ದುಬೈ: ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಸಿ ಬಳಕೆಯೂ ಹೆಚ್ಚುತ್ತಿದ್ದು, ಅವುಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು ಎಂದು ತಜ್ಞರು ತಿಳಿಸಿದ್ದಾರೆ. ಎಸಿಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಮತ್ತು ಸಮಯಕ್ಕೆ ಸರಿಯಾಗಿ ದುರಸ್ತಿ ಮಾಡದಿದ್ದರೆ, ಅವುಗಳು ಕಲುಷಿತ ಗಾಳಿಯನ್ನು ಹೊರಸೂಸಬಹುದು ಮತ್ತು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ವೈದ್ಯರು ಹಾಗೂ ತಜ್ಞರು ಎಚ್ಚರಿಸಿದ್ದಾರೆ.
ಸಾಮಾನ್ಯವಾಗಿ ಪದೇ ಪದೇ ಬರುವ ಸೀನು, ತಲೆನೋವು ಮತ್ತು ಗಂಟಲಿನ ಅಸ್ವಸ್ಥತೆಗಳಿಗೆ ಧೂಳು ಅಥವಾ ಹವಾಮಾನ ಬದಲಾವಣೆಯೇ ಕಾರಣ ಎಂದು ನಾವು ಭಾವಿಸುತ್ತೇವೆ. ಆದರೆ, ಎಸಿಗಳನ್ನು ಸರಿಯಾಗಿ ನಿರ್ವಹಿಸದಿರುವುದು ಕೂಡ ಇಂತಹ ಆರೋಗ್ಯ ಸಮಸ್ಯೆಗಳಿಗೆ ಪ್ರಮುಖ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.
ಕಾಲಾನಂತರದಲ್ಲಿ ಎಸಿ ಫಿಲ್ಟರ್ಗಳು, ಡಕ್ಟ್ಗಳು ಮತ್ತು ಕಾಯಿಲ್ಗಳಲ್ಲಿ ಬೂಸ್ಟು (mould), ಧೂಳು ಮತ್ತು ತೇವಾಂಶವು ಸಂಗ್ರಹಗೊಳ್ಳಬಹುದು.
ಅದರಲ್ಲೂ ವಿಶೇಷವಾಗಿ ದೇಶದ ತೀವ್ರವಾದ ಶಾಖ ಮತ್ತು ಆರ್ದ್ರತೆಯಿಂದ (humidity) ಕೂಡಿರುವ ಬೇಸಿಗೆಯ ತಿಂಗಳುಗಳಲ್ಲಿ ಇದು ಹೆಚ್ಚಾಗಿ ಸಂಭವಿಸುತ್ತದೆ ಎಂದು ಎಸಿ ನಿರ್ವಹಣಾ ಸೇವೆಗಳನ್ನು ಒದಗಿಸುವ ಹೋಂ ಸರ್ವೀಸಸ್ ಪ್ಲಾಟ್ಫಾರ್ಮ್ ‘ಜಸ್ಟ್ಲೈಫ್’ ತಿಳಿಸಿದೆ. ಸುಮಾರು ಶೇಕಡಾ 30 ರಷ್ಟು ಮನೆಗಳ ಎಸಿ ಸಿಸ್ಟಮ್ಗಳ ಒಳಗೆ ಬೂಸ್ಟು ಸಂಗ್ರಹವಾಗುವ ಸಾಧ್ಯತೆಯಿದೆ ಎಂದು ಅದು ಸುಳಿವು ನೀಡಿದೆ. ಅಲ್ಲದೆ, ಬೇಸಿಗೆಯಲ್ಲಿ ಬೂಸ್ಟು ಸಂಗ್ರಹಣೆಗೆ ಸಂಬಂಧಿಸಿದ ವಿಚಾರಣೆಗಳಲ್ಲಿ ಶೇಕಡಾ 70 ರಷ್ಟು ಹೆಚ್ಚಳವಾಗಿದೆ ಎಂದು ಜಸ್ಟ್ಲೈಫ್ ವರದಿ ಮಾಡಿದೆ.
ಎಸಿ ವ್ಯವಸ್ಥೆಗಳಲ್ಲಿನ ಅಶುಚಿತ್ವವು ಕೆಮ್ಮು, ಅಲರ್ಜಿ, ಮೂಗು ಕಟ್ಟುವುದು, ತಲೆನೋವು ಮತ್ತು ಉಸಿರಾಟದ ತೊಂದರೆಗಳನ್ನು ಉಲ್ಬಣಗೊಳಿಸಬಹುದು ಎಂದು ಅಬುಧಾಬಿಯ ಮೆಡಿಯೋರ್ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ತಜ್ಞರಾದ ಡಾ. ಶೆರಿನ್ ಹುಸೇನ್ ಹೇಳಿದ್ದಾರೆ. ಇದು ಮಕ್ಕಳು, ವೃದ್ಧರು, ಅಸ್ತಮಾ ಮತ್ತು ಅಲರ್ಜಿ ರೋಗಿಗಳು ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವವರ ಮೇಲೆ ಹೆಚ್ಚಿನ ಪರಿಣಾಮ ಬೀರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬೇಸಿಗೆಯಲ್ಲಿ ಎಸಿ ಬಳಕೆ ಹೆಚ್ಚಾಗುವುದರಿಂದ, ಅವುಗಳನ್ನು ಸರ್ವಿಸ್ ಮಾಡಿಸಬೇಕು ಮತ್ತು ಫಿಲ್ಟರ್ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು ಅಥವಾ ಬದಲಾಯಿಸಬೇಕು ಎಂದು ತಜ್ಞರು ಶಿಫಾರಸು ಮಾಡುತ್ತಾರೆ.
















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು
ಡೆಲಿವರಿ ಡ್ರೈವರ್ಗಳಿಗೆ ಹವಾನಿಯಂತ್ರಿತ ವಿಶ್ರಾಂತಿ ಕೇಂದ್ರಗಳು – ದುಬೈ ಆರ್ಟಿಎ ಕೊಡುಗೆ
ಪಶ್ಚಿಮ ಏಷ್ಯಾದಲ್ಲಿ ಮತ್ತೆ ಯುದ್ಧದ ಭೀತಿ: ಬಹ್ರೇನ್ಗೆ ಹೊರಡಬೇಕಿದ್ದ ವಿಮಾನಗಳು ರದ್ದು
ಕುವೈತ್ ವಿಮಾನ ನಿಲ್ದಾಣದ ಮೇಲೆ ಮತ್ತೆ ಡ್ರೋನ್ ದಾಳಿ- ವಿಮಾನ ಸೇವೆಗಳು ತಾತ್ಕಾಲಿಕ ಸ್ಥಗಿತ
ಟಿಕ್ಟಾಕ್ನಲ್ಲಿನ ವೈಶಮ್ಯ : ಶಾರ್ಜಾದಲ್ಲಿ ಭಾರತೀಯನ ಹತ್ಯೆ