ಮುಸ್ಲಿಂ ಜಮಾಅತ್ ಕಿನ್ಯ,ಕುರಿಯ ಯುನಿಟ್ ನ ಮಹಾಸಭೆಯು ಕುರಿಯ ಸುನ್ನೀ ಸೆಂಟರ್ ನಲ್ಲಿ ಮುಸ್ಲಿಂ ಜಮಾಅತ್ ಕುರಿಯ ಅಧ್ಯಕ್ಷ ಆಲಿ ಕುಂಞಿ ಬಾಕಿಮಾರ್ ರವರ ಅಧ್ಯಕ್ಷತೆಯಲ್ಲಿ SჄS ಕಿನ್ಯ ಸರ್ಕಲ್ ಅಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯ ಉದ್ಘಾಟಿಸಿದರು.
ಸರ್ಕಲ್ ನಿಂದ ಚುನಾವಣಾಧಿಕಾರಿಯಾಗಿ ಮುಹಮ್ಮದ್ ಮುಸ್ಲಿಯಾರ್ ಉಕ್ಕುಡ, ಮಹ್ಮೂದ್ ಉಳ್ಳಾಲ ರವರ ನೇತೃತ್ವದಲ್ಲಿ ನೂತನ ಸಮಿತಿಯನ್ನು ಆರಿಸಲಾಯಿತು.
ಅಧ್ಯಕ್ಷರಾಗಿ ಹಂಝ ಕುರಿಯ ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹೀಂ ಚಾದಿಪಡ್ಪು ಕೋಶಾಧಿಕಾರಿಯಾಗಿ ಆಲಿ ಕುಂಞಿ ಬಾಕಿಮಾರ್ ರವರನ್ನು ಆಯ್ಕೆ ಮಾಡಲಾಯಿತು
ಹನೀಫ್ ರಹ್ಮತ್ ನಗರ (ಉಪಾಧ್ಯಕ್ಷರು) ಅಬ್ದುರ್ರಹ್ಮಾನ್ ಮುಸ್ಲಿಯಾರ್ (ದಅ್ವಾ ಕಾರ್ಯದರ್ಶಿ) ಅಬ್ದುಲ್ ಹಕೀಂ ಡಿ.ಕೆ( ಇಸಾಬ ಕಾರ್ಯದರ್ಶಿ) ಮುಹಮ್ಮದ್ ರಹ್ಮತ್ ನಗರ (ಚಾರಿಟಿ ಕಾರ್ಯದರ್ಶಿ )ಸಿದ್ದೀಕ್ ಕೋಡಿ (ಮೀಡಿಯಾ ಕಾರ್ಯದರ್ಶಿ) ಕಾರ್ಯಕಾರಿ ಸಮಿತಿಗೆ ಅಬ್ದುಲ್ ಹಮೀದ್ ಎನ್.ಕೆ, ಇಬ್ರಾಹೀಂ ಮುಸ್ಲಿಯಾರ್, ಇಬ್ರಾಹೀಂ ತೋರಿಕೆ,ಎನ್.ಕೆ ಅಬ್ದುಸ್ಸಲಾಂ ರವರನ್ನು ಸದಸ್ಯರು ಗಳಾಗಿ ಆರಿಸಲಾಗಿದೆ.
ಕರ್ನಾಟಕ ಮುಸ್ಲಿಂ ಜಮಾಅತ್ ಕಿನ್ಯ ಸರ್ಕಲ್ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಎಂ ಇಸ್ಮಾಈಲ್ ಹಾಜಿ ಸಾಗ್,ಕೋಶಾಧಿಕಾರಿ ಎಂಕೆಎಂ ಇಸ್ಮಾಈಲ್ ಮೀಂಪ್ರಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.
ಕುರಿಯ ಮುಸ್ಲಿಂ ಜಮಾಅತ್ ನಾಯಕ ಎನ್.ಕೆ ಅಬ್ದುಲ್ ಹಮೀದ್,SჄS ಕಿನ್ಯ ಸರ್ಕಲ್ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಸ್ಸಲಾಂ ಬಾಕಿಮಾರ್ ಇನ್ನಿತರ ನಾಯಕರು ಉಪಸ್ಥಿತರಿದ್ದರು.
SჄS ಕುರಿಯ ಯುನಿಟ್ ನ ನಿಕಟಪೂರ್ವ ಕಾರ್ಯದರ್ಶಿ ಇಲ್ಯಾಸ್ ಡಿ.ಕೆ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.