ಸುಳ್ಯ: ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ ಎಸ್ಸೆಸ್ಸೆಫ್ ಗಾಂಧಿನಗರ ಶಾಖೆಯ ವತಿಯಿಂದ ಪರಿಶುದ್ಧ ಹಜ್ಜ್ ಯಾತ್ರೆ ತೆರಳುತ್ತಿರುವ ಅಬ್ದುಲ್ ಖಾದರ್ ಎಂ.ಟಿ, ಅಬ್ದುಲ್ ಶುಕೂರ್, ಮುಹಮ್ಮದ್ ಕೆ.ಎಂ.ಎಸ್ ಹಾಗೂ ಮುಹಮ್ಮದ್ ನಾವೂರು ರವರಿಗೆ ಬೀಳ್ಕೊಡುಗೆ ಹಾಗೂ ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಪ್ರ. ಕಾರ್ಯದರ್ಶಿಯಾಗಿ ಆಯ್ಕೆಯಾದ ಹಸೈನಾರ್ ಜಯನಗರ ರವರಿಗೆ ಸನ್ಮಾನ ಸಮಾರಂಭ ಜುಲೈ 17ರಂದು ಗಾಂಧಿನಗರ ಸುನ್ನಿ ಸೆಂಟರ್’ನಲ್ಲಿ ನಡೆಯಿತು.
ಎಸ್ಸೆಸ್ಸೆಫ್ ಗಾಂಧಿನಗರ ಶಾಖಾಧ್ಯಕ್ಷರಾದ ಆರಿಫ್ ಬುಶ್ರಾ ಅಧ್ಯಕ್ಷತೆಯಲ್ಲಿ ಎಸ್ಸೆಸ್ಸೆಫ್ ಡಿವಿಷನ್ ಅಧ್ಯಕ್ಷರಾದ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ಜಯನಗರ ದುಆ ನೆರವೇರಿಸಿದರು. ಸುನ್ನಿ ಜಂಇಯ್ಯತುಲ್ ಉಲಮಾ ಸುಳ್ಯ ತಾಲೂಕು ಪ್ರ. ಕಾರ್ಯದರ್ಶಿ ನಿಝಾರ್ ಸಖಾಫಿ ಮುಡೂರು, ಸುಳ್ಯ ಕೇಂದ್ರ ಜುಮಾ ಮಸೀದಿ ಆಡಳಿತ ಮಂಡಳಿ ಕಾರ್ಯದರ್ಶಿ ಹಾಜಿ ಐ. ಇಸ್ಮಾಯೀಲ್, ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಉಪಾಧ್ಯಕ್ಷರಾದ ಆರ್.ಕೆ ಮುಹಮ್ಮದ್ ಆಶಂಸಾ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಹಾಜಿ ಕೆ.ಬಿ ಮುಹಮ್ಮದ್, ಹಾಜಿ ಅಬ್ಬಾಸ್ ಕಟ್ಟೆಕಾರ್, ಹಾಜಿ ಅಬ್ದುಲ್ ಹಮೀದ್ ಜನತಾ, ಹಾಜಿ ಮುಹ್ಯುದ್ದೀನ್ ಫ್ಯಾನ್ಸಿ, ಹಾಜಿ ಅಬ್ದುಲ್ ರಝಾಕ್ ರಾಜಧಾನಿ, ಹಾಜಿ ಅಬ್ದುಲ್ ಖಾದರ್ ಫ್ಯಾನ್ಸಿ, ಹನೀಫ್ ಸಖಾಫಿ ಬೆಳ್ಳಾರೆ, ಅಬ್ದುಲ್ ಖಾದರ್ ಮದನಿ ಅಜ್ಜಾವರ, ಹಾಜಿ ಅಬ್ದುಲ್ ಗಫ್ಫಾರ್, ಶಮೀರ್ ಮೊಗರ್ಪಣೆ, ರಿಯಾಝ್ ಕಟ್ಟೆಕಾರ್, ಸಿದ್ದೀಕ್ ಗೂನಡ್ಕ, ಸಿದ್ದೀಕ್ ಕಟ್ಟೆಕಾರ್, ಹನೀಫ್ ಬಿ.ಎಂ, ಜಮಾಲ್ ಗುರುಂಪು, ಅಝೀಝ್ ಏಣಾವರ, ಮುಹಮ್ಮದ್ ಸಿ.ಎ, ಅಬೂಬಕರ್ ವೈಟ್ ಮುಂತಾದ ಗಣ್ಯ ವ್ಯಕ್ತಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಸೈಫುದ್ದೀನ್ ಸ್ವಾಗತಿಸಿ ಆಬಿದ್ ಕಲ್ಲುಮುಟ್ಲು ವಂದಿಸಿದರು.