janadhvani

Kannada Online News Paper

ಇಂದು ಕುವೈತ್ ನಲ್ಲಿ ಮುಈನುಸುನ್ನಾ ಮವದ್ದಾ ಸ್ನೇಹ ಸಂಗಮ

ಉತ್ತರ ಕರ್ನಾಟಕದ ಮೊದಲ ಸಮನ್ವಯ ಶಿಕ್ಷಣ ಸಂಸ್ಥೆ ಮುಈನುಸುನ್ನಾ ವಿದ್ಯಾಸಂಸ್ಥೆ ಹಾವೇರಿ ಕುವೈತ್ ಸಮಿತಿ ವತಿಯಿಂದ ಇಂದು ಸಂಜೆ 6 ಗಂಟೆಗೆ ಕುವೈತ್ ಮಹಬುಲ್ಲಾ,ಕಲಾ ಆಡಿಟೋರಿಯಂ ನಲ್ಲಿ ಮವದ್ದಾ ಸ್ನೇಹ ಸಂಗಮ ನಡೆಯಲಿದೆ.

ಕುವೈತ್ ಮುಈನುಸುನ್ನಾ ರಾಷ್ಟ್ರೀಯ ಸಮಿತಿ ಅಧ್ಯಕ್ಷ ರಾದ ಹೈದರ್ ಹಾಜಿ ಪಟ್ಟೋರಿ ಯವರ ಅಧ್ಯಕ್ಷ ತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮ ದಲ್ಲಿ,ICFಕುವೈತ್ ನಾಯಕರಾದ ಸಯ್ಯಿದ್ ಅಲವೀ ಸಖಾಫೀ ಯವರು ದುಆ ನಡೆಸಲಿದ್ದಾರೆ.

KCF ಅಂತಾರಾಷ್ಟ್ರೀಯ ಸಮಿತಿ ಆಡಳಿತ ವಿಭಾಗ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಸಖಾಫಿ ಪೊಯ್ಯತ್ತಬೈಲ್ ಉದ್ಘಾಟನೆ ಮಾಡಲಿದ್ದಾರೆ..SSFರಾಜ್ಯಕೋಶಧಿಕಾರಿ ಹಾಗು ಮುಈನುಸ್ಸನ್ನಾ ಶಿಕ್ಷಣ ಸಂಸ್ಥೆ ಗಳ ಸ್ಥಾಪಕ ನಿರ್ದೇಶಕ ರಾದ ಕೆ.ಎಂ ಮುಸ್ತಫಾ ನ‌ಈಮಿ ಹಿಮಮಿ ಹಾವೇರಿ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ… ICF ಕುವೈತ್ ನಾಯಕರಾದ ಸಯ್ಯಿದ್ ಸ್ವಾದಿಖ್ ತಂಙಳ್ ,KCF ಕುವೈತ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಯಾಕೂಬ್ ಕಾರ್ಕಳ, DKSC ಮೂಳೂರು ಇದರ ಕುವೈತ್ ಸಮಿತಿ ಅಧ್ಯಕ್ಷ ರಾದ ಯೂಸುಫ್ ಮಂಚಕಲ್,ಅಲ್ ಮದೀನಾ ಸಮಿತಿ ಅಧ್ಯಕ್ಷ ರಾದ ಶಾಹುಲ್ ಹಮೀದ್ ಸ‌ಅದಿ ,ಖಾದಿಸ ಸಮಿತಿ ಅಧ್ಯಕ್ಷ ರಾದ ಶೌಕತ್ ಶಿರ್ವ ಸೇರಿದಂತೆ ಹಲವು ಗಣ್ಯರು ಮಾತನಾಡಲಿದ್ದಾರೆ. ಅಬ್ದುಲ್ ಖಾದರ್ ಹಿಮಮಿ ಸಖಾಫಿ ಸ್ವಾಗತಿಸಿ, ಇಲ್ಯಾಸ್ ಮೋಂಟೊಗೋಳಿ ವಂದಿಸಲಿದ್ದಾರೆ.

ಇದನ್ನೂ ಓದಿರಿ...