ಮಕ್ಕತುಲ್ ಮುಕರ್ರಮಃ: ಮಂಗಳೂರಿನಿಂದ ಉಮ್ರಾಕೆ ತೆರಳಿದ್ದ ಬಂಟ್ವಾಳದ ಐಸಮ್ಮ ಎಂಬವರು ಮಾ.8 ರಿಂದ ಮಕ್ಕಾದ ಮಸ್ಜಿದುಲ್ ಹರಂನಲ್ಲಿ ಕಾಣೆಯಾಗಿದ್ದರು.
ಅವರಿಗಾಗಿ ತೀವ್ರ ಹುಡುಕಾಟ ನಡೆಸಿದ ಕೆಸಿಎಫ್, ಐಸಿಎಫ್ ಕೆಎಂಸಿಸಿ ಸಹಿತವಿರುವ ಕಾರ್ಯಕರ್ತರ ತೀವ್ರ ಪರಿಶ್ರಮದಿಂದ ಎಂಟು ದಿನಗಳ ಬಳಿಕ ಇಂದು ಮಾ.16 ರಂದು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಮಕ್ಕಾದ ಹರಂನಲ್ಲಿ ಕೆಲಸಮಾಡುತ್ತಿರುವ ಕೆಸಿಎಫ್ ನ ಸಕ್ರಿಯ ಕಾರ್ಯಕರ್ತ ಶರೀಫ್ ಸಜಿಪ ರವರು ಮಸ್ಜಿದುಲ್ ಹರಂ ಪರಿಸರದಲ್ಲೇ ಐಸಮ್ಮ ಅವರನ್ನು ಪತ್ತೆಹಚ್ಚಿದ್ದಾರೆ.
ಅವರು ಮಕ್ಕಾದಲ್ಲಿ ತಮ್ಮ ವಾಸ ಸ್ಥಳದಿಂದ ಯಾವುದೇ ಬ್ಯಾಗ್, ಐಡಿ ಕಾರ್ಡ್ ಅಥವಾ ಉಮ್ರಾ ಗ್ರೂಪ್ ನೀಡಿರುವ ಶಾಲ್ ತೆಗೆದುಕೊಳ್ಳದೆ ಹರಂ ಗೆ ತೆರಳಿದ್ದ ಕಾರಣ, ರಮಳಾನ್ ಪ್ರಯುಕ್ತ ಭಾರೀ ಜನಸಂದಣಿಯ ವಾತಾವರಣದಲ್ಲಿ ಮಸ್ಜಿದುಲ್ ಹರಂನಲ್ಲಿ ಪತ್ತೆ ಹಚ್ಚುವುದು ಬಲು ದೊಡ್ಡ ಸವಾಲಾಗಿತ್ತು.
ಇವರ ಪತ್ತೆಯಿಲ್ಲದೆ, ಇವರನ್ನು ಕರಕೊಂಡು ಹೋಗಿದ್ದ ಉಮ್ರಾ ಗ್ರೂಪ್ ಸಂಕಷ್ಟಕ್ಕೆ ಸಿಲುಕಿತ್ತು. ಅವರ ಕುಟುಂಬಸ್ಥರು ತೀವ್ರ ದುಃಖಕ್ಕೀಡಾಗಿದ್ದರು.


















ಇನ್ನಷ್ಟು ಸುದ್ದಿಗಳು
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್