ಉಳ್ಳಾಲ: ಕರ್ನಾಟಕದ ಉತ್ತರ ದ ಜಿಲ್ಲೆಗಳಲ್ಲಿ ಶೈಕ್ಷಣಿಕ, ಸಾಮಾಜಿಕ ಕಾರ್ಯ ಚಟುವಟಿಕೆಗಳನ್ನು ನಡೆಸುವ
ಇಹ್ಸಾನ್ ಕರ್ನಾಟಕ ವತಿಯಿಂದ
ಇಹ್ಸಾನೋತ್ಸವ 2025 ಗ್ರ್ಯಾಂಡ್ ಅಸೆಂಬ್ಲೇಜ್ ಜನವರಿ 19 ,20 ರಂದು ಕೊಪ್ಪಳದ ಗಂಗಾವತಿಯಲ್ಲಿ ನಡೆಯುವ ಕಾರ್ಯಕ್ರಮದ ಪ್ರಚರಾರ್ಥ ಸ್ನೇಹ ಸಂಚಾರ ಯಾತ್ರೆ ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಝಿಯಾರತ್ ನೊಂದಿಗೆ ಆರಂಭಗೊಂಡಿತು.

ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿ ನಿಕಟ ಪೂರ್ವ ಅಧ್ಯಕ್ಷ, ಖ್ಯಾತ ವಾಗ್ಮಿ ಡಾ: ಮುಹಮ್ಮದ್ ಫಾರೂಕ್ ನಈಮಿ ಕಾರ್ಯಕ್ರಮ ಉದ್ಘಾಟಿಸಿ ಸ್ನೇಹ ಸಂಚಾರಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮುಸ್ಲಿಂ ಜಮಾತ್ ರಾಜ್ಯ ಉಪಾದ್ಯಕ್ಷರಾದ ಶಾಫಿ ಸಾದಿ ಬೆಂಗಳೂರು ಎಸ್ ವೈ ಎಸ್ ಮಾಜಿ ರಾಜ್ಯಾಧ್ಯಕ್ಷ ಎಂ ಎಸ್ ಎಂ ಅಬ್ದುಲ್ ರಶೀದ್ ಝೈನಿ ಉಳ್ಳಾಲ ಎಸ್ ವೈ ಎಸ್ ಪ್ರಮುಖರಾದ ಸಯ್ಯಿದ್ ಜಲಾಲ್ ತಂಙಳ್, ಸೆಯ್ಯಿದ್ ಖುಬೈಬ್ ತಂಙಳ್,
ಇಹ್ಸಾನೋತ್ಸವ ಸ್ವಾಗತ ಸಮಿತಿ ನಾಯಕರಾದ ಡಾ: ಶೇಖ್ ಬಾವ ಹಾಜಿ, ಕೆಸಿಎಫ್ ಐಸಿ ನಾಯಕರಾದ ಎನ್ ಎಸ್ ಅಬ್ದುಲ್ಲ, ಇಕ್ಬಾಲ್ ಕಾಜೂರು, ಇಸ್ಮಾಯಿಲ್ ಹಾಜಿ ದುಬಾಯಿ, ಪಾರೂಕ್ ಮಲಾಝ್,ಖಾದರ್ ಸಾಲೆತ್ತೂರು ದುಬಾಯಿ, ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾಧ್ಯಕ್ಷ ಆಲಿಕುಂಞ ಪಾರೆ, ರಾಜ್ಯ ಕಾರ್ಯದರ್ಶಿ ಅಶ್ರಫ್ ಕಿನಾರ ಮಂಗಳೂರು, ದರ್ಗಾ ಕೋಶಾಧಿಕಾರಿ ನಾಝಿಮ್ ಮುಕ್ಕಚ್ಚೇರಿ,ಇಸ್ಹಾಖ್ ಹಾಜಿ,ಮುಸ್ತಫ,ಬಷೀರ್ ಸಖಾಫಿ,ಸಮೀರ್ ,ಇಲ್ಯಾಸ್ ಕೈಕೋ, ಜಾಥ ನಾಯಕರಾದ ಎಂಪಿಎಂ ಅಶ್ರಫ್ ಸಅದಿ, ಸಿಎಚ್ ಮುಹಮ್ಮದಲಿ ಸಖಾಫಿ ಅಶ್ಹರಿಯ್ಯಾ,ಹಾಫಿಳ್ ಯಾಕೂಬ್ ಸಅದಿ,ಇಸಾಕ್ ತಂಙಳ್, ಮೆಹ್ ಬೂಬ್ ಸಖಾಫಿ, ಸಲೀಂ ಕನ್ಯಾಡಿ,ನವಾಝ್ ಸಖಾಫಿ, ಅಬ್ದುಲ್ ರಹ್ಮಾನ್ ಮೊಗರ್ಪಣೆ, ರಮೀಝ್ ಮೇಲಂಗಡಿ,ಹಂಝ ಯುಬಿ ಮೊದಲಾದವರು ಉಪಸ್ಥಿತರಿದ್ದರು.