ನೆಕ್ಕಿಲ್: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ SSF ನೆಕ್ಕಿಲ್ ಶಾಖೆ ಅಧೀನದಲ್ಲಿ ರಾಜ್ಯ ಸಮಿತಿಯ ನಿರ್ದೇಶನದಂತೆ “ಯುನಿಟ್ ಕಾನ್ಫರೆನ್ಸ್” ಹಾಗೂ ಶಾಖೆ ಅಧೀನದಲ್ಲಿ ತ್ರೈಮಾಸಿಕವಾಗಿ ನಡೆಸಿಕೊಂಡು ಬರುವ “ಜಲಾಲಿಯ್ಯ ಮಜ್ಲಿಸ್” ನ ದ್ವಿತೀಯ ವಾರ್ಷಿಕ ಮಹಾ ಸಮಾವೇಶವು, ಇಂದು ಅಕ್ಟೋಬರ್ 25 ಗುರುವಾರ ಮಗ್ರಿಬ್ ಬಳಿಕ ಅಬೂಬಕರ್ ಸಿದ್ದೀಕ್ ಜುಮ್ಮಾ ಮಸ್ಜಿದ್ ಸಭಾಂಗಣದ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.
ಬಹು ಅಸ್ಸಯ್ಯಿದ್ ಜಅಫರ್ ಸ್ವಾದಿಕ್ ತಂಙಳ್ ಕುಂಬೋಳ್ ದುಆಶೀರ್ವಚನ ಹಾಗೂ ಜಲಾಲಿಯ್ಯ ಮಜ್ಲಿಸ್ ನ ನೇತೃತ್ವ ವಹಿಸಲಿದ್ದಾರೆ.
ಬಹು ಮಸ್ಊದ್ ಸಅದಿ ಪದ್ಮುಂಜ ಜಲಾಲಿಯ್ಯ ಆಲಾಪಣೆ ನಡೆಸಲಿದ್ದಾರೆ.
ಖ್ಯಾತ ವಾಗ್ಮಿ,ರಾಜ್ಯ SSF ಕಾರ್ಯದರ್ಶಿ,ಯುವ ವಿದ್ವಾಂಸ ಹಾಫಿಳ್ ಸುಫ್ಯಾನ್ ಸಖಾಫಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಸ್ಥಳೀಯ ಖತೀಬ್ ನೌಶಾದ್ ಸಅದಿ ಉದ್ಘಾಟಿಸುವ ಸಮಾರಂಭದಲ್ಲಿ,SSF ಜಿಲ್ಲಾ ಸದಸ್ಯ NM ಶರೀಫ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.ಶಾಖಾಧ್ಯಕ್ಷ ಹನೀಫ್ ನೆಕ್ಕಿಲ್ ರವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸ್ಥಳೀಯ ಅಧ್ಯಾಪಕರಾದ ರಫೀಕ್ ಝೈನಿ,ಹಾರಿಸ್ ಲತೀಫಿ, ಜಮಾಅತ್ ಆಡಳಿತ ಸಮಿತಿ ಅಧ್ಯಕ್ಷರಾದ ರಫೀಕ್ ಸಅದಿ,ಸ್ಥಳೀಯ SYS ಅಧ್ಯಕ್ಷರಾದ KP ರಮ್ಲಾನ್ ಹಾಜಿ,AYF ಅಧ್ಯಕ್ಷ ಮುಹಮ್ಮದ್ ಅಶ್ರಫ್,ಸೆಕ್ಟರ್,ಡಿವಿಶನ್ ಅಧ್ಯಕ್ಷರ ಸಹಿತ ಸಾಂಘಿಕ,ಸಾಮಾಜಿಕ ನಾಯಕರು ಭಾಗವಹಿಸಲಿದ್ದಾರೆ. ಸ್ತೀಯರಿಗೆ ಪ್ರತ್ಯೇಕ ಸ್ಥಳಾವಕಾಶದೊಂದಿಗೆ,silsila media ದಲ್ಲಿ ಕಾರ್ಯಕ್ರಮ ನೇರಪ್ರಸಾರವಾಗಲಿದೆ.ಕೊನೆಯಲ್ಲಿ ತಬರ್ರುಕ್ ವಿತರಣೆ ಕೂಡಾ ನಡೆಯಲಿದೆ ಎಂದು ಶಾಖಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಮದನಿ ತಿಳಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ