ಅಬುಧಾಬಿ: ಯುಎಇ ನಿವಾಸಿಗಳು ನಿಮಿಷಗಳಲ್ಲಿ ಸೌದಿ ಬಹು ಪ್ರವೇಶ ಪ್ರವಾಸಿ ವೀಸಾವನ್ನು ಪಡೆಯಬಹುದು. ಇದು ಉಮ್ರಾ ನಿರ್ವಹಿಸಲು ಮತ್ತು ಸೌದಿ ಪ್ರವಾಸ ಯಾತ್ರೆಗೆ ಅವಕಾಶವನ್ನು ತೆರೆಯುತ್ತದೆ. ಹಜ್ ಮತ್ತು ಉಮ್ರಾ ಸಚಿವಾಲಯದ ಸಹಯೋಗದೊಂದಿಗೆ ಸೌದಿ ಪ್ರವಾಸೋದ್ಯಮ ಪ್ರಾಧಿಕಾರವು ಪ್ರಾರಂಭಿಸಿರುವ ಏಕೀಕೃತ ಪೋರ್ಟಲ್ ನುಸುಕ್ ಆಪ್ ಮೂಲಕ ಈ ಸೌಲಭ್ಯವನ್ನು ಒದಗಿಸಲಾಗಿದೆ.
ದುಬೈನಲ್ಲಿ ಟ್ರಾವೆಲ್, ಪ್ರವಾಸೋದ್ಯಮ ಮತ್ತು ಹಜ್-ಉಮ್ರಾ ಏಜೆನ್ಸಿಗಳು ಸೇರಿದಂತೆ ನಾಲ್ಕು ನೂರಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದ ಸಮ್ಮೇಳನದಲ್ಲಿ ಸೌದಿ ಹಜ್ ಮತ್ತು ಉಮ್ರಾ ಸಚಿವ ತೌಫೀಕ್ ಅಲ್ ರಬಿಯಾ ಯೋಜನೆಯನ್ನು ಘೋಷಿಸಿದರು. ಬಹು ಪ್ರವೇಶ ಇ-ವೀಸಾವು ಸೌದಿ ಅರೇಬಿಯಾಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಭೇಟಿ ನೀಡಲು ಮತ್ತು ವರ್ಷದಲ್ಲಿ ಗರಿಷ್ಠ 90 ದಿನಗಳವರೆಗೆ ಉಳಿಯಲು ಅನುಮತಿಸುತ್ತದೆ. ಈ ಕ್ರಮವು ಉಮ್ರಾ ಯಾತ್ರಿಕರ ಸಂಖ್ಯೆಯನ್ನು ಹೆಚ್ಚಿಸುವ ಸೌದಿ ವಿಷನ್ 2030 ರ ಭಾಗವಾಗಿದೆ.
ಸೌದಿ ಏರ್ಲೈನ್ಸ್ ದುಬೈನಿಂದ ಮದೀನಾಗೆ ವಾರದಲ್ಲಿ 3 ಸೇವೆಯನ್ನು ಹೊಂದಿದೆ. ರಂಜಾನ್ನಲ್ಲಿ ವಾರದ ಪ್ರತಿ ದಿನವೂ ಸೇವೆ ಇರಲಿದೆ. ಫ್ಲೈ ನಾಸ್ ಅಬುಧಾಬಿಯಿಂದ ಜಿದ್ದಾ ಮತ್ತು ಮದೀನಾಗೆ ಕಡಿಮೆ ಟಿಕೆಟ್ ದರದಲ್ಲಿ ಸೇವೆ ಒದಗಿಸುತ್ತದೆ. ದುಬೈನಿಂದ ಜಿದ್ದಾಕೆ ವಾರದಲ್ಲಿ 29 ವಿಮಾನಗಳ ಹೊರತಾಗಿ, ಮದೀನಾಕ್ಕೆ ದೈನಂದಿನ ಸೇವೆಯನ್ನು ಸಹ ಘೋಷಿಸಲಾಯಿತು.
GCC ದೇಶಗಳಲ್ಲಿ UAE ಅತಿ ಹೆಚ್ಚು ಉಮ್ರಾ ಯಾತ್ರಿಕರನ್ನು ಹೊಂದಿದೆ. ಉಮ್ರಾ ನಿರ್ವಹಿಸಲು ನುಸುಕ್ ಅಪ್ಲಿಕೇಶನ್ ಮೂಲಕ ಬುಕ್ ಮಾಡಬಹುದು ಮತ್ತು ಮದೀನಾ ಮಸ್ಜಿದುನ್ನಬವಿ ಮತ್ತು ರವ್ದಾ ಶರೀಫ್ಗೆ ಭೇಟಿ ನೀಡಬಹುದು. ಅದೇ ರೀತಿ, ಸೌದಿ ಅರೇಬಿಯಾದ ಐತಿಹಾಸಿಕ ಸ್ಮಾರಕಗಳು, ಪರಂಪರೆ, ಸಾಂಸ್ಕೃತಿಕ ಮತ್ತು ಪ್ರವಾಸಿ ಕೇಂದ್ರಗಳಿಗೆ ಸಹ ಭೇಟಿ ನೀಡಬಹುದು. ವಸತಿ, ಸಾರಿಗೆ, ವಾಯುಯಾನ, ಪ್ರವಾಸೋದ್ಯಮ, ಎಲೆಕ್ಟ್ರಾನಿಕ್ ವೀಸಾ ಮತ್ತು ಇತರ ಹಲವು ಸೇವೆಗಳು ನುಸುಕ್ ಮೂಲಕ ಲಭ್ಯವಿದೆ.ದುಬೈ ಫೆಸ್ಟಿವಲ್ ಸಿಟಿಯಲ್ಲಿ ನುಸುಕ್ ಬಳಕೆಯ ಬಗ್ಗೆ ಪ್ರದರ್ಶನವನ್ನು ಸಹ ಆಯೋಜಿಸಲಾಗಿತ್ತು.
















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
SჄS ಬೆಳ್ತಂಗಡಿ ಝೋನ್: ಸಾಂತ್ವನ ಫಂಡ್ ಹಸ್ತಾಂತರ
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಮರು ಅರ್ಜಿ ಕಡ್ಡಾಯ- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು