ನರಿಂಗಾನ: ಮಂಜನಾಡಿ ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ನ ಶಿಲ್ಪಿ, ಪ್ರಖ್ಯಾತ ವಿದ್ವಾಂಸ ಹಾಗೂ ಬಹುಮುಖ ಸಂಘಟನಾ ಚತುರರಾಗಿದ್ದ ಮರ್ಹೂಮ್ ಶೈಖುನಾ ಅಬ್ಬಾಸ್ ಮುಸ್ಲಿಯಾರ್ (ಶರಫುಲ್ ಉಲಮಾ) ರವರ 7ನೇ ವರ್ಷದ ಅನುಸ್ಮರಣಾ ಕಾರ್ಯಕ್ರಮವು ಇದೇ ಬರುವ ಮೇ 13 ಮತ್ತು 14 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.
ಶೈಖುನಾ ಉಸ್ತಾದ್ ರವರ ಆದರ್ಶಪ್ರಾಯ ಬದುಕು, ಶೈಕ್ಷಣಿಕ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಅವರು ನೀಡಿದ ಅಪಾರ ಕೊಡುಗೆಗಳನ್ನು ಹೊಸ ತಲೆಮಾರಿಗೆ ಪರಿಚಯಿಸುವುದು ಈ ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ. ಇದರೊಂದಿಗೆ ಸುನ್ನತ್ ಜಮಾಅತಿನ ಆದರ್ಶಗಳ ಪ್ರತಿಪಾದನೆ ಹಾಗೂ ದ್ಸಿಕ್ರ್, ಸ್ವಲಾತ್, ಬುರ್ದಾ ಮಜ್ಲಿಸ್ಗಳ ಮೂಲಕ ಆಧ್ಯಾತ್ಮಿಕ ಚೈತನ್ಯವನ್ನು ಮೂಡಿಸುವ ಉದ್ದೇಶವನ್ನು ಹೊಂದಲಾಗಿದೆ.
ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕಾಗಿ ಎಪ್ರಿಲ್ 6 ರಂದು ಸಂಸ್ಥೆಯ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಅವರ ನೇತೃತ್ವದಲ್ಲಿ ಸಮಾಲೋಚನಾ ಸಭೆ ನಡೆಯಿತು. ಈ ಸಭೆಯಲ್ಲಿ ಕಾರ್ಯಕ್ರಮದ ನಿರ್ವಹಣೆಗಾಗಿ ಪ್ರತ್ಯೇಕ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಚೆಯರ್ಮಾನ್:ಹಾಜಿ ಎನ್. ಎಸ್. ಕರೀಂ
ಕನ್ವೀನರ್:ಕೆ. ಎಂ. ಕೆ. ಮಂಜನಾಡಿ
ಕೋಶಾಧಿಕಾರಿ: ಮುಹಮ್ಮದ್ ಹಾಜಿ ಬೋಳಿಯಾರ್
ವಿವಿಧ ಉಪಸಮಿತಿಗಳ ಉಸ್ತುವಾರಿಗಳು:
ಫೈನಾನ್ಸ್ ಸಮಿತಿ: ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ, ಮಹೀದ್ ಎಂ. ಹೆಚ್. ಮರಿಕ್ಕಳ, ಕೆ. ಪಿ. ಅಬ್ದುಲ್ಲಾ ಪೆರಡೆ (ಪುತ್ತುಞಿ).
ಆಹಾರ ವಿಭಾಗ:ಮುಹಮ್ಮದ್ ಮದನಿ ಸಾಮಣಿಗೆ, ಪುತ್ತು ಮೋರ್ಲ, ಅಶ್ರಫ್ ನೆಕ್ಕರೆ.
ಸೌಂಡ್ಸ್ & ಲೈಟಿಂಗ್ಸ್: ಶೌಕತ್ ಹಾಜಿ ದೇರಳಕಟ್ಟೆ.
ಸಂದಲ್ ಸಮಿತಿ: ಬಾವುಚ್ಚ ಅನ್ಸಾರ್ ನಗರ, ಲತೀಫ್ ಸುಬ್ಬಗೋಳಿ, ಹನೀಫ್ ಮೀನಂಕೋಡಿ.
ಪ್ರಚಾರ ಸಮಿತಿ:ಪಡಿಕ್ಕಲ್ ಅಬೂಬಕರ್ ಮದನಿ, ಅಬ್ದುರ್ರಹ್ಮಾನ್ ಮದನಿ ನೆಕ್ಕರೆ, ಎಂ. ಎಂ. ಕೆ. ಮುಡಿಪು.
ಸ್ವಯಂಸೇವಕ ದಳ:ಆಸಿಫ್ ಅನ್ಸಾರ್ ನಗರ, ಬಶೀರ್ ಮೋರ್ಲ.
ಸಭೆಯಲ್ಲಿ ಅಬೂಸ್ವಾಲಿಹ್ ಅಝ್ಹರಿ ಸ್ವಾಗತಿಸಿ, ಅಮಾನ್ ಮರ್ಝೂಖಿ ವಂದಿಸಿದರು. ನಾಡಿನ ವಿದ್ವತ್ ಪುರುಷರು ಹಾಗೂ ಸಾದಾತುಗಳ ನೇತೃತ್ವದಲ್ಲಿ ನಡೆಯಲಿರುವ ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳುವಂತೆ ಸಮಿತಿಯು ವಿನಂತಿಸಿದೆ.
















ಇನ್ನಷ್ಟು ಸುದ್ದಿಗಳು
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವೈದ್ಯಕೀಯ ಕ್ಷೇತ್ರಕ್ಕೆ ಗಂಭೀರ ಸವಾಲು : ಎಸ್ಸೆಸ್ಸೆಫ್ ಬೆಂಗಳೂರು
ಕಾನೂನುಬದ್ಧ ಬಲಿದಾನಕ್ಕೆ ಪೊಲೀಸ್ ಸಂರಕ್ಷಣೆ ನೀಡಿ- ಗೃಹ ಸಚಿವರಿಗೆ ಮೌಲಾನಾ ಶಾಫಿ ಸಅದಿ ಮನವಿ
‘ನನ್ನನ್ನು ತಿಹಾರ್ ಜೈಲಿಗೆ ಹಾಕಬಹುದು’; ಆತಂಕ ಹಂಚಿಕೊಂಡ ಕಾಕ್ರೋಚ್ ಜನತಾ ಪಕ್ಷದ ಸಂಸ್ಥಾಪಕ ಅಭಿಜೀತ್ ದಿಪ್ಕೆ
ವೈದ್ಯರ ನಿರ್ಲಕ್ಷ್ಯದಿಂದ ಯುವಕ ಮೃತ್ಯು: ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಶಾಫಿ ಸಅದಿ ಅವರಿಂದ ಸಚಿವರಿಗೆ ಮನವಿ
ಉಪ್ಪಿನಂಗಡಿ: ಕಂಪ್ಯೂಟರ್ ಕ್ಲಾಸ್ಗೆ ತೆರಳಿದ್ದ 13 ವರ್ಷದ ಬಾಲಕ ನಾಪತ್ತೆ
ಗಲ್ಫ್ ನಾಯಕರ ವಿನಂತಿಗೆ ಮನ್ನಣೆ ; ಇರಾನ್ ಮೇಲಿನ ದಾಳಿ ತಾತ್ಕಾಲಿಕ ರದ್ದು- ಟ್ರಂಪ್
ಮುಂದಿನ 6 ತಿಂಗಳುಗಳು ಅತ್ಯಂತ ಕಠಿಣ, ಹಲವರಿಗೆ ಉದ್ಯೋಗ ನಷ್ಟ- ಟೆಕ್ಸ್ಟೈಲ್ ಸಂಸ್ಥಾಪಕನ ‘ಎಕ್ಸ್’ ಪೋಸ್ಟ್ ವೈರಲ್
ದುಲ್ ಹಜ್ಜ್ ಚಂದ್ರ ದರ್ಶನ : ಗಲ್ಫ್ ರಾಷ್ಟ್ರಗಳಲ್ಲಿ ಮೇ.27 ರಂದು ಈದುಲ್ ಅದ್’ಹಾ
ದುಲ್ ಹಿಜ್ಜಾ ಚಂದ್ರದರ್ಶನವಾಗಿಲ್ಲ: ಮೇ 28 ರಂದು ಬಕ್ರೀದ್- ಖಾಝಿಗಳಿಂದ ಘೋಷಣೆ
ರಾಜಧಾನಿ ಎಕ್ಸ್ಪ್ರೆಸ್ ರೈಲಿನಲ್ಲಿ ಭೀಕರ ಅಗ್ನಿ ಅವಘಡ- ಅದೃಷ್ಟವಶಾತ್ ಪ್ರಯಾಣಿಕರು ಪಾರು..!