ಸೋಶಿಯಲ್ ಮೀಡಿಯಾಗಳಲ್ಲಿ ಹ್ಯಾಕರ್ ಗಳ ಹಾವಳಿ ದೈನಂದಿನ ಏರಿಕೆಯಾಗುತ್ತಿದ್ದು, ಒಂದಲ್ಲೊಂದು ರೀತಿಯ ಸಂದೇಶಗಳನ್ನು, ಲಿಂಕ್ಗಳನ್ನು ಹಂಚುವ ಮೂಲಕ ಬ್ಯಾಂಕ್ ಬಳಕೆದಾರರ ಖಾತೆಯಿಂದ ಹಣ ಲೂಟಿಮಾಡುವುದು ಅವರ ಮುಖ್ಯ ಗುರಿಯಾಗಿದೆ.
ತಮಗೆ ಬ್ಯಾಂಕ್ ನಿಂದ ಬಹುಮಾನ ಲಭಿಸಿದೆ, ರಿವಾರ್ಡ್ ಪಾಯಿಂಟ್ಗಳ ಮೂಲಕ ಇಂತಿಷ್ಟು ಮೊತ್ತ ದೊರೆಯಲಿದೆ ಎಂಬಿತ್ಯಾದಿ ಸಂದೇಶಗಳನ್ನು ಕಳಿಸಿ ಗ್ರಾಹಕರನ್ನು ಕಬಳಿಸುತ್ತಿದ್ದಾರೆ.
ಇದೀಗ, SBI ಬ್ಯಾಂಕ್ ನ ಹೆಸರಿನಲ್ಲಿ ರಿವಾರ್ಡ್ ಪಾಯಿಂಟ್ಗಳು ಎಂಬ ಸಂದೇಶದೊಂದಿಗೆ ವಾಟ್ಸಾಪ್ ಹ್ಯಾಕ್ ಮೊಬೈಲ್ ಅಪ್ಲಿಕೇಷನ್ ಒಂದು ಹರಿದಾಡುತ್ತಿದ್ದು, ಆ ಅಪ್ಲಿಕೇಷನ ನ್ನು ತಮ್ಮ ಮೊಬೈಲ್ ನಲ್ಲಿ ಇನ್ಷ್ಟಾಲ್ ಮಾಡಿದ ಕೂಡಲೇ ತಮ್ಮ ವಾಟ್ಸಾಪನ್ನು ಹ್ಯಾಕ್ ಮಾಡಲಾಗುತ್ತದೆ.
ಈಗಾಗಲೇ ಹಲವು ಮಂದಿಯ ವಾಟ್ಸಾಪ್ ಹ್ಯಾಕ್ ಆಗಿರುವ ಬಗ್ಗೆ ವರದಿಗಳು ಬಂದಿದ್ದು, ವಾಟ್ಸಾಪ್ ಗ್ರಾಹಕರು ಅಂತಹ ಯಾವುದೇ ಲಿಂಕ್ ಅಥವಾ ಮೊಬೈಲ್ ಆ್ಯಪ್ ಗಳನ್ನು ಕ್ಲಿಕ್ ಮಾಡದಂತೆ ಜಾಗರೂಕರಾಗಬೇಕಾಗಿದೆ.
ಒಮ್ಮೆ ಲಿಂಕನ್ನು ಕ್ಲಿಕ್ ಮಾಡಿದರೆ ತಮ್ಮ ವಾಟ್ಸಾಪ್ ಖಾತೆಯ ಸಂಪೂರ್ಣ ನಿಯಂತ್ರಣವು ಹ್ಯಾಕರ್ಗಳ ಪಾಲಾಗುತ್ತದೆ. ತಮ್ಮ ಕಾಂಟಾಕ್ಟ್ ನಲ್ಲಿರುವ ಎಲ್ಲರಿಗೂ ಈ ಸಂದೇಶ ರವಾನೆಯಾಗುತ್ತದೆ. ಮತ್ತೆ ತಮ್ಮ ಖಾತೆಯನ್ನು ಪಡೆಯಲು ಹರಸಾಹಸ ಪಡಬೇಕಾದೀತು. ಅದೂ ಅಲ್ಲದೇ, ತಮ್ಮ ಮೊಬೈಲ್ ನಲ್ಲಿ ರುವ ಬ್ಯಾಂಕ್ ಆ್ಯಪ್ ಗಳನ್ನೂ ಹ್ಯಾಕ್ ಮಾಡುವ ಸಾಧ್ಯತೆಯಿದೆ.
ಈ ರೀತಿ ಹ್ಯಾಕ್ ಆಗಿರುವ ಬಗ್ಗೆ ತಮಗೆ ಅರಿವಾದಲ್ಲಿ, ಮೊಬೈಲಿನಲ್ಲಿರುವ ಸಿಮ್ ಕಾರ್ಡ್ ನ್ನು ರಿಮೂವ್ ಮಾಡಿ, ಹ್ಯಾಕರ್ ಗಳಿಗೆ OTP ಲಭಿಸುವುದನ್ನು ತಡೆಯಬಹುದು. ಮತ್ತೆ ಮೊಬೈಲನ್ನು ಫಾರ್ಮ್ಯಾಟ್ ಮಾಡುವುದು ಉತ್ತಮವಾಗಿದೆ. ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿರುವ ಬಗ್ಗೆ ಸಂಶಯವಿದ್ದಲ್ಲಿ, ಕೂಡಲೇ ಸಂಬಂಧಪಟ್ಟ ಬ್ಯಾಂಕ್ ಗೆ ಮಾಹಿತಿ ನೀಡಬೇಕಾಗಿದೆ.
ಇಂಗ್ಲೀಷಿನಲ್ಲಿ ಹರಿದಾಡುತ್ತಿರುವ ಸಂದೇಶ ಈ ಕೆಳಗಿನಂತಿದೆ.


“ಆತ್ಮೀಯ ಮೌಲ್ಯದ ಗ್ರಾಹಕರೇ,
ನಿಮ್ಮ SBI ಬ್ಯಾಂಕ್ ರಿವಾರ್ಡ್ ಪಾಯಿಂಟ್ಗಳು (ರೂ. 9980.00) ಇಂದು ಮುಕ್ತಾಯಗೊಳ್ಳುತ್ತವೆ! ಈಗ SBI ಬ್ಯಾಂಕ್ ರಿವಾರ್ಡ್ ಅಪ್ಲಿಕೇಶನ್ ಮೂಲಕ ರಿಡೀಮ್ ಮಾಡಿಕೊಳ್ಳಿ ನಿಮ್ಮ ಖಾತೆಯಲ್ಲಿ ನಗದು ಠೇವಣಿ ಮಾಡುವ ಮೂಲಕ ಸ್ಥಾಪಿಸಿ ಮತ್ತು ನಿಮ್ಮ ಬಹುಮಾನವನ್ನು ಪಡೆದುಕೊಳ್ಳಿ. ಧನ್ಯವಾದಗಳು
ತಂಡ – ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ”
















ಇನ್ನಷ್ಟು ಸುದ್ದಿಗಳು
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ