ರಿಯಾದ್: ಸೌದಿ ಅರೇಬಿಯಾದಲ್ಲಿ, ಕೃಷಿ ಮತ್ತು ಮೀನುಗಾರಿಕೆ ವಲಯದ 20 ಉದ್ಯೋಗಗಳನ್ನು ಸ್ವದೇಶೀಕರಣದಿಂದ ಕೈ ಬಿಡಲಾಗಿದೆ. ಎರಡು ಸಚಿವಾಲಯಗಳ ಒಪ್ಪಂದದ ಮೇರೆಗೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಹೊಸ ಹೆಜ್ಜೆಯು ಭಾರತೀಯರಿಗೆ ಅನುಗ್ರಹವಾಗಿ ಪರಿಣಮಿಸಿದೆ.
ಮೀನುಗಾರಿಕೆ, ಕೃಷಿ, ಜಾನುವಾರು ಕೃಷಿ, ಜೇನು ಕೃಷಿ ಮತ್ತು ಇತರ ಸಂಬಂಧಿತ 20 ಉದ್ಯೋಗಗಳನ್ನು ಕೈಬಿಡಲಾಗಿದೆ.ಕಳೆದ ಸೆಪ್ಟೆಂಬರ್ನಿಂದ ಮೀನುಗಾರಿಕೆ ವಲಯದಲ್ಲಿ ದೇಶೀಕರಣವನ್ನು ಜಾರಿಗೆ ತರಲಾಗಿತ್ತು.
ಪ್ರತಿ ದೋಣಿಯಲ್ಲಿ ಕನಿಷ್ಠ ಒಬ್ಬ ಸ್ಥಳೀಯ ವ್ಯಕ್ತಿ ಇರಬೇಕೆಂಬ ವ್ಯವಸ್ಥೆಯನ್ನು ಕಾನೂನಿನಲ್ಲಿ ಜಾರಿಗೆ ತರಲಾಗಿತ್ತು.ಈ ವಲಯದಲ್ಲಿ ಸಾವಿರಾರು ಮಲಯಾಳಿಗಳು ಮತ್ತು ತಮಿಳರು ಕಾರ್ಯನಿರ್ವಹಿಸುತ್ತಿದ್ದಾರೆ. ದೇಶೀಕರಣದ ಜಾರಿಯಿಂದಾಗಿ ಹಲವರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದರು.
ಏತನ್ಮಧ್ಯೆ, ವ್ಯವಸಾಯದಲ್ಲಿ ಹೊಸ ತಂತ್ರಜ್ಞಾನಗಳನ್ನು ತರುವ ಹೂಡಿಕೆದಾರರಿಗೆ ವಿದೇಶೀ ನೌಕರರನ್ನು ನೇಮಕ ಮಾಡಲು ವೀಸಾಗಳನ್ನು ಅನುಮತಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ. ದೇಶೀಕರಣವನ್ನು ಜಾರಿಗೆ ತಂದ ಎಲ್ಲಾ ವಲಯಗಳಲ್ಲಿ ತಪಾಸಣೆ ಮುಂದುವರಿಯುತ್ತಿದೆ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು