ಕುವೈತ್ ಸಿಟಿ: ಯುವ ಧಾರ್ಮಿಕ ವಿದ್ವಾಂಸ, ಇಖ್ಬಾಲ್ ಫೈಝಿ ಕಿನ್ಯಾ ಅವರು ಗುರುವಾರ ಮುಂಜಾನೆ ಕುವೈತ್ನಲ್ಲಿ ತಮ್ಮ ವಾಸಸ್ಥಳದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಕಿನ್ಯಾ ಪಡ್ಪು ನಿವಾಸಿ ಮರ್ಹೂಮ್ ಸೂಫಿಚ್ಚ ಮತ್ತು ಆಯಿಶಾ ಅವರ ಪುತ್ರರಾದ ಇವರು ಸಣ್ಣ ಪ್ರಾಯದಿಂದಲೇ ಧಾರ್ಮಿಕ ಸಂಘಟನಾ ರಂಗದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಸುಮಾರು 18 ವರ್ಷಗಳಿಂದ ಕುವೈತ್ನಲ್ಲಿ ಅನಿವಾಸಿ ಜೀವನ ನಡೆಸುತ್ತಿದ್ದ ಅವರು, ಕುವೈತ್ ಕೇರಳ ಇಸ್ಲಾಮಿಕ್ ಕೌನ್ಸಿಲ್ KIC ಇದರ ಸಕ್ರಿಯ ಕಾರ್ಯಕರ್ತರಾಗಿದ್ದರು. KIC ಕೇಂದ್ರ ಸಮಿತಿಯ ಉಪಾಧ್ಯಕ್ಷರಾಗಿಯೂ, ಪ್ರಸ್ತುತ ಹವಲ್ಲಿ ವಲಯ ಅಧ್ಯಕ್ಷರಾಗಿ ಸೇವೆ ಗೈಯ್ಯುತ್ತಿದ್ದರು.
ಕಿನ್ಯಾ ಎಸ್ಕೆ ಎಸ್ಸೆಸ್ಸೆಫ್ ಇದರ ಸದಸ್ಯರೂ ಧಾರ್ಮಿಕ ಸಂಘ, ಸಂಸ್ಥೆಗಳ ಹಿತೈಷಿಯೂ, ದೀನೀ ರಂಗದಲ್ಲಿ ನಿಷ್ಠಾವಂತ ಸೇವೆ ಗೈದಿರುವ ಇಖ್ಬಾಲ್ ಫೈಝಿಯವರು, ಪ್ರಮುಖ ಧಾರ್ಮಿಕ ವಿದ್ವಾಂಸರಾದ ಶೈಖುನಾ ಕೆ.ಎಲ್.ಅಬ್ದುಲ್ ಖಾದರ್ ಅಲ್ ಖಾಸಿಮಿ (ಪೇರಾಲ್ ಉಸ್ತಾದ್) ಮೊಂಟೆಪದವು ಅವರ ಪ್ರಮುಖ ಶಿಷ್ಯರಲ್ಲಿ ಓರ್ವರಾಗಿದ್ದಾರೆ. ಪ್ರತಿಷ್ಠಿತ ವಿದ್ಯಾಸಂಸ್ಥೆ ಜಾಮಿಯಾ ನೂರಿಯಾ ದಿಂದ ಫೈಝಿ ಬಿರುದು ಪಡೆದು ಧಾರ್ಮಿಕ ಸೇವಾ ರಂಗಕ್ಕಿಳಿದ ಅವರು, ವಿವಿಧ ಮೊಹಲ್ಲಾಗಳಲ್ಲಿ ಖತೀಬರಾಗಿ ಸೇವೆ ಗೈದಿದ್ದಾರೆ. ಅವರು ಪತ್ನಿ ಹಾಗೂ ಮೂರು ಹೆಣ್ಣು ಒಂದು ಗಂಡು ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಫೈಝಿಯವರ ಅಕಾಲಿಕ ಅಗಲಿಕೆಗೆ ಹಲವು ಸಂಘ, ಸಂಸ್ಥೆಗಳ ನಾಯಕರು, ವಿದ್ವಾಂಸರು ಮತ್ತು ಸಾಮಾಜಿಕ ಕಾರ್ಯಕರ್ತರು ಸಂತಾಪವನ್ನು ಸೂಚಿಸಿದ್ದಾರೆ. ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಕುಟುಂಬಸ್ಥರಿಗೆ ಅಲ್ಲಾಹನು ದಯಪಾಲಿಸಲಿ, ಅವರ ಪರಲೋಕ ಜೀವನವನ್ನು ಅಲ್ಲಾಹು ಹಸನಾಗಿಸಲಿ ಎಂದು ದುಆ ಮಾಡುವ ಮೂಲಕ ಸಂತಾಪವನ್ನು ಸೂಚಿಸಿದ್ದಾರೆ.
ಇಂದು ರಾತ್ರಿ 9 ಗಂಟೆ ಸುಮಾರಿಗೆ ಕಲ್ಲಿಕೋಟೆ ವಿಮಾನ ನಿಲ್ದಾಣ ಮೂಲಕ ಅವರ ಮೃತದೇಹ ವನ್ನು ಊರಿಗೆ ತರಲಾಗುತ್ತಿದ್ದು, ಫಜ್ರ್ ನಮಾಜಿನ ಬಳಿಕ ಕಿನ್ಯಾ ಕೇಂದ್ರ ಜುಮ್ಮಾ ಮಸೀದಿಯ ಖಬರ್ ಸ್ಥಾನದಲ್ಲಿ ದಫನ ಕಾರ್ಯ ನಡೆಯಲಿದೆ ಎಂದು ಸಂಘಟನಾ ಕಾರ್ಯಕರ್ತರು ಮಾಹಿತಿ ನೀಡಿದ್ದಾರೆ.
















ಇನ್ನಷ್ಟು ಸುದ್ದಿಗಳು
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ
‘ಮಾದರಿ ಮದುವೆ ಅಭಿಯಾನ’ ಸಮಾರೋಪ ಸಮಾರಂಭ – ಎಸ್ವೈಎಸ್ ಬಂಟ್ವಾಳ ಝೋನ್ ಯಶಸ್ವಿಗೆ ಕರೆ
ಮಂಗಳೂರು ಪೊಲೀಸ್ ಕಮಿಷನರ್: ವರ್ಗಾವಣೆ ವಿಚಾರ ಕೈಬಿಡುವಂತೆ ಮನವಿ- ಡಿಜಿಪಿಗೆ ಇಕ್ಬಾಲ್ ಬಾಳಿಲ ಪತ್ರ
ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ತೆಗೆಸಿದ ಘಟನೆ: ಸಚಿವ ದಿನೇಶ್ ಗುಂಡೂರಾವ್ ತೀವ್ರ ಖಂಡನೆ
ಇಂಡಿಯನ್ ಗ್ರಾಂಡ್ ಮುಫ್ತಿ ಜಿಲ್ಲೆಗೆ- ಯಶಸ್ವಿಗಾಗಿ ಸಮಾಲೋಚನಾ ಸಭೆ
ಭಾರತವನ್ನು ‘ನರಕ’ ಎಂದ ಟ್ರಂಪ್ ಪೋಸ್ಟ್- ಮೌನಕ್ಕೆ ಶರಣಾದ ವಿದೇಶಾಂಗ ಇಲಾಖೆ
ಅಲ್ ಮದೀನ ಇಂಗ್ಲಿಷ್ ಮೀಡಿಯಂ ಶಾಲೆಗೆ ಶೇ.100 ಫಲಿತಾಂಶ- ನಾಲ್ವರು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ
ಈಶ್ವರಮಂಗಲ ತ್ವೈಬಾ ವಿದ್ಯಾಸಂಸ್ಥೆಗೆ ಎಸ್ಸೆಸ್ಸೆಲ್ಸಿಯಲ್ಲಿ ಶೇ. 100 ಫಲಿತಾಂಶ- ಅಭೂತಪೂರ್ವ ಸಾಧನೆ