ರಿಯಾದ್: ಸೌದಿ ಅರೇಬಿಯಾದಲ್ಲಿ, ಕೃಷಿ ಮತ್ತು ಮೀನುಗಾರಿಕೆ ವಲಯದ 20 ಉದ್ಯೋಗಗಳನ್ನು ಸ್ವದೇಶೀಕರಣದಿಂದ ಕೈ ಬಿಡಲಾಗಿದೆ. ಎರಡು ಸಚಿವಾಲಯಗಳ ಒಪ್ಪಂದದ ಮೇರೆಗೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಹೊಸ ಹೆಜ್ಜೆಯು ಭಾರತೀಯರಿಗೆ ಅನುಗ್ರಹವಾಗಿ ಪರಿಣಮಿಸಿದೆ.
ಮೀನುಗಾರಿಕೆ, ಕೃಷಿ, ಜಾನುವಾರು ಕೃಷಿ, ಜೇನು ಕೃಷಿ ಮತ್ತು ಇತರ ಸಂಬಂಧಿತ 20 ಉದ್ಯೋಗಗಳನ್ನು ಕೈಬಿಡಲಾಗಿದೆ.ಕಳೆದ ಸೆಪ್ಟೆಂಬರ್ನಿಂದ ಮೀನುಗಾರಿಕೆ ವಲಯದಲ್ಲಿ ದೇಶೀಕರಣವನ್ನು ಜಾರಿಗೆ ತರಲಾಗಿತ್ತು.
ಪ್ರತಿ ದೋಣಿಯಲ್ಲಿ ಕನಿಷ್ಠ ಒಬ್ಬ ಸ್ಥಳೀಯ ವ್ಯಕ್ತಿ ಇರಬೇಕೆಂಬ ವ್ಯವಸ್ಥೆಯನ್ನು ಕಾನೂನಿನಲ್ಲಿ ಜಾರಿಗೆ ತರಲಾಗಿತ್ತು.ಈ ವಲಯದಲ್ಲಿ ಸಾವಿರಾರು ಮಲಯಾಳಿಗಳು ಮತ್ತು ತಮಿಳರು ಕಾರ್ಯನಿರ್ವಹಿಸುತ್ತಿದ್ದಾರೆ. ದೇಶೀಕರಣದ ಜಾರಿಯಿಂದಾಗಿ ಹಲವರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದರು.
ಏತನ್ಮಧ್ಯೆ, ವ್ಯವಸಾಯದಲ್ಲಿ ಹೊಸ ತಂತ್ರಜ್ಞಾನಗಳನ್ನು ತರುವ ಹೂಡಿಕೆದಾರರಿಗೆ ವಿದೇಶೀ ನೌಕರರನ್ನು ನೇಮಕ ಮಾಡಲು ವೀಸಾಗಳನ್ನು ಅನುಮತಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ. ದೇಶೀಕರಣವನ್ನು ಜಾರಿಗೆ ತಂದ ಎಲ್ಲಾ ವಲಯಗಳಲ್ಲಿ ತಪಾಸಣೆ ಮುಂದುವರಿಯುತ್ತಿದೆ.















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ