ಮಕ್ಕತುಲ್ ಮುಕರ್ರಮಃ: ಮಂಗಳೂರಿನಿಂದ ಉಮ್ರಾಕೆ ತೆರಳಿದ್ದ ಬಂಟ್ವಾಳದ ಐಸಮ್ಮ ಎಂಬವರು ಮಾ.8 ರಿಂದ ಮಕ್ಕಾದ ಮಸ್ಜಿದುಲ್ ಹರಂನಲ್ಲಿ ಕಾಣೆಯಾಗಿದ್ದರು.
ಅವರಿಗಾಗಿ ತೀವ್ರ ಹುಡುಕಾಟ ನಡೆಸಿದ ಕೆಸಿಎಫ್, ಐಸಿಎಫ್ ಕೆಎಂಸಿಸಿ ಸಹಿತವಿರುವ ಕಾರ್ಯಕರ್ತರ ತೀವ್ರ ಪರಿಶ್ರಮದಿಂದ ಎಂಟು ದಿನಗಳ ಬಳಿಕ ಇಂದು ಮಾ.16 ರಂದು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಮಕ್ಕಾದ ಹರಂನಲ್ಲಿ ಕೆಲಸಮಾಡುತ್ತಿರುವ ಕೆಸಿಎಫ್ ನ ಸಕ್ರಿಯ ಕಾರ್ಯಕರ್ತ ಶರೀಫ್ ಸಜಿಪ ರವರು ಮಸ್ಜಿದುಲ್ ಹರಂ ಪರಿಸರದಲ್ಲೇ ಐಸಮ್ಮ ಅವರನ್ನು ಪತ್ತೆಹಚ್ಚಿದ್ದಾರೆ.
ಅವರು ಮಕ್ಕಾದಲ್ಲಿ ತಮ್ಮ ವಾಸ ಸ್ಥಳದಿಂದ ಯಾವುದೇ ಬ್ಯಾಗ್, ಐಡಿ ಕಾರ್ಡ್ ಅಥವಾ ಉಮ್ರಾ ಗ್ರೂಪ್ ನೀಡಿರುವ ಶಾಲ್ ತೆಗೆದುಕೊಳ್ಳದೆ ಹರಂ ಗೆ ತೆರಳಿದ್ದ ಕಾರಣ, ರಮಳಾನ್ ಪ್ರಯುಕ್ತ ಭಾರೀ ಜನಸಂದಣಿಯ ವಾತಾವರಣದಲ್ಲಿ ಮಸ್ಜಿದುಲ್ ಹರಂನಲ್ಲಿ ಪತ್ತೆ ಹಚ್ಚುವುದು ಬಲು ದೊಡ್ಡ ಸವಾಲಾಗಿತ್ತು.
ಇವರ ಪತ್ತೆಯಿಲ್ಲದೆ, ಇವರನ್ನು ಕರಕೊಂಡು ಹೋಗಿದ್ದ ಉಮ್ರಾ ಗ್ರೂಪ್ ಸಂಕಷ್ಟಕ್ಕೆ ಸಿಲುಕಿತ್ತು. ಅವರ ಕುಟುಂಬಸ್ಥರು ತೀವ್ರ ದುಃಖಕ್ಕೀಡಾಗಿದ್ದರು.


















ಇನ್ನಷ್ಟು ಸುದ್ದಿಗಳು
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ
ಮದ್ರಸ ಮುಅಲ್ಲಿಮರ ಮೇಲೆ ಹಲ್ಲೆ ಪ್ರಕರಣ: ಎಸ್ಜೆಎಂ ದ.ಕ. ಸೌತ್ ಜಿಲ್ಲಾ ಸಮಿತಿ ತೀವ್ರ ಖಂಡನೆ
ಮದ್ರಸಾ ಅಧ್ಯಾಪಕರ ಮೇಲೆ ಹಲ್ಲೆ- ಎಸ್.ವೈ.ಎಸ್ ದ.ಕ ಜಿಲ್ಲೆ ವೆಸ್ಟ್ ಖಂಡನೆ
ಇರಾಕ್ನಲ್ಲೂ ಖಾಮ್ನಈ ಅಂತ್ಯಕ್ರಿಯೆ ವಿಧಿವಿಧಾನಗಳು; ನಜಫ್ನತ್ತ ಹರಿದುಬಂದ ಜನಸಾಗರ
ಒಪ್ಪಂದವನ್ನು ಗಾಳಿಗೆ ತೂರಿ ಇರಾನ್ ಮೇಲೆ ಯುಎಸ್ ದಾಳಿ- ಗಲ್ಫ್ ವಲಯದಲ್ಲಿ ಮತ್ತೆ ಆತಂಕ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ: ನಾಳೆ (ಜುಲೈ 8) ಶಾಲಾ-ಕಾಲೇಜುಗಳಿಗೆ ರಜೆ
ಅಜ್ಜಿನಡ್ಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಮಹಾಸಭೆ : ನೂತನ ಪದಾಧಿಕಾರಿಗಳ ಆಯ್ಕೆ