ಜೈಪುರ: ರಾಜಸ್ಥಾನದ ಜುಂಜುನು ಜಿಲ್ಲೆಯ ಇಸ್ಲಾಂಪುರ ಗ್ರಾಮದ ಹೆಸರನ್ನು ಶ್ರೀರಾಮಪುರ ಎಂದು ಬದಲಾಯಿಸುವಂತೆ ಒತ್ತಾಯಿಸಿದ ಬಿಜೆಪಿ ಶಾಸಕರ ವಿರುದ್ಧ ಸ್ಥಳೀಯ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಗ್ರಾಮದ ಹೆಸರು ಬದಲಾಯಿಸದಂತೆ ಒತ್ತಾಯಿಸಿ ಸ್ಥಳೀಯರು ಜಿಲ್ಲಾಧಿಕಾರಿಗೆ (ಕಲೆಕ್ಟರ್ಗೆ) ಮನವಿ ಪತ್ರ ಸಲ್ಲಿಸಿದ್ದಾರೆ.
ಜುಂಜುನು ಜಿಲ್ಲೆಯ ಬಿಜೆಪಿ ಶಾಸಕರಾದ ರಾಜೇಂದ್ರ ಬಾಂಬೂ ಅವರು ಇಸ್ಲಾಂಪುರದ ಹೆಸರನ್ನು ಶ್ರೀರಾಮಪುರ ಎಂದು ಬದಲಾಯಿಸುವಂತೆ ಕೋರಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಈ ಕುರಿತು ಅಭಿಪ್ರಾಯ ಕೋರಿ ಜಿಲ್ಲಾಧಿಕಾರಿಗೆ ಪತ್ರ ಬಂದಾಗಲೇ ಹೆಸರು ಬದಲಾಯಿಸುವ ಸರ್ಕಾರದ ಕ್ರಮದ ಬಗ್ಗೆ ಜನರಿಗೆ ತಿಳಿಯಿತು. ಇದರ ಬೆನ್ನಲ್ಲೇ ಗ್ರಾಮಸ್ಥರು ಪ್ರತಿಭಟನೆ ಆರಂಭಿಸಿದರು.
ಆದರೆ, ಜನರ ಭಾವನೆಗಳನ್ನು ಒಳಗೊಂಡೇ ತಾವು ಹೆಸರು ಬದಲಾಯಿಸಲು ಒತ್ತಾಯಿಸಿರುವುದಾಗಿ ಶಾಸಕ ರಾಜೇಂದ್ರ ಬಾಂಬೂ ವಾದಿಸಿದ್ದಾರೆ. ಇಸ್ಲಾಂಪುರ ಎಂಬ ಹೆಸರು ದೇಶಕ್ಕೆ ಸ್ವಾತಂತ್ರ್ಯ ಸಿಗುವುದಕ್ಕಿಂತ ಮುಂಚಿನದ್ದಾಗಿದ್ದು, ಇಂದಿನ ಪರಿಸ್ಥಿತಿಯಲ್ಲಿ ಅದನ್ನು ಶ್ರೀರಾಮಪುರ ಎಂದು ಬದಲಾಯಿಸುವುದೇ ಸೂಕ್ತ ಎಂದು ಶಾಸಕರು ಹೇಳಿದ್ದಾರೆ. ಆದಷ್ಟು ಬೇಗ ಹೆಸರು ಬದಲಾವಣೆಯನ್ನು ಜಾರಿಗೆ ತರಬೇಕು ಎಂಬುದು ತಮ್ಮ ಬೇಡಿಕೆಯಾಗಿದೆ ಎಂದು ರಾಜೇಂದ್ರ ಬಾಂಬೂ ತಿಳಿಸಿದ್ದಾರೆ.
ಆದರೆ, ಇಸ್ಲಾಂಪುರದ ಒಂದು ಗುಂಪಿನ ಗ್ರಾಮಸ್ಥರು ಕಳೆದ ಶುಕ್ರವಾರ ಜುಂಜುನು ಜಿಲ್ಲಾಧಿಕಾರಿ ಕಚೇರಿಗೆ (ಕಲೆಕ್ಟರೇಟ್ಗೆ) ಬಂದು ಗ್ರಾಮದ ಹೆಸರನ್ನು ಬದಲಾಯಿಸದಂತೆ ಜಿಲ್ಲಾಧಿಕಾರಿಯಲ್ಲಿ ವಿನಂತಿಸಿಕೊಂಡರು. ಬಿಜೆಪಿ ಶಾಸಕರ ವಿರುದ್ಧ ಘೋಷಣೆಗಳನ್ನೂ ಕೂಗಿದರು.
“1451ರಲ್ಲಿ ನವಾಬ್ ಇಸ್ಲಾಂ ಖಾನ್ ಈ ಗ್ರಾಮವನ್ನು ಸ್ಥಾಪಿಸಿದ್ದರು. ಗ್ರಾಮದ ಜನರಿಗೆ ಹೆಸರು ಬದಲಾಯಿಸುವ ಯಾವುದೇ ಅಗತ್ಯ ಅಥವಾ ಬೇಡಿಕೆಯಿಲ್ಲ. ಈ ವಿಷಯವನ್ನು ಕೋಮುವಾದ ಮಾಡಲು ನಾವು ಬಿಡುವುದಿಲ್ಲ. ಹೆಸರು ಬದಲಾಯಿಸದಂತೆ ನಾವು ಸರ್ಕಾರಕ್ಕೆ ವಿನಂತಿಸುತ್ತೇವೆ” ಎಂದು ಇಸ್ಲಾಂಪುರದ ಮಾಜಿ ಗ್ರಾಮ ಮುಖಂಡರಾದ ಅಮಿನ್ ಮನಿಯರ್ ಹೇಳಿದ್ದಾರೆ.
ಗ್ರಾಮಸ್ಥರ ಅಥವಾ ಪಂಚಾಯಿತಿಯ ಅನುಮತಿಯಿಲ್ಲದೆ ಹೆಸರು ಬದಲಾಯಿಸುವ ಕ್ರಮವು ಸಂವಿಧಾನ ವಿರೋಧಿಯಾಗಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.















ಇನ್ನಷ್ಟು ಸುದ್ದಿಗಳು
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಯೋಜನೆ: ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭ
ಡೆಲಿವರಿ ಡ್ರೈವರ್ಗಳಿಗೆ ಹವಾನಿಯಂತ್ರಿತ ವಿಶ್ರಾಂತಿ ಕೇಂದ್ರಗಳು – ದುಬೈ ಆರ್ಟಿಎ ಕೊಡುಗೆ
ಅನಿವಾಸಿ ಕನ್ನಡಿಗರ ಸಚಿವಾಲಯ ಘೋಷಣೆ: ಕರ್ನಾಟಕ ಮುಸ್ಲಿಂ ಜಮಾಅತ್ ಶ್ಲಾಘನೆ
ಡಿಕೆಎಸ್ಸಿ ಕುವೈತ್: ಅಬ್ಬಾಸಿಯಾ ಯೂನಿಟ್ ಅಸ್ತಿತ್ವಕ್ಕೆ – ಅಧ್ಯಕ್ಷರಾಗಿ ಮುನೀರ್ ಅಹ್ಮದ್ ಕೃಷ್ಣಾಪುರ
ಡ್ರಗ್ ಮಾಫಿಯಾ ವಿರುದ್ಧ ‘ಆಪರೇಷನ್ ತೂಫಾನ್’- ಮೊದಲ ದಿನವೇ 137 ಮಂದಿ ಬಂಧನ
ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಡಿ.ಕೆ.ಎಸ್. ಬಂಪರ್ ಕೊಡುಗೆ
ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ- ಡಾ. ಜಿ. ಪರಮೇಶ್ವರ್ ಡಿಸಿಎಂ
ದೆಹಲಿ ಹೋಟೆಲ್ನಲ್ಲಿ ಭೀಕರ ಅಗ್ನಿ ದುರಂತ- 21 ಮಂದಿ ಮೃತ್ಯು
ಸೌದಿ: ಭಾರತದ ನೂತನ ರಾಯಭಾರಿಯಾಗಿ ವಿಪುಲ್ ನೇಮಕ- ದಶಕಗಳ ಸುದೀರ್ಘ ಸಂಪ್ರದಾಯಕ್ಕೆ ಬ್ರೇಕ್