ಮಂಗಳೂರು: ಹುಬ್ಬಳ್ಳಿಯ ಮೀರಾಪುರನಲ್ಲಿ ಗಿರೀಶ್ ಸಾವಂತ್ (21) ಎಂಬ ಯುವಕ ಅಂಜಲಿ (20 ವ ) ಎಂಬ ಯುವತಿಯನ್ನು ತನ್ನ ಪ್ರೇಮ ವೈಫಲ್ಯ ಕಾರಣದಿಂದಾಗಿ ಹತ್ಯೆ ಮಾಡಿದ್ದು, ಘಟನೆಯು ವ್ಯಾಪಕತೆ ಪಡೆದಿದೆ.
ಇಂತಹ ವ್ಯಾಪಕತೆ ಪಡೆಯಲು,ಇತ್ತೀಚಿಗಿನ ಚುನಾವಣಾ ಪೂರ್ವ, ಬಿಜೆಪಿಗರ, ನೇಹಾ ಹತ್ಯೆ
ಪ್ರಕರಣದಲ್ಲಿ ಸಾಮಾನ್ಯ ಘಟನೆಯನ್ನು, ಆರೋಪಿತನು ಮುಸ್ಲಿಮ್ ನಾಮಾಂಕಿತ ಎಂಬ ಕಾರಣಕ್ಕಾಗಿ ಹತ್ಯೆ ಆರೋಪವನ್ನು ರಾಜ್ಯದ ಇಡೀ ಅಲ್ಪಸಂಖ್ಯಾತ ಸಮುದಾಯದ ಮೇಲೆ ಎತ್ತಿ ಕಟ್ಟಿ ಸಾಮೂಹಿಕ ಗಲಭೆ ಸೃಷ್ಟಿಸುವ ಪ್ರಯತ್ನದ ಮಟ್ಟಕ್ಕೆ ತಲುಪಿಸಿರುತ್ತಾರೆ.
ರಾಜ್ಯದ ಮುಖ್ಯಮಂತ್ರಿ ಈ ಘಟನೆಗೆ ನೇರ ಕಾರಣ ಎನ್ನುವ ಮಟ್ಟಕ್ಕೆ ಬಿಜೆಪಿಗರು ಅದನ್ನು ಎಳೆದು ಬಿಂಬಿಸಲು ಪ್ರಯತ್ನಿಸಿದ್ದು, ದುಷ್ಕರ್ಮಿ ಯುವಕ ಮಾಡಿದ ಸ್ವಯಂಕೃತ ಅಪರಾಧಕ್ಕೆ ಸಂಪೂರ್ಣ ಮುಸ್ಲಿಮ್ ಅಲ್ಪ ಸಂಖ್ಯಾತ ಸಮುದಾಯವನ್ನು ಹೊಣೆಯಾಗಿಸಿ, ಮುಸ್ಲಿಮೇತರ ಸಮುದಾಯದವರ ದೃಷ್ಟಿಯಲ್ಲಿ ಅಲ್ಪ ಸಂಖ್ಯಾತ ಸಮುದಾಯವನ್ನು ಅಪರಾಧಿ ಎಂಬಂತೆ ಬಿಂಬಿಸುವ ಪ್ರಯತ್ನವನ್ನು ಪ್ರಹ್ಲಾದ್ ಜೋಷಿ ನೇತೃತ್ವದಲ್ಲಿ ಮಾಡಲಾಗಿದೆ.
ಇಂದು ಅಂತಹುದೇ ಘಟನೆ ಅಂಜಲಿ ಎಂಬ ಅಮಾಯಕ ಯುವತಿಗೆ ಸಂಭವಿಸಿರುವುದು ಖೇದಕರ, ಆದರೆ ರಾಜ್ಯ ಬಿಜೆಪಿ ನಾಯಕರು ಈ ಹತ್ಯೆಯನ್ನೂ ಕೂಡಾ ನೇಹಾ ಹತ್ಯೆಗೆ ಸಮಾನವಾಗಿ ಪರಿಗಣಿಸುವರೆ? ಎಂದು ನೋಡಬೇಕಿದೆ, ಸಾಮಾನ್ಯ ಹತ್ಯೆ ಘಟನೆಯನ್ನು ವೈಭವೀಕರಿಸಿ ಪ್ರತಿಭಟನೆ,ಹೇಳಿಕೆಗಳು, ಕೋಮು ವಿದ್ವೇಷತೆಯನ್ನು ಉತ್ತೇಜಿಸಿರುವುದು ನಾವು ಈ ಹಿಂದೆ ನೋಡಿದ್ದೇವೆ.
ರಾಜ್ಯ ಬಿಜೆಪಿಗರು ಪ್ರಸ್ತುತ ಅಂಜಲಿ ಹತ್ಯೆಯ ಮಹತ್ವವನ್ನು ಮಾನ್ಯ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪ್ರಕರಣದ ಗಂಭೀರತೆಯನ್ನು ತಿಳಿಸಬೇಕಿದೆ!.
ರಾಜ್ಯ ಬಿಜೆಪಿ ನಾಯಕರ ಪ್ರತಿಕ್ರಿಯೆಗೆ ಜನತೆ ಕಾಯುತ್ತಿದೆ. ಆರೋಪಿತರು ಭಿನ್ನ ಸಮುದಾಯಕ್ಕೆ ಸೇರಿದವರಾದುದರಿಂದ, ಪ್ರಕರಣದಲ್ಲಿ ಪ್ರತಿಭಟನೆ,ಪ್ರಚಾರ, ನ್ಯಾಯ ವ್ಯತ್ಯಯತೆಯ ವಿಧಗಳನ್ನಾದರೂ ಬಹಿರಂಗ ಪಡಿಸಲಿ. ಇತ್ತೀಚೆಗೆ ನೇಹಾ ಹತ್ಯಾ ಪ್ರಕರಣದಲ್ಲಿ ಗಂಭೀರವಾಗಿ ಪ್ರತಿಕ್ರಿಯಿಸಿದ, ದ.ಕ.ಜಿಲ್ಲೆಯ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಶ್ರೀ ವೇದವ್ಯಾಸ ಕಾಮತ್ ರವರು ಇಂದೇ ಹುಬ್ಬಳಿಗೆ ಹೊರಡುವರೇ?! ನೋಡಬೇಕಿದೆ ?!.
ಹಾನಿಯಾದ ಅಮಾಯಕ ಜೀವಕ್ಕೆ ಸಂತಾಪವಿರಲಿ.
ಕೆ.ಅಶ್ರಫ್( ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
















ಇನ್ನಷ್ಟು ಸುದ್ದಿಗಳು
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ