janadhvani

Kannada Online News Paper

‘ಆಪರೇಷನ್ ಸಿಂಧೂರ್’ : ಭಾರತದಲ್ಲಿ ಹೈ ಅಲರ್ಟ್- 27 ವಿಮಾನ ನಿಲ್ದಾಣಗಳು ಬಂದ್

ಉಳಿದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ನಿರ್ಗಮನ ಮತ್ತು ಆಗಮನದ ಪ್ರತಿಯೊಬ್ಬ ಪ್ರಜೆ ಮೇಲೂ ನಿಗಾ ವಹಿಸಿದ್ದು, ಸಂದರ್ಶಕರಿಗೆ ಟರ್ಮಿನಲ್ ಪ್ರವೇಶವನ್ನು ನಿಷೇಧಿಸಲಾಗಿದೆ.

ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್‌ ಸಿಂಧೂರ್ ಪರಿಣಾಮದ ನಂತರ ದೇಶದ ಎಲ್ಲಾ ಕಡೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ದೇಶದ ಪ್ರಮುಖ ವಿಮಾನ ನಿಲ್ದಾಣಗಳ ಮೇಲೂ ಪ್ರತಿದಾಳಿಯ ಕರಿನೆರಳು ಬಿದ್ದಿದೆ. ಭದ್ರತಾ ಕ್ರಮವಾಗಿ ಕೇಂದ್ರ ವಿಮಾನಯಾನ ಇಲಾಖೆಯ ಆದೇಶದಂತೆ 27 ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ಭಾರತದಲ್ಲಿ ಹೈ ಅಲರ್ಟ್ ಘೋಷಿಸಿದ ಹಿನ್ನೆಲೆಯಲ್ಲಿ ಎಲ್ಲಾ ನಗರಗಳ ಮೇಲೆ ಪೊಲೀಸರು ಕಟ್ಟೆಚ್ಚರ ವಹಿಸುವಂತೆ ತಿಳಿಸಲಾಗಿದೆ. ಉಳಿದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ನಿರ್ಗಮನ ಮತ್ತು ಆಗಮನದ ಪ್ರತಿಯೊಬ್ಬ ಪ್ರಜೆ ಮೇಲೂ ನಿಗಾ ವಹಿಸಲಾಗಿದ್ದು, ಸಂದರ್ಶಕರಿಗೆ ಟರ್ಮಿನಲ್ ಪ್ರವೇಶವನ್ನು ನಿಷೇಧಿಸಲಾಗಿದೆ. ಯಾವುದೇ ಸಂದರ್ಭದಲ್ಲೂ ಆಗುವ ದಾಳಿಗೆ ಮುಂಜಾಗ್ರತೆ ವಹಿಸಲಾಗುತ್ತಿದೆ.

ತೀರಾ ಸೂಕ್ಷ್ಮ ವಾಯುನೆಲೆಗಳ ಮೇಲೆ ನಿಗಾ ಇಟ್ಟಿರುವ ದೇಶದ ಭದ್ರತಾ ಇಲಾಖೆ ಈಗಾಗಲೇ 27 ವಾಯು ನೆಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಶನಿವಾರ (ಮೇ 10) ಬೆಳಿಗ್ಗೆ 5.29 ರವರೆಗೆ ಈ ವಿಮಾನ ನಿಲ್ದಾಣಗಳು ಮುಚ್ಚಲ್ಪಡುತ್ತವೆ. ಇದಲ್ಲದೆ, ಭಾರತೀಯ ವಿಮಾನಯಾನ ಸಂಸ್ಥೆಗಳು ಗುರುವಾರ (ಮೇ 08) ಒಟ್ಟು 430 ವಿಮಾನಗಳನ್ನು ರದ್ದುಗೊಳಿಸಿವೆ. ಇದು ಭಾರತದ ಒಟ್ಟು ನಿಗದಿತ ವಿಮಾನಗಳ ಶೇಕಡಾ 3 ರಷ್ಟಿದೆ. ಪಾಕಿಸ್ತಾನದ ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆದ ನಂತರ ಭಾರತ ಈ ನಿರ್ಧಾರ ತೆಗೆದುಕೊಂಡಿದೆ.

ತಾತ್ಕಾಲಿಕವಾಗಿ ಮುಚ್ಚಲ್ಪಟ್ಟ ವಿಮಾನ ನಿಲ್ದಾಣಗಳು

1. ಚಂಡೀಗಢ

2. ಶ್ರೀನಗರ

3. ಅಮೃತಸರ

4. ಲುಧಿಯಾನ

5. ಭುಂತರ್

6. ಕಿಶನ್‌ಗಢ

7. ಪಟಿಯಾಲ

8. ಶಿಮ್ಲಾ

9. ಗಗ್ಗಲ್

10. బటిండా

11. ಜೈಸರ್

12. ಜೋಧಪುರ

13. ಬಿಕಾನೇರ್

14. ಹಲ್ವಾರಾ

15. ಪಠಾಣ್‌ಕೋಟ್

16.ಲೇಹ್

17.ಜಮ್ಮು

18. ಮುಂದ್ರಾ

19. ಜಾಮ್ನಗರ

20. ರಾಜ್‌ಕೋಟ್

21. ಪೋರಬಂದರ್

22. ಕಾಂಡ್ಲಾ

23. ಕೇಶೋದ್

24.ಭುಜ್

25. ಧರ್ಮಶಾಲಾ

26. ಗ್ವಾಲಿಯರ್

27. ಹಿಂದನ್ (ಘಜಿಯಾಬಾದ್)