ಮಂಗಳೂರು: ವಕ್ಫ್ ಆಸ್ತಿಯನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಬೇಕೆಂದು ಯತ್ನಾಳ್ ಪ್ರಧಾನಿಗೆ ಪತ್ರ ಬರೆದಿದ್ದಾರೆ ಎಂದಿದ್ದಾರೆ. ವಕ್ಫ್ ಆಸ್ತಿ ಮುಸ್ಲಿಮರು ಈ ದೇಶಕ್ಕೆ ಈಗಾಗಲೇ ನೀಡಿದ ಆಸ್ತಿ ಆಗಿದೆ. ಮುಸ್ಲಿಮರು ತಮ್ಮ ಆರಾಧನೆ, ಶಿಕ್ಷಣ, ಆರೋಗ್ಯ ಇತ್ಯಾದಿಗಾಗಿ ಇತರರ ಅವಲಂಬನೆಯನ್ನು ಹೊಂದಿಲ್ಲ, ಹೊಂದುವುದೂ ಇಲ್ಲ ಎಂದು ಯತ್ನಾಳ್ ಅವರ ದ್ವೇಷ ಭಾಷಣಕ್ಕೆ ಕೆ.ಅಶ್ರಫ್ ಪ್ರತಿಕ್ರಿಯಿಸಿದ್ದಾರೆ.
ವಕ್ಫ್ ಆಸ್ತಿ ಯತ್ನಾಳ್ ಹಿರಿಯರ ಆಸ್ತಿ ಏನು ಅಲ್ಲ. ತನ್ನ ಕೊಳಕು ಬಾಯಿಂದ ಸಮಾಜದಲ್ಲಿ ದ್ವೇಷ ಭಾಷಣವನ್ನು ಉದುರಿ ಸಮಾಜದ ಶಾಂತಿ ಮತ್ತು ಸ್ವಾಸ್ತವನ್ನು ವ್ಯತ್ಯಯ ಗೊಳಿಸುವ ಯತ್ನಾಳ್ ರಂತವರಿಂದ ಈ ದೇಶದ ಸಂಪತ್ತನ್ನು ನಿರ್ವಹಿಸುವ ಗತಿಗೇಡಿ ತನದ ಸಲಹೆಯ ಅಗತ್ಯವೂ ಇಲ್ಲ.
ವಕ್ಫ್ ಆಸ್ತಿಯ ಒಂದಿಂಚು ಸ್ಥಳವನ್ನು ಕೂಡಾ ಅದರ ಉದ್ದೇಶದ ಹೊರತಾದ ಕಾರ್ಯಕ್ಕೆ ಬಳಸುವಂತಿಲ್ಲ ಎಂಬುದನ್ನು ಯತ್ನಾಳ್ ಅರಿಯಲಿ. ಈ ದೇಶಕ್ಕೆ ಮುಸ್ಲಿಮರು ಸಮರ್ಪಿಸಿದ ಅಷ್ಟೂ ಸ್ಮಾರಕಗಳನ್ನು ಯತ್ನಾಳ್ ಒಮ್ಮೆ ವೀಕ್ಷಿಸಿ ಬರಲಿ, ಈ ದೇಶದ ಸಂವಿಧಾನವನ್ನು ಒಮ್ಮೆ ಓದಿ ನೋಡಲಿ, ಅಷ್ಟೂ ಸಾಧ್ಯವಾಗದಿದ್ದರೆ ತನ್ನ ದ್ವೇಷ ಭಾಷಣವನ್ನು ನಿಲ್ಲಿಸಿ ವಚನ ಸಾಹಿತ್ಯದ ಕೆಲವು ಪ್ರತಿಗಳನ್ನದರೂ ಸಾರ್ವಜನಿಕವಾಗಿ ಹಂಚಲಿ, ಅಷ್ಟಾದರೂ ಯತ್ನಾಳ್ ಈ ನಾಡಿಗೆ ಕೊಡುಗೆಯನ್ನು ನೀಡುವ ಮನಸ್ಸು ಮಾಡಿ ಧನ್ಯರಾಗಲಿ ಎಂದು ಕೆ.ಅಶ್ರಫ್( ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಪತ್ರಿಕಾ ಹೇಳಿಕೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ