ಜಿದ್ದಾ: ಸೌದಿ ಅರೇಬಿಯಾದ ಖಮೀಸ್ ಮುಶೈತ್ ನಲ್ಲಿ ಹೃದಯಾಘಾತದಿಂದ ನಿಧನರಾದ ಉತ್ತರ ಪ್ರದೇಶ ಜೋನ್ಪುರ್ ನಿವಾಸಿ ಕಲೀಂ ಅಹ್ಮದ್ ಎಂಬವರ ಮೃದೇಹವನ್ನು ಐಸಿಎಫ್ ವೆಲ್ಫೇರ್ ಕಾರ್ಯಕರ್ತರ ಸಹಾಯದಿಂದ ದಫನ ಮಾಡಲಾಯಿತು. ಕಳೆದ ಒಕ್ಟೋಬರ್ 5 ರಂದು ಮರಣ ಹೊಂದಿದ ಅವರ ಮೃತದೇಹ 22 ದಿನಗಳ ಕಾಲ ಶವಾಗಾರದಲ್ಲಿ ಇಡಲಾಗಿತ್ತು. ಮೃತದೇಹದ ಕುರಿತು ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಐಸಿಎಫ್ ವೆಲ್ಫೇರ್ & ಸರ್ವೀಸ್ ನಾಯಕರು ತಕ್ಷಣ ಸ್ಪಂದಿಸಿ ಅಗತ್ಯ ದಾಖಲೆಗಳನ್ನು ಸರಿಪಡಿಸಿ ಕಳೆದ ದಿನ ತಸ್ಲೀಸ್ ಬಲಡದಿಯ ದಫನ ಭೂಮಿಯಲ್ಲಿ ಅಂತ್ಯಕ್ರಿಯೆಗಳನ್ನು ನಿರ್ವಹಿಸಲಾಯಿತು. ಐಸಿಎಫ್ ನಾಯಕರು, ಕಾರ್ಯಕರ್ತರು ಮತ್ತು ಬಂಧು ಮಿತ್ರಾದಿಗಳು ಪಾಲ್ಗೊಂಡಿದ್ದರು.
ಎಕ್ಸಿಟ್ ನಲ್ಲಿ ಊರಿಗೆ ತೆರಳಿದ್ದ ಕಲೀಂ ಅಹ್ಮದ್ 3 ವರ್ಷ ಮುಂಚೆ ಸೌದಿಗೆ ಮತ್ತೆ ಮರಳಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಕಲೀಂ ಪತ್ನಿ ನಸೀಮಾ ಮತ್ತು ಮಕ್ಕಳಾದ ಉಮ್ಮು ಕುಲ್ಸೂಮ್, ಝೀನತ್ ಮತ್ತು ಮುಹಮ್ಮದ್ ಕಫೀಲ್ ಮತ್ತು ಬಂಧು ಬಳಗವನ್ನು ಅಗಲಿದ್ದಾರೆ.
ಖಮೀಸ್ ಮುಶೈತ್ ನಲ್ಲಿ ಹಕೀಮ್ ಅಶ್ರಫ್, ನಿಯಾಸ್ ಸಿ.ಕೆ, ಮುಜೀಬ್ ಕರ್ನಾಟಕ ಮತ್ತು ಶಕೀಲ್ ಯು.ಪಿ ಎಂಬವರೂ ಜಿದ್ದಾದಲ್ಲಿ ಎಂಬಸ್ಸಿ ಸಂಬಂಧಿತ ಕಾರ್ಯಗಳಿಗೆ ಐಸಿಎಫ್ ವೆಸ್ಟ್ ವೆಲ್ಫೇರ್ & ಸರ್ವೀಸ್ ಸೆಕ್ರೆಟರಿ ಅಬೂ ಮಿಸ್ಬಾಹ್ ಐಕಪ್ಪೆಡಿ, ಜಿದ್ದಾ ರೀಜನಲ್ ವೆಲ್ಫೇರ್ & ಸರ್ವಿಸ್ ಸೆಕ್ರೆಟರಿ ಹನೀಫ್ ಬೇರ್ಕ, ಮುಹಮ್ಮದ್ ಸಖಾಫಿ ಉಗ್ರಪುರಂ ಮುಂತಾದವರು ಅಂತ್ಯ ಕ್ರಿಯೆಗಳಿಗೆ ನೇತೃತ್ವ ನೀಡಿದರು.
















ಇನ್ನಷ್ಟು ಸುದ್ದಿಗಳು
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ