janadhvani

Kannada Online News Paper

ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ

ಪುತ್ತೂರು: ಎಸ್.ವೈ.ಎಸ್ (SYS) ರಾಜ್ಯ ಸಮಿತಿಯ ವತಿಯಿಂದ ಆಯೋಜಿಸಲಾದ ‘ಮಾದರಿ ಮದುವೆ’ ಜನ ಜಾಗೃತಿ ಆಂದೋಲನದ ಮಹತ್ವಪೂರ್ಣ ಸಮಾರೋಪ ಸಮಾರಂಭವು ಮೇ 2 ರಂದು ಶನಿವಾರ ಸಂಜೆ 4:00 ಗಂಟೆಗೆ ಪುತ್ತೂರಿನಲ್ಲಿ ಅದ್ಧೂರಿಯಾಗಿ ನಡೆಯಲಿದೆ.
ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕರ್ ಮುಸ್ಲಿಯಾರ್ (ಎ.ಪಿ. ಉಸ್ತಾದ್) ರವರ ಘನ ಸಾನಿಧ್ಯದಲ್ಲಿ ಈ ಸಮಾರಂಭವು ಜರುಗಲಿದೆ.

ಈ ಐತಿಹಾಸಿಕ ಸಮಾರೋಪ ಸಮಾರಂಭದ ವ್ಯಾಪಕ ಪ್ರಚಾರಾರ್ಥವಾಗಿ ಎಸ್.ವೈ.ಎಸ್ ದಕ್ಷಿಣ ಕನ್ನಡ ವೆಸ್ಟ್ ಜಿಲ್ಲಾ ಸಮಿತಿಯು ಜಿಲ್ಲಾದ್ಯಂತ ಬೃಹತ್ ‘ವಾಹನ ಸಂದೇಶ ಜಾಥಾ’ವನ್ನು ಹಮ್ಮಿಕೊಂಡಿದೆ.
25 ಕೇಂದ್ರಗಳಲ್ಲಿ ಸಂಚರಿಸಲಿರುವ ಜಾಥಾ:
ಎಸ್.ವೈ.ಎಸ್ ದ.ಕ. ವೆಸ್ಟ್ ಜಿಲ್ಲಾ ಸಮಿತಿಯ ಜಿಲ್ಲಾಧ್ಯಕ್ಷರಾದ ಮಹ್ಬೂಬ್ ಸಖಾಫಿ ಕಿನ್ಯ ರವರ ನೇತೃತ್ವದಲ್ಲಿ ಈ ವಾಹನ ಜಾಥಾವು ನಡೆಯಲಿದೆ. ಎಪ್ರಿಲ್ 28 ಮಂಗಳವಾರ ಮತ್ತು ಎಪ್ರಿಲ್ 29 ಬುಧವಾರದಂದು ಎರಡು ದಿನಗಳ ಕಾಲ ವೆಸ್ಟ್ ಜಿಲ್ಲಾ ವ್ಯಾಪ್ತಿಯ ಪ್ರಮುಖ 25 ಕೇಂದ್ರಗಳಲ್ಲಿ ಜಾಥಾವು ಸಂಚರಿಸಿ, ಸಮಾರೋಪ ಸಮಾರಂಭದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಿದೆ.
ಆಂದೋಲನದ ಯಶಸ್ಸಿಗೆ ಮತ್ತು ಸಮಾರೋಪ ಸಮಾರಂಭದ ಪೂರ್ವಭಾವಿ ಪ್ರಚಾರಕ್ಕಾಗಿ ಈ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಸ್.ವೈ.ಎಸ್ ದ.ಕ. ವೆಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿರಿ...