ಇಹ್ಸಾನ್ ಕರ್ನಾಟಕದ ಹಿತೈಷಿಯೂ, ಮಾರ್ಗದರ್ಶಕರು ಆಗಿರುವ ಕೆ.ಬಿ.ಎನ್ ಯೂನಿವರ್ಸಿಟಿ ಗುಲ್ಬರ್ಗಾ ಚಾನ್ಸಲರ್ ಆಗಿರುವ ಸಯ್ಯಿದ್ ಅಲಿ ಹುಸೈನ್ ರವರು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಂಗತಿ ಅತ್ಯಂತ ಸಂತೋಷದಾಯಕವೆಂದು ಇಹ್ಸಾನ್ ಕರ್ನಾಟಕ ಅಭಿಪ್ರಾಯ ವ್ಯಕ್ತಪಡಿಸಿದೆ.
ಗುಲ್ಬರ್ಗದ ಆಧ್ಯಾತ್ಮಿಕ ರಂಗದಲ್ಲಿ,ಮುಸ್ಲಿಂ ಸಮುದಾಯಕ್ಕೆ ಮುಂಚೂಣಿ ನಾಯಕರಾಗಿರುವ ಅಲಿ ಬಾಬಾ , ಬಂದೇ ನವಾಝ್ ದರ್ಗಾದ ಮೂಲಕ ಶೈಕ್ಷಣಿಕ ಚಳುವಳಿಗೆ ಶಕ್ತಿ ನೀಡಿದವರು. ಅವರ ಸಾಮಾಜಿಕ ,ಶೈಕ್ಷಣಿಕ , ಧಾರ್ಮಿಕ ಕೊಡುಗೆಗಳು ಮುಂದೆ ವಕ್ಫ್ ಮಂಡಳಿ ಮೂಲಕವೂ ಸಮುದಾಯಕ್ಕೆ ಕೊಡುಗೆ ನೀಡಲು ಅವರಿಂದ ಸಾಧ್ಯವಾಗಲಿ ಎಂಬುದು ಇಹ್ಸಾನ್ ಕರ್ನಾಟಕದ ಹಾರೈಕೆ. ಇತ್ತೀಚೆಗೆ ಕೊಪ್ಪಳ ಜಿಲ್ಲೆಯಲ್ಲಿ ಅದ್ದೂರಿಯಾಗಿ ನಡೆದ ಇಹ್ಸಾನೋತ್ಸವ25 ಸ್ವಾಗತ ಸಮಿತಿಯ ಕೋಶಾಧಿಕಾರಿಯಾಗಿಯೂ ಅಲಿ ಹುಸೈನಿಯವರು ಇಹ್ಸಾನ್ ಗಾಗಿ ಸೇವೆ ಸಲ್ಲಿಸಿದ್ದರು. ಈ ಎಲ್ಲಾ ಅವರ ಸಾಮಾಜಿಕ ಶೈಕ್ಷಣಿಕ ಗುರುತುಗಳು ಗುರುತಿಸಿದ್ದು ಅವರ ಆಯ್ಕೆ ಸೂಕ್ತವೆಂದು ಇಹ್ಸಾನ್ ಕರ್ನಾಟಕ ಅಧ್ಯಕ್ಷರಾಗಿರುವ ಕರ್ನಾಟಕ ರಾಜ್ಯ ಎಸ್ ವೈ ಎಸ್ ಅಧ್ಯಕ್ಷರೂ ಹಫೀಳ್ ಸಅದಿ ಕೊಳಕೇರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕದ ಸುನ್ನೀ ಸಂಘಟನೆಗಳ ಶೈಕ್ಷಣಿಕ ಚಳುವಳಿಯಾಗಿರುವ ಇಹ್ಸಾನ್ ಚಟುವಟಿಕೆಗೆ ದೊಡ್ಡ ಶಕ್ತಿ ಮತ್ತು ಮಾರ್ಗದರ್ಶಕರಾಗಿದ್ದಾರೆ ನೂತನ ವಕ್ಫ್ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾದ ಅಲಿ ಹುಸೈನ್ ಸಾಹೆಬ್.
















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ