janadhvani

Kannada Online News Paper

ಸೈಯದ್ ಇಜಾಝ್ ಅಹ್ಮದ್ ಚಿಕ್ಕಮಗಳೂರು ಸೌದಿಯಲ್ಲಿ ನಿಧನ- ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್

ಚಿಕ್ಕಮಗಳೂರು ನಿವಾಸಿ ಸೈಯದ್ ಇಜಾಝ್ ಅಹ್ಮದ್ ರವರು ದಿನಾಂಕ 15/04/2025 ರಂದು ಸೌದಿ ಅರೇಬಿಯಾದ ಮದೀನದ ಸಮೀಪವಿರುವ ಯಾಂಬುವಿನಲ್ಲಿ ಮರಣಹೊಂದಿದ್ದು ಅವರ ಅಂತ್ಯಕ್ರಿಯೆಯನ್ನು ಯಾಂಬು ಬಲದ್ ನಲ್ಲಿರುವ ಶಾತಿ ಖಬರ್ ಸ್ಥಾನದಲ್ಲಿ ಕೆಸಿಎಫ್ ಯಾಂಬು ಸೆಕ್ಟರ್ ಸಾಂತ್ವನ ಇಲಾಖೆಯ ನೇತೃತ್ವದಲ್ಲಿ ನಡೆಸಲಾಯಿತು.

ಅಂತ್ಯಕ್ರಿಯೆಗೆ ಬೇಕಾದ ಹಲವಾರು ಕಾನೂನಾತ್ಮಕ ದಾಖಲೆ ಪತ್ರಗಳು ಅದರಂತೆ ಭಾರತೀಯ ರಾಯಭಾರಿ ಕಚೇರಿ, ಸ್ಥಳೀಯ ಆರೋಗ್ಯ ಇಲಾಖೆ, ಸೌದಿ ವಲಸೆ ಪ್ರಾಧಿಕಾರ ಸೇರಿದಂತೆ ವಿವಿಧ ಕಡೆಗಳಿಂದ ಬೇಕಾದ ಕಡತಗಳನ್ನು ಸರಿಪಡಿಸಲು ಸೌದಿ ಅರೇಬಿಯಾದ ಕೆಸಿಎಫ್ ಯಾಂಬು ಸಾಂತ್ವನ ಇಲಾಖೆಯ ಕಾರ್ಯದರ್ಶಿ ಇಲ್ಯಾಸ್ ಮುಕ್ಕ ರವರ ನೇತೃತ್ವದಲ್ಲಿ ಸೆಕ್ಟರ್ ಅಧ್ಯಕ್ಷರಾದ ಇಕ್ಬಾಲ್ ಕೃಷ್ಣಾಪುರ, ಅಬ್ದುಲ್ ರಝಾಕ್ ಹಾಜಿ ಶಿರ್ಲಾಲ್, ರಬೀಹ್ ಕೂಳೂರು, ಹಾರಿಸ್ ವೇಣೂರ್, ಸಹಿತ ಅನೇಕ ನಾಯಕರ ಸಹಕಾರದೊಂದಿಗೆ ನಡೆಯಿತು.

ಯಾಂಬು ಬಲದ್ ನಲ್ಲಿರುವ ಮಸ್ಜಿದ್ ಜಾಮಿಹ್ ಅಲ್ ಕಬೀರ್ ನಲ್ಲಿ 17-04-2025 ಆಸರ್ ನಮಾಜಿನ ಬಳಿಕ ಮಯ್ಯತ್ ನಮಾಝ್ ನಿರ್ವಹಿಸಿ ಶಾತಿ ಖಬರ್ ಸ್ಥಾನದಲ್ಲಿ ದಫನ ಕಾರ್ಯ ನೆರವೇರಿಸಲಾಯಿತು.ಈ ಸಂದರ್ಭದಲ್ಲಿ ಕೆಸಿಎಫ್ ಯಾಂಬು ಸೆಕ್ಟರ್ ನಾಯಕರು, ಸಹಕಾರ್ಯಕರ್ತರು, ಆರ್ ಎಸ್ ಸಿ, ಐಸಿಎಫ್ ಕಾರ್ಯಕರ್ತರು ಹಾಗೂ ಸ್ಥಳೀಯರು ದಫನ ಕಾರ್ಯದಲ್ಲಿ ಸಹಕರಿಸಿದರು. ಮೃತರು ಎರಡು ಮಕ್ಕಳು, ಪತ್ನಿ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.