janadhvani

Kannada Online News Paper

SჄS ಬೆಳ್ತಂಗಡಿ ಝೋನ್: ಸಾಂತ್ವನ ಫಂಡ್ ಹಸ್ತಾಂತರ

ಬೆಳ್ತಂಗಡಿ: ಇತ್ತೀಚೆಗೆ ನಿಧನರಾದ ಎಸ್‌ವೈಎಸ್ (SჄS) ಕಾರ್ಯಕರ್ತ ಶರೀಫ್ ಪರಪ್ಪು ಅವರ ಕುಟುಂಬಕ್ಕೆ ಆರ್ಥಿಕ ಆಸರೆ ನೀಡುವ ನಿಟ್ಟಿನಲ್ಲಿ, ಎಸ್‌ವೈಎಸ್ ಬೆಳ್ತಂಗಡಿ ಝೋನ್ ವತಿಯಿಂದ ಸಂಗ್ರಹಿಸಲಾದ ರೂ. 1,17,313 ಸಾಂತ್ವನ ನಿಧಿಯನ್ನು ಭಾನುವಾರ (ಜೂನ್ 14) ಹಸ್ತಾಂತರಿಸಲಾಯಿತು.

ಶರೀಫ್ ಪರಪ್ಪು ಅವರ ನಿವಾಸಕ್ಕೆ ಭೇಟಿ ನೀಡಿದ ಸಂಘಟನೆಯ ಪ್ರಮುಖರು, ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿ ಒಟ್ಟುಗೂಡಿಸಲಾದ ಧನಸಹಾಯದ ಮೊತ್ತವನ್ನು ಹಸ್ತಾಂತರಿಸಿ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಎಸ್‌ವೈಎಸ್ ಝೋನ್ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಸಲೀಂ ಕನ್ಯಾಡಿ, ಕೋಶಾಧಿಕಾರಿ ಅಬ್ದುಲ್ ರಝಕ್ ಸಖಾಫಿ, ಉಪಾಧ್ಯಕ್ಷರಾದ ಅಯ್ಯುಬ್ ಮಹ್ಳರಿ, ಕೆ.ವೈ. ಇಸ್ಮಾಯಿಲ್, ಕಾರ್ಯದರ್ಶಿ ಹಾರಿಸ್ ಕುಕ್ಕುಡಿ ಹಾಗೂ ಸಿದ್ದಿಕ್ ಪರಪ್ಪು ಉಪಸ್ಥಿತರಿದ್ದರು.
ಅಲ್ಲದೆ, ಎಸ್‌ವೈಎಸ್ ಸರ್ಕಲ್ ಪದಾಧಿಕಾರಿಗಳು, ಪರಪ್ಪು ಯೂನಿಟ್ ಜಮಾಅತ್‌ನ ನಾಯಕರು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

ಇದನ್ನೂ ಓದಿರಿ...