ಧಾರವಾಡ (ಜ. 18) : ಗೋಮೂತ್ರ ಅಮೃತ ಎಂದು ಕುಡಿಯೋರು ಹಂದಿ ಮೂತ್ರವನ್ನು ಅಮೃತವೆಂದು ತಿಳಿದು ಕುಡಿಯಲಿ ಎಂದು ಸಾಹಿತಿ ಲಕ್ಷ್ಮಣ ಗಾಯಕವಾಡ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಧಾರವಾಡದಲ್ಲಿ ನಡೆಯುತ್ತಿರುವ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ದಲಿತ ಸಂಕಥನ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ಹಿಂದುಗಳು ಗೋವು ಪವಿತ್ರ ಅನ್ನುವುದಾದರೆ, ಹಂದಿ ಮತ್ತು ಕತ್ತೆಯನ್ನು ಸಹ ಪವಿತ್ರ ಎಂದು ತಿಳಿಯಲಿ. ಇವು ಕೂಡ ದೇವರ ಅವತಾರಗಳೇ ಆಗಿವೆ ಎಂದರು.
ಇದೇ ವೇಳೆ ಗೋಮೂತ್ರ ಅಮೃತ ಅಂತಾ ಕುಡಿಯುತ್ತಾರೆ. ಹಂದಿ ದೇವಸ್ವರೂಪಿ ಎನ್ನುವ ನೀವು ಅದರ ಮೂತ್ರವನ್ನೂ ಅಮೃತವೆಂದು ಕುಡಿಯಬೇಕಲ್ಲವೇ ಎಂದು ಪ್ರಶ್ನಿಸಿದರು.
ಗೋವು ಮಾತೆ ಅಂತಿರಾ..? ಆದರೆ ನಿಮ್ಮ ತಾಯಿಯನ್ನು ಮನೆಯಿಂದ ಹೊರಗೆ ಹಾಕುತ್ತೀರಿ. ದೇವರ ಅವತಾರವಾದ ವರಾಹ ಮತ್ತು ಕತ್ತೆಯನ್ನು ದಲಿತರಾದ ನಾವು ಪೋಷಿಸುತ್ತೇವೆ. ಹಾಗಾದರೆ ಹಿಂದುಗಳು ಹಂದಿ, ಕತ್ತೆಗಳನ್ನು ಒಂದು ದಿನವಾದರೂ ತಮ್ಮ ಮನೆ ಎದುರು ಕಟ್ಟಲಿ ನೋಡೊಣ ಎಂದು ಸವಾಲನ್ನು ಹಾಕಿದರು. ಇನ್ನು, ರಾಮಾಯಣದ ಬಗ್ಗೆ ದಲಿತ ಸಾಹಿತ್ಯದಲ್ಲಿ ವಿಮರ್ಶೆ ಮಾಡುವುದು ತಪ್ಪಾ ಎಂದು ಹೇಳಿದರು.
ರಾಮನಿಗೂ ಒಂದು ಮರ್ಯಾದೆ ಇತ್ತು, ಆದರೆ ಪತ್ನಿ ಸೀತಾಳನ್ನು ಅರಣ್ಯಕ್ಕೆ ಕಳುಹಿಸಿದ. ಅದರ ಬಗ್ಗೆ ವಿಮರ್ಶೆ ಆಗಬಾರದಾ ಎಂದು ಪ್ರಶ್ನಿಸಿದ ಅವರು, ರಾಮ ರಾಮ ಅಂತಾ ನಮ್ಮನ್ನ ಯಾಕೆ ದೂರ ತಳ್ಳುತ್ತೀರಾ. ಕೆಲವರು ರಾಮನ ಬಗ್ಗೆ ಮಾತನಾಡುವುದು ಬೇಡ ಎನ್ನುವಷ್ಟು ಸಂವೇದನಾಶೀಲರಾಗಿದ್ದಾರೆ. ರಾಮನ ಬಗ್ಗೆ ಲಕ್ಷ್ಮಣನಿಗೆ ಎಷ್ಟು ಗೊತ್ತಿತ್ತು ಇವರಿಗೆ ಎಷ್ಟು ಗೊತ್ತು, ನಾನು ಲಕ್ಷ್ಮಣನಾಗಿ ರಾಮನನ್ನು ನೋಡಲು ಬಯಸುತ್ತೇನೆ ಎಂದರು.
ಅಲ್ಲದೇ ದಲಿತ ಸಾಹಿತ್ಯ ಮಹಾಭಾರತ ಮತ್ತು ರಾಮಾಯಣದ ವಿಮರ್ಶೆ ಬಯಸುತ್ತಿದೆ. ಒಳ್ಳೆಯದನ್ನು ಪಡೆಯೋಣ ಕೆಟ್ಟದನ್ನ ಪುರಾಣದಿಂದಲೇ ಕಿತ್ತು ಹಾಕೋಣ ಎಂದರು.
ಕೃಪೆ:ನ್ಯೂಸ್18















ಇನ್ನಷ್ಟು ಸುದ್ದಿಗಳು
ರಾಜ್ಯ ಸರ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ವಖ್ಫ್ ಸಲಹಾ ಸಮಿತಿಯಿಂದ ಅಭಿನಂದನೆಗಳು
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
‘ಎನ್ ಹಾನ್ಸ್ ಇಂಡಿಯಾ ಕಾನ್ಫರೆನ್ಸ್’- ಮಂಗಳೂರಿನ ಸಮಾವೇಶಕ್ಕೆ ಕ್ಷಣಗಣನೆ
ಖುರ್ಆನ್ ದುರ್ವ್ಯಾಖ್ಯಾನಕಾರರಿಂದ ಇಸ್ಲಾಂಗೆ ಭಾರೀ ಹಾನಿಯುಂಟಾಗುತ್ತಿದೆ- ಡಾ. ಝೈನೀ ಕಾಮಿಲ್
ಪಬ್ಲಿಕ್ ಟಿವಿಯ ರಂಗನಾಥ್ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಆದೇಶ
‘ಕೈ’ ಪಾಲಯಕ್ಕೆ ಸಿಎಂ ಇಬ್ರಾಹಿಂ ಗುಡ್ ಬೈ – ಜೆಡಿಎಸ್ ಸೇರುವುದು ಖಚಿತ.?
ಮದ್ರಸಾಗಳಲ್ಲಿ, ಜನಗಳ ಮಧ್ಯೆ ಸೌಹಾರ್ದ, ಸಹಬಾಳ್ವೆ, ಭ್ರಾತೃತ್ವ ಸಂಬಂಧಗಳನ್ನು ಬೆಳೆಸಲು ಕಲಿಸಲಾಗುತ್ತಿದೆ- ರಾಜ್ಯ ಸರ್ಕಾರ
ರೌಳತುಲ್ ಉಲೂಂ ಓಲ್ಡ್ ಸ್ಟೂಡೆಂಟ್ಸ್ ಉಕ್ಕುಡ ಆಯೋಜಿಸಿದ ಸ್ನೇಹ ಸಂಗಮ
ರಾಜ್ಯದಲ್ಲಿ ನೈಟ್ ಕರ್ಪ್ಯೂ- ರಾತ್ರಿ 10 ರಿಂದ ಯಾವುದೇ ವಾಹನಗಳ ಓಡಾಟಕ್ಕೆ ಅವಕಾಶವಿಲ್ಲ