮಂಚಿ ಸೆಕ್ಟರ್ ಪ್ರ. ಕಾರ್ಯದರ್ಶಿ ನೌಫಲ್ ಕಟ್ಟತ್ತಿಲ, ಕೋಶಾಧಿಕಾರಿ ಹಂಝ ಮಂಚಿ, ಕ್ಯಾಂಪಸ್ ಕಾರ್ಯದರ್ಶಿ ಪರ್ವಾಝ್ ಮಂಚಿ, ಜೊತೆ ಕಾರ್ಯದರ್ಶಿ ಲುಖುಮಾನ್ ಕುಕ್ಕಾಜೆ ಮತ್ತು ಜಾಬಿರ್ ಮೋಂತಿಮಾರ್, ಝುಬೈರ್ ಸಂಪಿಲ ಹಾಗೂ ಡಿವಿಷನ್, ಸೆಕ್ಟರ್, ಶಾಖಾ, SYS ನೇತಾರರು, ಕಾರ್ಯಕರ್ತರು ಭಾಗವಹಿಸಿದ್ದರು.