ಮಂಗಳೂರು: ಕಾಶ್ಮೀರದಲ್ಲಿ ಉಗ್ರರಿಂದ ಭೀಕರ ಗುಂಡಿನ ದಾಳಿಗೆ 26 ಮಂದಿ ಸಾವಿಗೀಡಗಿದ್ದು ಇದು ತೀರ ಖಂಡನೀಯ ಹಾಗೂ ಅಸನೀಯವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ವಕಫ್ ಸಲಹಾ ಸಮಿತಿ ಅಧ್ಯಕ್ಷರಾದ ಬಿಎ ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್ ಹೇಳಿದ್ದಾರೆ.
ಇಂತಹ ಘಟನೆಗಳು ಮರುಕಳಿಸದಂತೆ ಪ್ರವಾಸಿಗರಿಗೆ ಸೂಕ್ತವಾದ ಭದ್ರತಾ ವ್ಯವಸ್ಥೆಯನ್ನು ಸರಕಾರ ಒದಗಿಸಬೇಕು. ಸರಕಾರವು ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕಾಗಿದೆ. ಮೃತರ ಕುಟುಂಬಕ್ಕೆ ಅಲ್ಲಾಹು ಸಹನಾ ಶಕ್ತಿಯನ್ನು ನೀಡಲಿ.
ಈ ಘಟನೆಯ ಲೋಪದೋಷಗಳನ್ನು ಉನ್ನತ ಮಟ್ಟದ ತನಿಖೆ ನಡೆಸಬೇಕು. ಇದೀಗ ಬೇಸಿಗೆ ರಜಾ ಕಾಲ ಆದುದರಿಂದ ಜನಸಾಮಾನ್ಯರು ಪ್ರವಾಸದಲ್ಲಿರುವ ಸಂದರ್ಭ. ಇಂತಹ ಎಲ್ಲಾ ಪ್ರವಾಸಿ ಸ್ಥಾನಕ್ಕೂ ಸೂಕ್ತ ಭದ್ರತೆ ಸರಕಾರ ಒದಗಿಸಬೇಕಾಗಿದೆ ಎಂದು ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್ ಆಗ್ರಹಿಸಿದ್ದಾರೆ.