janadhvani

Kannada Online News Paper

SSF ಬಂಟ್ವಾಳ ಡಿವಿಷನ್: ಬೃಹತ್ ರಕ್ತದಾನ ಶಿಬಿರ ಮತ್ತು ಸ್ನೇಹ ಕೂಟ

ಬಂಟ್ವಾಳ:SSF ಬಂಟ್ವಾಳ ಡಿವಿಷನ್ ಇದರ ವತಿಯಿಂದ ಬೃಹತ್ ರಕ್ತದಾನ ಶಿಬಿರ ಮತ್ತು ಬಂಟ್ವಾಳ ಡಿವಿಷನ್ ವ್ಯಾಪ್ತಿಯ ರೈಟ್ ಟೀಮ್ ಸದಸ್ಯರ ಸ್ನೇಹ ಕೂಟವು ಜು.15 ರಂದು ಬೆಳಿಗ್ಗೆ 8 ಗಂಟೆಗೆ ಬಿ.ಸಿ ರೋಡ್ ನ ಸ್ಪರ್ಶ ಹಾಲ್ ನಲ್ಲಿ ನಡೆಯಲಿದೆ.

ಬೆಳಿಗ್ಗೆ 10 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು ಅಧ್ಯಕ್ಷತೆಯನ್ನು ರಶೀದ್ ಹಾಜಿ ವಗ್ಗ (ಅದ್ಯಕ್ಷರು SSF ಬಂಟ್ವಾಳ ಡಿವಿಷನ್)ವಹಿಸುವರು.ಅಲ್ ಹಾಜ್ ಎಸ್.ಪಿ ಹಂ‌‌ಝ ಸಖಾಫಿ ಬಂಟ್ವಾಳ(ಅಧ್ಯಕ್ಷರು ಕೆಸಿಎಫ್ ಅಂತರ್ ರಾಷ್ಟೀಯ ಸಮಿತಿ) ಉದ್ಘಾಟಿಸಲಿದ್ದಾರೆ.

ಆಬಿದ್ ನಈಮಿ ಪ್ರ,ಕಾರ್ಯದರ್ಶಿ ಬಂಟ್ವಾಳ ಡಿವಿಷನ್ ಸ್ವಾಗತ ಹಾಗೂ ಕೆ.ಪಿ ಸಿರಾಜುದ್ದೀನ್ ಸಖಾಫಿ ಕನ್ಯಾನ (ಅದ್ಯಕ್ಷರು SSF ದ.ಕ ಜಿಲ್ಲಾ ಸಮಿತಿ) ಸಂದೇಶ ಭಾಷಣ ನಡೆಸುವರು.

ಗೌರವಾನ್ವಿತ ಅತಿಥಿಗಳಾಗಿ,U.T ಖಾದರ್(ವಸತಿ ಮತ್ತು ನಗರಾಬಿವೃದ್ಧಿ ಸಚಿವರು ಕರ್ನಾಟಕ ಸರಕಾರ, ರಾಜೇಶ್ ನಾಯ್ಕ (ಶಾಸಕರು ಬಂಟ್ವಾಳ)
ರಮಾನಾಥ ರೈ ಮಾಜಿ ಸಚಿವರು ಕರ್ನಾಟಕ,
N.K.M ಶಾಪಿ ಶಹದಿ (ಅಧ್ಯಕ್ಷರು ಇಹ್ಸಾನ್ ಕರ್ನಾಟಕ ಹಾಗೂ ಇನ್ನಿತರ ನೇತಾರರು ಬಾಗವಹಿಸಲಿದ್ದಾರೆ. ಸಹಸ್ರಾರು ರಕ್ತದಾನಿಗಳು ಬಾಗವಹಿಸುವ ನಿರೀಕ್ಷೆ ಇದೆ ಎಂದು ಪ್ರಕಟಣೆಯಲ್ಲಿ ಶಾಹುಲ್ ಹಮೀದ್ ಕದ್ಕರ್ SSF ಕೆಪಿ ಬೈಲ್ ಯೂನಿಟ್, ಕಲ್ಲಡ್ಕ ಸೆಕ್ಟರ್ ರವರು ತಿಳಿಸಿದ್ದಾರೆ.

error: Content is protected !! Not allowed copy content from janadhvani.com