janadhvani

Kannada Online News Paper

ಮೂಳೂರು ಅಲ್ ಇಹ್ಸಾನ್: ಪಿ.ಯು. ಫಲಿತಾಂಶದಲ್ಲಿ ಆಫ್ನಾಝ್ ಡಿಷ್ಟಿಂಕ್ಷನ್ ನಲ್ಲಿ ತೇರ್ಗಡೆ

ಸೌದಿ ಅರೇಬಿಯಾದ ಡಿಕೆಯಸ್ಸಿ ದಮ್ಮಾಂ ಘಟಕದ ಹಿರಿಯ ಸಲಹೆಗಾರ ಅಬೂಬಕ್ಕರ್ ಅಜಿಲಮೊಗರು ಮತ್ತು ಅಸ್ಮಾ ದಂಪತಿಗಳ ಸುಪುತ್ರಿ.

ಮಂಗಳೂರು: ಕರ್ನಾಟಕ ರಾಜ್ಯ ಬೋರ್ಡ್ 2024 ರ ಮಾರ್ಚ್ ನಲ್ಲಿ ಆಯೋಜಿಸಿದ ಪ್ರಿ ಯುನಿವರ್ಸಿಟಿ ಪಿಸಿಯಂಬಿ ಪರೀಕ್ಷೆಯಲ್ಲಿ ಆಫ್ನಾಝ್ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿರುತ್ತಾರೆ.

ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ಡಿಕೆಯಸ್ಸಿ) ಮಂಗಳೂರು ಇದರ ಅಧೀನದ ಮೂಳೂರು ಅಲ್ ಇಹ್ಸಾನ್ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯಾಗಿರುವ ಆಫ್ನಾಝ್ ಗಲ್ಫ್ ಉದ್ಯಮಿ, ಸೌದಿ ಅರೇಬಿಯಾದ ಡಿಕೆಯಸ್ಸಿ ದಮ್ಮಾಂ ಘಟಕದ ಹಿರಿಯ ಸಲಹೆಗಾರ ಅಬೂಬಕ್ಕರ್ ಅಜಿಲಮೊಗರು ಮತ್ತು ಅಸ್ಮಾ ದಂಪತಿಗಳ ಸುಪುತ್ರಿ.

2022 ರ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದ ಆಫ್ನಾಝ್ ಮುಂದಕ್ಕೆ ಡಾಕ್ಟರ್ ಆಗುವ ಅಭಿಲಾಷೆಯನ್ನು ಹೊಂದಿದ್ದಾರೆ.
ರಕ್ಷಕರು, ಕುಟುಂಬಸ್ಥರು ಹಾಗೂ ಶಾಲೆಗೆ ಹೆಮ್ಮೆಯನ್ನು ತಂದಿರುವ ಈ ವಿದ್ಯಾರ್ಥಿನಿಯನ್ನು ಶಾಲಾ ಶಿಕ್ಷಕರ ಹಾಗೂ ಆಡಳಿತ ಸಮಿತಿ ಕೃತಜ್ಞತೆ ಸಲ್ಲಿಸಿದ್ದಾರೆ.

error: Content is protected !! Not allowed copy content from janadhvani.com