ದಮ್ಮಾಮ್ : ಏರ್ ಇಂಡಿಯಾ ವಿಮಾನವು ತನ್ನ ವಿಳಂಬ ಪಲ್ಲವಿಯನ್ನು ಮುಂದುವರಿಸಿ, ಪ್ರಯಾಣಿಕರನ್ನು ಸತಾಯಿಸುವ ಚಾಳಿಯನ್ನು ರೂಢಿಸಿಕೊಂಡಿದೆ. ನಿನ್ನೆ ದಮ್ಮಾಮ್ನಿಂದ ಮಂಗಳೂರಿಗೆ ತೆರಳಬೇಕಾದ Air India Express ವಿಮಾನ ಕ್ಲಪ್ತ ಸಮಯಕ್ಕೆ ಪ್ರಯಾಣಿಸದೆ, ಪ್ರಯಾಣಿಕರನ್ನು ಕುಳ್ಳಿರಿಸಿ ವಿಮಾನದೊಳಗೆ ಉಸಿರುಗಟ್ಟಿಸುವಂತೆ ಮಾಡಿದೆ.
ನಿನ್ನೆ ರಾತ್ರಿ (23/02/2024) 10:20 ಕ್ಕೆ ಟೇಕ್ಆಫ್ ಆಗ ಬೇಕಿದ್ದ ವಿಮಾನ ಒಂದು ಗಂಟೆಗಳ ಕಾಲ ವಿಳಂಬಗೊಂಡಿದೆ. ಸುಮಾರು ಒಂದು ಗಂಟೆಗಳ ಕಾಲ ವಿಮಾನದೊಳಗೆ ಕುಳಿತಿದ್ದ ಪ್ರಯಾಣಿಕರು
ಉಸಿರಾಡಲೂ ಕಷ್ಟಪಡುವ ಅವಸ್ಥೆ ಉಂಟಾಗಿದೆ.
ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಅನಾರೋಗ್ಯದಿಂದ ಬಳಲುತ್ತಿದ್ದ
ಕುಂದಾಪುರ ಮೂಲದ ಮಹಿಳೆ ಒಬ್ಬರು
ವಿಮಾನಯಾನದ ವಿಳಂಬದಿಂದಾಗಿ ಆರೋಗ್ಯ ತೀವ್ರ ಹದಗೆಡುವಂತಾಯಿತು.
ಇದು Air India ಕ್ಕೆ ಹೊಸತೇನಲ್ಲ.
ನಿರಂತರ ಪ್ರಯಾಣಿಕರನ್ನು ಸತಾಯಿಸುವುದು, ಪ್ರಶ್ನಿಸಿದರೆ ಪ್ರಯಾಣಿಕರಿಗೆ ಉಡಾಫೆ ಉತ್ತರ ಕೊಡುವ Air India ಸಿಬ್ಬಂದಿಗಳ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸಬೇಕಾಗಿದೆ ಎಂದು ಅನಿವಾಸಿ ಮಿತ್ರರು ಒತ್ತಾಯಿಸಿದ್ದಾರೆ.
ವರದಿ: ಇಸ್ಹಾಕ್ ಸಿ.ಐ.ಫಜೀರ್ (ಗಲ್ಫ್ ಕನ್ನಡಿಗ)
















ಇನ್ನಷ್ಟು ಸುದ್ದಿಗಳು
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ