ದುಬೈ: ಸ್ನೇಹಿತರ ನಡುವಿನ ಗಲಾಟೆಯನ್ನು ಶಾಂತಗೊಳಿಸಲು ಹೋದ ಮಲಯಾಳಿ ಯುವಕನೋರ್ವ ದುಬೈನಲ್ಲಿ ಚೂರಿ ಇರಿತಕ್ಕೆ ಬಲಿಯಾಗಿರುವ ದಾರುಣ ಘಟನೆ ವರದಿಯಾಗಿದೆ.
ಕೋಝಿಕ್ಕೋಡ್ ಜಿಲ್ಲೆಯ ಚೆರುವಣ್ಣೂರು ಮಧುರ ಬಜಾರ್ ನಿವಾಸಿ, ನಜಾತ್ ಮಂಜಿಲ್ನ ಜಸೀಲ್ (32) ಮೃತಪಟ್ಟ ದುರ್ದೈವಿ. ಕಳೆದ ಮೂರು ವರ್ಷಗಳಿಂದ ದುಬೈನಲ್ಲಿ ಉದ್ಯೋಗದಲ್ಲಿದ್ದ ಇವರು, ತಾವು ವಾಸವಿದ್ದ ರೂಮಿನಲ್ಲಿ ಇಬ್ಬರು ಸ್ನೇಹಿತರ ನಡುವೆ ನಡೆಯುತ್ತಿದ್ದ ತೀವ್ರ ವಾಕ್ಸಮರವನ್ನು ತಡೆಯಲು ಮಧ್ಯಪ್ರವೇಶಿಸಿದ್ದರು. ಈ ಸಂದರ್ಭದಲ್ಲಿ ಸ್ನೇಹಿತನೊಬ್ಬ ಚೂರಿಯಿಂದ ಇರಿದಿದ್ದರಿಂದ ಜಸೀಲ್ ಅವರ ಕುತ್ತಿಗೆಗೆ ಗಂಭೀರ ಗಾಯವಾಗಿತ್ತು.
ವಿಷಯ ತಿಳಿದ ಕೂಡಲೇ ದುಬೈ ಪೊಲೀಸರು ಸ್ಥಳಕ್ಕೆ ಆಗಮಿಸಿ ಜಸೀಲ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರಾದರೂ, ಅತಿಯಾದ ರಕ್ತಸ್ರಾವದಿಂದಾಗಿ ಅವರು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಸದ್ಯ ಮೃತದೇಹವನ್ನು ದುಬೈನ ಅಲ್ ರಾಶಿದಿಯಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.















ಇನ್ನಷ್ಟು ಸುದ್ದಿಗಳು
ಹೊರ್ಮುಜ್ ದಿಗ್ಬಂಧನ: ‘ಎಡವಟ್ಟು ಮಾಡಬೇಡಿ’- ಅಮೆರಿಕಕ್ಕೆ ಸೌದಿ ಅರೇಬಿಯಾ ಎಚ್ಚರಿಕೆ
ಹಜ್ ಸೀಸನ್: ಮಕ್ಕಾ ಪ್ರವೇಶದ ಅನುಮತಿ ಪತ್ರ ವಿತರಣೆ ಆರಂಭ
ಗಲ್ಫ್ ವಲಯದಲ್ಲಿ ಶಾಂತಿಯ ಹೊಸ ಪರ್ವ – ಕದನ ವಿರಾಮ ನಿರ್ಧಾರಕ್ಕೆ ಜಿಸಿಸಿ ಪೂರ್ಣ ಬೆಂಬಲ
ಬಹ್ರೇನ್ ವೈಮಾನಿಕ ಮಾರ್ಗ ಮುಕ್ತ- ವಿಮಾನಯಾನ ಪುನಾರಂಭಕ್ಕೆ ಹಸಿರು ನಿಶಾನೆ
ದಾಳಿಯ ಭೀತಿ: ಸೌದಿ-ಬಹ್ರೇನ್ ‘ಕಾಸ್ವೇ’ ಬಂದ್- ಸಂಚಾರ ಸಂಪೂರ್ಣ ಸ್ಥಗಿತ
ಸೌದಿ ಅರೇಬಿಯಾ: ಇನ್ನೂ 69 ಹುದ್ದೆಗಳಲ್ಲಿ ಶೇ.100 ಸ್ವದೇಶೀಕರಣ ಜಾರಿ
ಸೌದಿ: ನಾಳೆಯಿಂದ ಭಾರಿ ಮಳೆ ಸಾಧ್ಯತೆ- ಹವಾಮಾನ ಇಲಾಖೆ ಎಚ್ಚರಿಕೆ
ಇರಾನ್ ದಾಳಿ; ವಿಶ್ವದ ಅತಿದೊಡ್ಡ ‘ಎಮಿರೇಟ್ಸ್ ಗ್ಲೋಬಲ್ ಅಲ್ಯೂಮಿನಿಯಂ’ ಕಾರ್ಯಾಚರಣೆ ಸ್ಥಗಿತ
ಹಜ್-ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಪವಿತ್ರ ಮಕ್ಕಾದಲ್ಲಿ ವಿಮಾನ ನಿಲ್ದಾಣ ನಿರ್ಮಾಣ
ಚಾಲನೆ ವೇಳೆ ತಿಂಡಿ ಮತ್ತು ಮೇಕಪ್ಗೆ ಬ್ರೇಕ್- ಸೌದಿ ಸಂಚಾರಿ ವಿಭಾಗದ ಕಟ್ಟುನಿಟ್ಟಿನ ಸೂಚನೆ