ಮಂಗಳೂರು: ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ ಬಿಜೆಪಿ ಪಕ್ಷದ ನಾರಿ ಶಕ್ತಿ ಸಮಾವೇಶದಲ್ಲಿ ಮಾಳವಿಕಾ ಅವಿನಾಶ್ ರವರು ದ.ಕ.ಜಿಲ್ಲೆಯ ಜನರ ರಕ್ತ ಕೇಸರಿ ಎಂದು ಹೇಳಿದ್ದಾರೆ.
ಮಾಳವಿಕಾರವರು ಅರಿತಿಲ್ಲ ದ.ಕ.ಜಿಲ್ಲೆಯ ಜನರನ್ನು ಮತೀಯ ಸಂಕೇತ,ಚಿಹ್ನೆ, ಪದಬಳಕೆಗಳನ್ನು ಹರಿಬಿಟ್ಟು ಇಲ್ಲಿನ ಜನತೆಯನ್ನು ಆ ಕಾರಣಕ್ಕಾಗಿ ವಿಭಜಿಸಿ ಘರ್ಷಣೆಗೆ ಎಳೆದು ಹಾಕಿ, ಫಸಲು ಕೊಯ್ಯುವ ಕಾರ್ಯ ಎಂದು. ಮಾಳವಿಕಾ ಅವರು ತಿಳಿಯಲಿ, ದ.ಕ.ಜಿಲ್ಲೆಯ ಜನರ ರಕ್ತ ಕೇಸರಿ ಅಲ್ಲ,ಅದು ಕೆಂಪು ಆಗಿಯೇ ಉಳಿದಿದೆ . ಆದರೆ ಜಿಲ್ಲೆಯ ಅಸ್ಮಿತೆಯ ಬಗ್ಗೆ ಲವ ಲೇಶವೂ ತಿಳಿಯದ ಮಾಳವಿಕಾ ರವರ ಕಣ್ಣು ಹಳದಿ ಆಗಿದೆ, ಆದುದರಿಂದಲೇ ಮಾಳವಿಕಾ ರವರು ಕೇಸರಿ ಅಲ್ಲದ ತನ್ನ ರಕ್ತ ಕೆಂಪು ಎಂದು ಗೊತ್ತಿದ್ದರೂ ದ.ಕ.ಜಿಲ್ಲೆಯ ಜನರ ರಕ್ತದ ಬಣ್ಣವನ್ನು ಬದಲಿಸಲು ಹೊರಟಿದ್ದಾರೆ ಎಂದು ಕೆ.ಅಶ್ರಫ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಳವಿಕಾ ರಂತಹ ಹಳದಿ ಕಣ್ಣಿನ ನಾರಿಗಳು ಭಾರತದಲ್ಲಿರುವುದರಿಂದಲೇ ದ.ಕ.ಜಿಲ್ಲೆಯ ಜನರ ರಕ್ತವನ್ನು ಕಪ್ಪು ಬಣ್ಣಕ್ಕೆ ಹೆಪ್ಪು ಗಟ್ಟಿಸುವ ಈ ಹಿಂದಿನ ಹಲವು ಪ್ರಯತ್ನಗಳಿಂದಲೇ ಅಮಾಯಕ ಮುಗ್ಧ ಜನರು ಜಾತಿ ಧರ್ಮದ ಹೆಸರಲ್ಲಿ ಪ್ರಾಣ ಹಾನಿ ಗೊಳಗಾಗಲು ಕಾರಣ. ಮಾಳವಿಕಾ ಇನ್ನಾದರೂ ತನ್ನ ಹಳದಿ ಕಣ್ಣಿನಿಂದ ದ.ಕ.ಜಿಲ್ಲೆ ಮಾತ್ರವಲ್ಲ ಇಡೀ ದೇಶದ ಜನರ ರಕ್ತ ಕೆಂಪು ಎಂದು ಅರಿತು ಅದನ್ನು ಹೆಪ್ಪುಗಟ್ಟುವ ಕಪ್ಪು ಬಣ್ಣಕ್ಕೆ ತಿರುಗಿಸದಿರುವ ಕಾರ್ಯಕ್ಕೆ ಮುಂದಾಗಲಿ ಎಂದು ಕೆ.ಅಶ್ರಫ್( ಮಾಜಿ ಮೇಯರ್) ಪತ್ರಿಕಾ ಹೇಳಿಕೆಯಲ್ಲಿ ಹೇಳಿದ್ದಾರೆ.
















ಇನ್ನಷ್ಟು ಸುದ್ದಿಗಳು
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್