ಮಂಗಳೂರು: ಕಳೆದ 12 ವರ್ಷಗಳಿಂದೀಚೆಗೆ ಕರ್ನಾಟಕದ ಸುನ್ನೀ ಸಂಘಟನೆಯ ದೊಡ್ಡ ಕನಸಾಗಿರುವ ಅಡ್ಯಾರ್ ಕಣ್ಣೂರು ಸುನ್ನೀ ಆಸ್ಥಾನ ಕೇಂದ್ರವು ಆರ್ಥಿಕ ಅಡಚಣೆಯಿಂದ ನಿರಂತರ ಮೊಟಕುಗೊಳ್ಳುತ್ತಿದ್ದ ಕಾಮಗಾರಿಯಿಂದ ಕನಸು ನನಸಾಗದೇ ಬಾಕಿ ಉಳಿದಿದೆ.
ಈ ಕೇಂದ್ರದ ನಿರ್ಮಾಣಕ್ಕಾಗಿ ಕೆ.ಸಿ.ಎಫ್, ಮುಸ್ಲಿಂ ಜಮಾಅತ್, ಎಸ್ ವೈ ಎಸ್ ,ಎಸ್ ಎಸ್ ಎಫ್ ,ಎಸ್ ಎಮ್ ಒ, ಎಸ್ ಜೆ ಎಮ್ ಕಾರ್ಯಕರ್ತರು ಸಾಕಷ್ಟು ತಮ್ಮ ಬೆವರು ಸುರಿಸಿದ್ದಾರೆ.
ಇಂದು ಆಸ್ಥಾನ ಕೇಂದ್ರಕ್ಕೆ ಮಾಜಿ ವಿಧಾನ ಪರಿಷತ್ ಸದಸ್ಯರಾದ ಬಿ ಎಂ ಫಾರೂಕ್ ಹಾಗೂ ಮಾಜಿ ಶಾಸಕರಾದ ಮೊಯ್ದೀನ್ ಬಾವಾ ಹಾಗೂ ಶೌಕತ್ ಅಲಿ ಆಗಮಿಸಿ ಅಡ್ಯಾರ್ ಮರ್ಕಝ್ ಇಸ್ಲಾಮಿ ಕಟ್ಟಡವನ್ನು ಪರಿಶೀಲಿಸಿದರು.
ಸಹೋದರ ಮರ್ಹೂಂ ಮುಮ್ತಾಜ್ ಅಲಿಯನ್ನು ನೆನಪಿಸಿಕೊಂಡು ಭಾವುಕರಾದ ಬಿಎಂ ಫಾರೂಕ್ , ಮೊಟಕುಗೊಂಡಿರುವ ಕಾಮಗಾರಿಯ ಇನ್ನುಳಿದ 29ಸಾವಿರ ಚದರ ಅಡಿಗೆ ಬೇಕಾದ ಟೈಲ್ಸ್ , ಗ್ರಾನೈಟ್, ಎಕ್ಸ್ಟೀರಿಯಲ್ ಗ್ಲಾಸ್ ಎಲ್ಲವೂ ನೀಡುವ ಭರವಸೆ ನೀಡಿ , ಸ್ಥಳದಿಂದಲೇ ಬೇಕಾದವರನ್ನು ಸಂಪರ್ಕಿಸಿ ನಾಳೆಯಿಂದಲೇ ಕಾಮಗಾರಿ ಚಾಲನೆ ನೀಡಲು ಹೇಳಿದರು.
ಇನ್ನುಳಿದ ಕಾಮಗಾರಿಯನ್ನು ಬಿಎಂ ಫಾರೂಕ್ ಸಹೋದರರು ಪೂರ್ಣಗೊಳೀಸುವ ಭರವಸೆ ನೀಡಿದ್ದಾರೆ. ಈ ಸಂದರ್ಭ ಸಹೋದರ ಮರ್ಹೂಂ ಮುಮ್ತಾಜ್ ಅಲಿಗಾಗಿ , ಮಗ್ಫಿರತ್ಗಾಗಿ ಎಲ್ಲರೂ ಪ್ರಾರ್ಥಿಸುವಂತೆ ಭಿನ್ನವಿಸಿಕೊಂಡಿದ್ದಾರೆ.
ವಕ್ಫ್ ಕೌನ್ಸಿಲ್ ಹಾಗೂ ಮುಸ್ಲಿಮ್ ಜಮಾಆತ್ ಉಪಾಧ್ಯಕ್ಷರಾದ ಮೌಲಾನಾ ಶಾಫಿ ಸಅದಿಯವರ ವಿನಂತಿ ಮೇರೆಗೆ ಆಸ್ಥಾನ ಕೇಂದ್ರಕ್ಕೆ ಭೇಟಿ ನೀಡಿದ ಬಿ ಎಂ ಫಾರೂಕ್ ಜೊತೆಗೆ ಸಹೋದರರಾದ ಮಾಜಿ ಶಾಸಕ ಮೊಯ್ದೀನ್ ಬಾವಾ ,ಶೌಕತ್ ಅಲಿ ಹಾಜರಿದ್ದರು.
ಜೊತೆಗೆ ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ಹಾಗೂ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಮೌಲಾನಾ ಶಾಫಿ ಸಅದಿ ಬೆಂಗಳೂರು, ಎಸ್ ವೈ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ ಮೋಂಟುಗೋಳಿ , ಮುಸ್ಲಿಂ ಜಮಾಅತ್ ರಾಜ್ಯ ನಾಯಕರಾದ ಅಶ್ರಫ್ ಸಅದಿ ಮಲ್ಲೂರು , ಕೆ ಸಿ ಎಫ್ ನಾಯಕರಾದ ಕಮರುದ್ದೀನ್ ಗೂಡಿನಬಳಿ, ಬಶೀರ್ ತಲಪಾಡಿ,ಅಬ್ದುಲ್ ಹಮೀದ್ ಅರೋಮ್ಯಾಕ್ಸ್ ಉಳ್ಳಾಲ, ರಫೀಕ್ ಸೂರಿಂಜೆ, ಅಶ್ರಫ್ ಕಿನಾರಾ, ಅಬ್ದುರ್ರಹ್ಮಾನ್ ಮೊಗರ್ಪನೆ ಉಪಸ್ಥಿತರಿದ್ದರು.

















ಇನ್ನಷ್ಟು ಸುದ್ದಿಗಳು
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
SჄS ಬೆಳ್ತಂಗಡಿ ಝೋನ್: ಸಾಂತ್ವನ ಫಂಡ್ ಹಸ್ತಾಂತರ
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಮರು ಅರ್ಜಿ ಕಡ್ಡಾಯ- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಮುಂದಿನ 24 ಗಂಟೆಗಳಲ್ಲಿ ಯು.ಎಸ್-ಇರಾನ್ ಶಾಂತಿ ಒಪ್ಪಂದ ಅಂತಿಮ: ಪಾಕ್ ಪ್ರಧಾನಿ ಶಹಬಾಝ್ ಷರೀಫ್
ಮೂವರು ಭಾರತೀಯ ನಾವಿಕರ ಸಾವು: ಯು.ಎಸ್ ವಿರುದ್ಧ ವಿದೇಶಾಂಗ ಸಚಿವ ಜೈಶಂಕರ್ ಆಕ್ರೋಶ
ಜಿದ್ದಾದಲ್ಲಿ ಅಕ್ರಮ ಸಿಹಿತಿಂಡಿ ತಯಾರಿಕಾ ಘಟಕಕ್ಕೆ ಬೀಗ; 20 ಟನ್ ಕೊಳೆತ ಆಹಾರ ಪದಾರ್ಥಗಳ ನಾಶ
‘ಇಸ್ಲಾಂ ಸ್ವೀಕರಿಸಿದ್ದು ನನ್ನ ಸ್ವಂತ ಇಚ್ಛೆಯಿಂದ’ ; ಲವ್ ಜಿಹಾದ್ ಆರೋಪವನ್ನು ತಳ್ಳಿಹಾಕಿದ ಆಯುಷ್ ಮಲಿಕ್ (ಮುಹಮ್ಮದ್ ಅಲಿ)