ಇಹ್ಸಾನ್ ಕರ್ನಾಟಕದ ಹಿತೈಷಿಯೂ, ಮಾರ್ಗದರ್ಶಕರು ಆಗಿರುವ ಕೆ.ಬಿ.ಎನ್ ಯೂನಿವರ್ಸಿಟಿ ಗುಲ್ಬರ್ಗಾ ಚಾನ್ಸಲರ್ ಆಗಿರುವ ಸಯ್ಯಿದ್ ಅಲಿ ಹುಸೈನ್ ರವರು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಂಗತಿ ಅತ್ಯಂತ ಸಂತೋಷದಾಯಕವೆಂದು ಇಹ್ಸಾನ್ ಕರ್ನಾಟಕ ಅಭಿಪ್ರಾಯ ವ್ಯಕ್ತಪಡಿಸಿದೆ.
ಗುಲ್ಬರ್ಗದ ಆಧ್ಯಾತ್ಮಿಕ ರಂಗದಲ್ಲಿ,ಮುಸ್ಲಿಂ ಸಮುದಾಯಕ್ಕೆ ಮುಂಚೂಣಿ ನಾಯಕರಾಗಿರುವ ಅಲಿ ಬಾಬಾ , ಬಂದೇ ನವಾಝ್ ದರ್ಗಾದ ಮೂಲಕ ಶೈಕ್ಷಣಿಕ ಚಳುವಳಿಗೆ ಶಕ್ತಿ ನೀಡಿದವರು. ಅವರ ಸಾಮಾಜಿಕ ,ಶೈಕ್ಷಣಿಕ , ಧಾರ್ಮಿಕ ಕೊಡುಗೆಗಳು ಮುಂದೆ ವಕ್ಫ್ ಮಂಡಳಿ ಮೂಲಕವೂ ಸಮುದಾಯಕ್ಕೆ ಕೊಡುಗೆ ನೀಡಲು ಅವರಿಂದ ಸಾಧ್ಯವಾಗಲಿ ಎಂಬುದು ಇಹ್ಸಾನ್ ಕರ್ನಾಟಕದ ಹಾರೈಕೆ. ಇತ್ತೀಚೆಗೆ ಕೊಪ್ಪಳ ಜಿಲ್ಲೆಯಲ್ಲಿ ಅದ್ದೂರಿಯಾಗಿ ನಡೆದ ಇಹ್ಸಾನೋತ್ಸವ25 ಸ್ವಾಗತ ಸಮಿತಿಯ ಕೋಶಾಧಿಕಾರಿಯಾಗಿಯೂ ಅಲಿ ಹುಸೈನಿಯವರು ಇಹ್ಸಾನ್ ಗಾಗಿ ಸೇವೆ ಸಲ್ಲಿಸಿದ್ದರು. ಈ ಎಲ್ಲಾ ಅವರ ಸಾಮಾಜಿಕ ಶೈಕ್ಷಣಿಕ ಗುರುತುಗಳು ಗುರುತಿಸಿದ್ದು ಅವರ ಆಯ್ಕೆ ಸೂಕ್ತವೆಂದು ಇಹ್ಸಾನ್ ಕರ್ನಾಟಕ ಅಧ್ಯಕ್ಷರಾಗಿರುವ ಕರ್ನಾಟಕ ರಾಜ್ಯ ಎಸ್ ವೈ ಎಸ್ ಅಧ್ಯಕ್ಷರೂ ಹಫೀಳ್ ಸಅದಿ ಕೊಳಕೇರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕದ ಸುನ್ನೀ ಸಂಘಟನೆಗಳ ಶೈಕ್ಷಣಿಕ ಚಳುವಳಿಯಾಗಿರುವ ಇಹ್ಸಾನ್ ಚಟುವಟಿಕೆಗೆ ದೊಡ್ಡ ಶಕ್ತಿ ಮತ್ತು ಮಾರ್ಗದರ್ಶಕರಾಗಿದ್ದಾರೆ ನೂತನ ವಕ್ಫ್ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾದ ಅಲಿ ಹುಸೈನ್ ಸಾಹೆಬ್.
















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ