ದಮ್ಮಾಮ್ : ಏರ್ ಇಂಡಿಯಾ ವಿಮಾನವು ತನ್ನ ವಿಳಂಬ ಪಲ್ಲವಿಯನ್ನು ಮುಂದುವರಿಸಿ, ಪ್ರಯಾಣಿಕರನ್ನು ಸತಾಯಿಸುವ ಚಾಳಿಯನ್ನು ರೂಢಿಸಿಕೊಂಡಿದೆ. ನಿನ್ನೆ ದಮ್ಮಾಮ್ನಿಂದ ಮಂಗಳೂರಿಗೆ ತೆರಳಬೇಕಾದ Air India Express ವಿಮಾನ ಕ್ಲಪ್ತ ಸಮಯಕ್ಕೆ ಪ್ರಯಾಣಿಸದೆ, ಪ್ರಯಾಣಿಕರನ್ನು ಕುಳ್ಳಿರಿಸಿ ವಿಮಾನದೊಳಗೆ ಉಸಿರುಗಟ್ಟಿಸುವಂತೆ ಮಾಡಿದೆ.
ನಿನ್ನೆ ರಾತ್ರಿ (23/02/2024) 10:20 ಕ್ಕೆ ಟೇಕ್ಆಫ್ ಆಗ ಬೇಕಿದ್ದ ವಿಮಾನ ಒಂದು ಗಂಟೆಗಳ ಕಾಲ ವಿಳಂಬಗೊಂಡಿದೆ. ಸುಮಾರು ಒಂದು ಗಂಟೆಗಳ ಕಾಲ ವಿಮಾನದೊಳಗೆ ಕುಳಿತಿದ್ದ ಪ್ರಯಾಣಿಕರು
ಉಸಿರಾಡಲೂ ಕಷ್ಟಪಡುವ ಅವಸ್ಥೆ ಉಂಟಾಗಿದೆ.
ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಅನಾರೋಗ್ಯದಿಂದ ಬಳಲುತ್ತಿದ್ದ
ಕುಂದಾಪುರ ಮೂಲದ ಮಹಿಳೆ ಒಬ್ಬರು
ವಿಮಾನಯಾನದ ವಿಳಂಬದಿಂದಾಗಿ ಆರೋಗ್ಯ ತೀವ್ರ ಹದಗೆಡುವಂತಾಯಿತು.
ಇದು Air India ಕ್ಕೆ ಹೊಸತೇನಲ್ಲ.
ನಿರಂತರ ಪ್ರಯಾಣಿಕರನ್ನು ಸತಾಯಿಸುವುದು, ಪ್ರಶ್ನಿಸಿದರೆ ಪ್ರಯಾಣಿಕರಿಗೆ ಉಡಾಫೆ ಉತ್ತರ ಕೊಡುವ Air India ಸಿಬ್ಬಂದಿಗಳ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸಬೇಕಾಗಿದೆ ಎಂದು ಅನಿವಾಸಿ ಮಿತ್ರರು ಒತ್ತಾಯಿಸಿದ್ದಾರೆ.
ವರದಿ: ಇಸ್ಹಾಕ್ ಸಿ.ಐ.ಫಜೀರ್ (ಗಲ್ಫ್ ಕನ್ನಡಿಗ)
















ಇನ್ನಷ್ಟು ಸುದ್ದಿಗಳು
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ