janadhvani

Kannada Online News Paper

ಕುಪ್ಪೆಪದವು ಸ್ವಲಾತ್ ಕಮಿಟಿ- ಅಧ್ಯಕ್ಷರಾಗಿ N.S ನೌಫಲ್ ಪುನರಾಯ್ಕೆ

ಮಂಗಳೂರು – ಬದ್ರಿಯಾ ಜುಮಾ ಮಸ್ಜಿದ್ ಮತ್ತು ಮದೀನತುಲ್ ಉಲೂಮ್ ಮದ್ರಸ ಕುಪ್ಪೆಪದವು ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಬದ್ರಿಯಾ ಸ್ವಲಾತ್ ಕಮಿಟಿ ಇದರ ವಾರ್ಷಿಕ ಮಹಾ ಸಭೆಯು ಬದ್ರಿಯಾ ಜುಮಾ ಮಸ್ಜಿದ್ ಅಧ್ಯಕ್ಷರಾದ ಮುಹಮ್ಮದ್ ಶರೀಫ್ ಕಜೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು ಸ್ಥಳೀಯ ಖತೀಬರಾದ K.H.U ಶಾಫಿ ಮದನಿ ಕರಾಯ ಇವರ ವಿಷಯ ಮಂಡನೆಯ ಬಳಿಕ ನೂತನ ಸಮಿತಿಯನ್ನು ರಚಿಸಲಾಯಿತು.

ಸಮಿತಿಯ ವಿವರಗಳು
ಗೌರವಾಧ್ಯಕ್ಷರು -K.H.U ಶಾಫಿ ಮದನಿ ಕರಾಯ
ಅಧ್ಯಕ್ಷರು -N.S ನೌಫಲ್
ಉಪಾಧ್ಯಕ್ಷರು-ಬದ್ರುಲ್ ಮುನೀರ್ ಕಾಡಕ್ಕೇರಿ,
ಅಬ್ದುಲ್ ರಝಾಕ್ ಹಳೆನೀರು
ಪ್ರಧಾನ ಕಾರ್ಯದರ್ಶಿ-ಅಬೂಬಕ್ಕರ್ ಸಿದ್ದೀಕ್ ಹಳೆನೀರು
ಜೊತೆ ಕಾರ್ಯದರ್ಶಿ – ಇಸ್ಮಾಯಿಲ್ ಸ್ವರೂಫ್ ಕಜೆ ,ಆಸೀಫ್ ಕಾಡಕ್ಕೇರಿ
ಕೋಶಾಧಿಕಾರಿ – ನಝೀರ್ ಫಿದಾ
ಆಯ್ಕೆಯಾದರು.ಸದ್ರಿ ಸಮಿತಿಗೆ
BJM ಆಡಳಿತ ಸಮಿತಿಯ 23 ಸದಸ್ಯರನ್ನು ಖಾಯಂ ಆಹ್ವಾನಿತ ಸದಸ್ಯರಾಗಿ ಮತ್ತು 15 ಮಂದಿ ಕಾರ್ಯಕಾರಿಣಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಸಭೆಯ ಆರಂಭದಲ್ಲಿ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ರಫೀಕ್ ಆಚಾರಿಜೋರಾ ಸ್ವಾಗತಿಸಿ,ಸ್ವಲಾತ್ ಕಮಿಟಿ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್ ಹಳೆ ನೀರು ಧನ್ಯವಾದ ಗೈದರು.

ರಿಪೋರ್ಟ್ – K.H.U ಶಾಫಿ ಮದನಿ ಕರಾಯ

error: Content is protected !! Not allowed copy content from janadhvani.com