ಪುತ್ತೂರು: “ಇಸ್ಲಾಂ ಧರ್ಮವು ಮುಸ್ಲಿಮೇತರ ಸಮುದಾಯವನ್ನು ದ್ವೇಷಿಸುವುದನ್ನಾಗಲಿ ಅಥವಾ ವಿರೋಧಿಸುವುದನ್ನಾಗಲಿ ಎಂದೂ ಕಲಿಸಿಲ್ಲ. ಸರ್ವ ಜನರ ಹಿತವನ್ನು ಬಯಸುವ ಈ ಧರ್ಮವು ಎಲ್ಲರೊಂದಿಗೆ ಕರುಣೆ ಮತ್ತು ಪ್ರೀತಿಯಿಂದ ವರ್ತಿಸುವುದನ್ನು ಮಾತ್ರ ಬೋಧಿಸುತ್ತದೆ,” ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಹೇಳಿದ್ದಾರೆ.
ಎಸ್.ವೈ.ಎಸ್. ಕರ್ನಾಟಕ ವತಿಯಿಂದ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಆಯೋಜಿಸಲಾಗಿದ್ದ “ಮಾದರಿ ಮದುವೆ”ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣಗಾರರಾಗಿ ಅವರು ಮಾತನಾಡುತ್ತಿದ್ದರು.
ಪ್ರತಿರೋಧ ಅನಿವಾರ್ಯವಾಗಿತ್ತು: ಇಸ್ಲಾಮಿನ ಇತಿಹಾಸದಲ್ಲಿ ಮುಸ್ಲಿಮರು ಎಂದೂ ತಾವಾಗಿ ಯುದ್ಧಕ್ಕಿಳಿದಿಲ್ಲ. ಸತ್ಯನಿಷೇಧಿಗಳು ಮುಸ್ಲಿಮರ ನಿರ್ಮೂಲನೆ, ಪವಿತ್ರ ಕಅಬಾ ಮತ್ತು ಆಸ್ತಿಪಾಸ್ತಿಗಳ ನಾಶಕ್ಕೆ ಮುಂದಾದಾಗ, ಆತ್ಮರಕ್ಷಣೆಗಾಗಿ ಅನಿವಾರ್ಯವಾಗಿ ಪ್ರತಿರೋಧ ಒಡ್ಡಬೇಕಾಯಿತು ಎಂದು ಅವರು ಸ್ಪಷ್ಟಪಡಿಸಿದರು.
ತಪ್ಪು ಕಲ್ಪನೆಗಳ ನಿವಾರಣೆ: ಇಸ್ಲಾಂ ಧರ್ಮವು ಖಡ್ಗದಿಂದ ಹರಡಿದೆ ಎಂಬುದು ಕೇವಲ ಅಪಪ್ರಚಾರವಾಗಿದೆ. ದಾರಿ ತಪ್ಪಿದ ಕೆಲವು ಗುಂಪುಗಳ ನಡವಳಿಕೆಯಿಂದ ಇಡೀ ಧರ್ಮದ ಬಗ್ಗೆ ಜಾಗತಿಕ ಮಟ್ಟದಲ್ಲಿ ತಪ್ಪು ಕಲ್ಪನೆ ಮೂಡುತ್ತಿದೆ. ಈ ಸತ್ಯವನ್ನು ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದವರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಅವರು ಸಲಹೆ ನೀಡಿದರು.
ಮಾನವೀಯ ಮೌಲ್ಯಗಳ ಕರೆ:ಮನುಷ್ಯರೆಲ್ಲರೂ ದ್ವೇಷವನ್ನು ಮರೆತು ಪರಸ್ಪರ ಪ್ರೀತಿ ಮತ್ತು ವಿಶ್ವಾಸದೊಂದಿಗೆ ಸಹಬಾಳ್ವೆ ನಡೆಸಬೇಕು. ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಮೂಲಕ ಶಾಂತಿಯುತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಅವರು ಕರೆ ನೀಡಿದರು.
ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಸಯ್ಯಿದ್ ಮಲ್ಜಅ್ ತಂಙಳ್,ಪೇರೋಡ್ ಉಸ್ತಾದ್, ತೋಕೆ ಉಸ್ತಾದ್, ಡಾ. ಝೈನಿ ಉಸ್ತಾದ್, ಸ್ವಾಗತ ಸಮಿತಿ ಅಧ್ಯಕ್ಷ ಯೂಸುಫ್ ಗೌಸಿಯಾ ಸಾಜ, ಪದ್ಮಶ್ರೀ ಡಾ. ಹರೇಕಳ ಹಾಜಬ್ಬ, ಜಿ.ಎಂ. ಉಸ್ತಾದ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಎಲ್.ಟಿ. ಅಬ್ದುರ್ರಝಾಖ್ ಹಾಜಿ, ಎಂ.ಎಸ್. ಮುಹಮ್ಮದ್ ಸುನ್ನೀ ಫೈಝಿ ಸೇರಿದಂತೆ ಹಲವಾರು ಧಾರ್ಮಿಕ ಮತ್ತು ಸಾಮಾಜಿಕ ಮುಖಂಡರು ಉಪಸ್ಥಿತರಿದ್ದರು.
















ಇನ್ನಷ್ಟು ಸುದ್ದಿಗಳು
ಶರಫುಲ್ ಉಲಮಾ ಉಸ್ತಾದ್ 7ನೇ ವಾರ್ಷಿಕ ಅನುಸ್ಮರಣೆ – ಮೇ 13, 14 ರಂದು ಪ್ರಾರ್ಥನಾ ಸಂಗಮ
“ನಿಮ್ಮವರೇ ಹೀಗೆ” – ಕೆಎಸ್ಆರ್ಟಿಸಿ ನಿರ್ವಾಹಕನ ನಡತೆಗೆ ಶಿಕ್ಷಕಿಯ ಮನದ ಅಳಲು
ಸಲಪಿ ಸಿದ್ಧಾಂತದ ಮುಖವಾಡ ಕಳಚಿದ ಕರಾವಳಿ: ಸೈದ್ಧಾಂತಿಕ ಸೋಲನ್ನು ಮುಚ್ಚಿಡಲು ದೈಹಿಕ ಹಲ್ಲೆಗೆ ಮುಂದಾದರೇ ಸಲಪಿಗಳು?
ತೈಲ ಬಿಕ್ಕಟ್ಟು: ‘ವರ್ಕ್ ಫ್ರಮ್ ಹೋಮ್’ ಆರಂಭಿಸಿ; ಚಿನ್ನ ಖರೀದಿಸಬೇಡಿ – ಪ್ರಧಾನಿ ಮೋದಿ ಮನವಿ
ತಮಿಳುನಾಡಿನಲ್ಲಿ ಹೊಸ ಇತಿಹಾಸ: ಮುಖ್ಯಮಂತ್ರಿಯಾಗಿ ‘ದಳಪತಿ’ ವಿಜಯ್ ಅಧಿಕಾರ ಸ್ವೀಕಾರ
ಡಿಕೆಎಸ್ಸಿ ರಿಯಾದ್ ಝೋನಲ್ ಸಮಿತಿಗೆ ನೂತನ ಸಾರಥ್ಯ- ಅಧ್ಯಕ್ಷರಾಗಿ ದಾವೂದ್ ಹಕೀಂ ಕಂದಕ್ ಆಯ್ಕೆ
ಎಸ್ಸೆಸ್ಸೆಫ್ 14ನೇ ಆವೃತ್ತಿಯ ಸಾಹಿತ್ಯೋತ್ಸವ: ರಾಜ್ಯ ನಿರ್ವಹಣಾ ಸಮಿತಿ ಅಸ್ತಿತ್ವಕ್ಕೆ
ವಿಜಯ್ ಮುಖ್ಯಮಂತ್ರಿ; ನಾಳೆ ಪ್ರಮಾಣವಚನ ಸ್ವೀಕಾರ- 120 ಶಾಸಕರ ಬೆಂಬಲ ಖಚಿತಪಡಿಸಿದ TVK
ಹಂತಾವೈರಸ್ ಭೀತಿ; ಹೆಚ್ಚಿನ ಪ್ರಕರಣಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ- ಪ್ರವಾಸಿ ಹಡಗುಗಳ ಮೇಲೆ ತೀವ್ರ ನಿಗಾ
ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ- ಕಲ್ಲಂಗಡಿ ಹಣ್ಣಿನಲ್ಲಿ ಇಲಿ ವಿಷ ಹೇಗೆ ಬಂತು?