ಜಿದ್ದಾ: ಸೌದಿ ಅರೇಬಿಯಾದ ಖಮೀಸ್ ಮುಶೈತ್ ನಲ್ಲಿ ಹೃದಯಾಘಾತದಿಂದ ನಿಧನರಾದ ಉತ್ತರ ಪ್ರದೇಶ ಜೋನ್ಪುರ್ ನಿವಾಸಿ ಕಲೀಂ ಅಹ್ಮದ್ ಎಂಬವರ ಮೃದೇಹವನ್ನು ಐಸಿಎಫ್ ವೆಲ್ಫೇರ್ ಕಾರ್ಯಕರ್ತರ ಸಹಾಯದಿಂದ ದಫನ ಮಾಡಲಾಯಿತು. ಕಳೆದ ಒಕ್ಟೋಬರ್ 5 ರಂದು ಮರಣ ಹೊಂದಿದ ಅವರ ಮೃತದೇಹ 22 ದಿನಗಳ ಕಾಲ ಶವಾಗಾರದಲ್ಲಿ ಇಡಲಾಗಿತ್ತು. ಮೃತದೇಹದ ಕುರಿತು ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಐಸಿಎಫ್ ವೆಲ್ಫೇರ್ & ಸರ್ವೀಸ್ ನಾಯಕರು ತಕ್ಷಣ ಸ್ಪಂದಿಸಿ ಅಗತ್ಯ ದಾಖಲೆಗಳನ್ನು ಸರಿಪಡಿಸಿ ಕಳೆದ ದಿನ ತಸ್ಲೀಸ್ ಬಲಡದಿಯ ದಫನ ಭೂಮಿಯಲ್ಲಿ ಅಂತ್ಯಕ್ರಿಯೆಗಳನ್ನು ನಿರ್ವಹಿಸಲಾಯಿತು. ಐಸಿಎಫ್ ನಾಯಕರು, ಕಾರ್ಯಕರ್ತರು ಮತ್ತು ಬಂಧು ಮಿತ್ರಾದಿಗಳು ಪಾಲ್ಗೊಂಡಿದ್ದರು.
ಎಕ್ಸಿಟ್ ನಲ್ಲಿ ಊರಿಗೆ ತೆರಳಿದ್ದ ಕಲೀಂ ಅಹ್ಮದ್ 3 ವರ್ಷ ಮುಂಚೆ ಸೌದಿಗೆ ಮತ್ತೆ ಮರಳಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಕಲೀಂ ಪತ್ನಿ ನಸೀಮಾ ಮತ್ತು ಮಕ್ಕಳಾದ ಉಮ್ಮು ಕುಲ್ಸೂಮ್, ಝೀನತ್ ಮತ್ತು ಮುಹಮ್ಮದ್ ಕಫೀಲ್ ಮತ್ತು ಬಂಧು ಬಳಗವನ್ನು ಅಗಲಿದ್ದಾರೆ.
ಖಮೀಸ್ ಮುಶೈತ್ ನಲ್ಲಿ ಹಕೀಮ್ ಅಶ್ರಫ್, ನಿಯಾಸ್ ಸಿ.ಕೆ, ಮುಜೀಬ್ ಕರ್ನಾಟಕ ಮತ್ತು ಶಕೀಲ್ ಯು.ಪಿ ಎಂಬವರೂ ಜಿದ್ದಾದಲ್ಲಿ ಎಂಬಸ್ಸಿ ಸಂಬಂಧಿತ ಕಾರ್ಯಗಳಿಗೆ ಐಸಿಎಫ್ ವೆಸ್ಟ್ ವೆಲ್ಫೇರ್ & ಸರ್ವೀಸ್ ಸೆಕ್ರೆಟರಿ ಅಬೂ ಮಿಸ್ಬಾಹ್ ಐಕಪ್ಪೆಡಿ, ಜಿದ್ದಾ ರೀಜನಲ್ ವೆಲ್ಫೇರ್ & ಸರ್ವಿಸ್ ಸೆಕ್ರೆಟರಿ ಹನೀಫ್ ಬೇರ್ಕ, ಮುಹಮ್ಮದ್ ಸಖಾಫಿ ಉಗ್ರಪುರಂ ಮುಂತಾದವರು ಅಂತ್ಯ ಕ್ರಿಯೆಗಳಿಗೆ ನೇತೃತ್ವ ನೀಡಿದರು.
















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಸೌದಿ ಅರೇಬಿಯಾ ಮೇಲೆ ಡ್ರೋನ್, ಕ್ಷಿಪಣಿ ದಾಳಿ: ರಕ್ಷಣಾ ಪಡೆಯಿಂದ ಯಶಸ್ವಿ ಪ್ರತಿರೋಧ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ