ಬುರೈದ ಜನವರಿ 26: ಕರುನಾಡ ಮಣ್ಣಿನಿಂದ ಸಾವಿರಾರು ಹೊಂಗನಸುಗಳೊಂದಿಗೆ ಜೀವನ ನೌಕೆಯನ್ನು ದಡ ಸೇರಿಸಲು ಮರಳು ನಾಡಿಗೆ ಬಂದ ಕನ್ನಡದ ಮಕ್ಕಳು ರೂಪಿಕರಿಸಿದ ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ತನ್ನ ದಶಮಾನೋತ್ಸವವನ್ನು ಆಚರಿಸುತ್ತಿದ್ದು ಆ ಬಗ್ಗೆ ವೈವಿಧ್ಯಮಯ ಯೋಜನೆಗಳೊಂದಿಗೆ ಮುನ್ನುಗ್ಗುತ್ತಿದೆ ಆ ಪ್ರಯುಕ್ತ ಕೆ.ಸಿ.ಎಫ್ ಅಲ್ ಖಸೀಂ ಝೋನ್ ಹಮ್ಮಿಕೊಂಡ ಗೆಸ್ಟ್ ಡೇ ಹಾಗೂ ಗಣರಾಜ್ಯೋತ್ಸವವು ಬುರೈದ ಶೈನ್ ಆಡಿಟೋರಿಯಂನಲ್ಲಿ ಹಲವಾರು ಗಣ್ಯರ ಒಗ್ಗೂಡಿಕೆಯೊಂದಿಗೆ ನಡೆಯಿತು

KCF ನೇತಾರ ಯಾಕೂಬ್ ಸಖಾಫಿ ಉಸ್ತಾದರ ದುವಾದೊಂದಿಗೆ, ಸ್ವಾಗತ ಸಮಿತಿ ಚೆರ್ಮ್ಯಾನ್ ಮುಸ್ತಫಾ ಹಾಸನ ರವರ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡ ಕಾರ್ಯ ಕ್ರಮವನ್ನು ICF ನೇತಾರ ಹಾಜಿ ಅಬ್ದುಲ್ಲ ಸಕಾಕರ್ ಉದ್ಘಾಟಿಸಿದರು. ಕೆ.ಸಿ.ಎಫ್ ಸೌದಿ ರಾಷ್ಟ್ರೀಯ ಸಮಿತಿ ಪ್ರದಾನ ಕಾರ್ಯದರ್ಶಿ ಸಾಲಿ ಬೆಳ್ಳಾರೆ ಪ್ರಸ್ತಾವಿಕ ಬಾಷಣ ಮಾಡಿದರು. ಅಲ್ ಖಸಿಂ ಯುನಿವರ್ಸಿಟಿಯ ಖ್ಯಾತ ವೈದ್ಯರಾದ ಡಾ|| ಜಯಶಂಕರ್ ಮತ್ತು ಬುರೈದ ಕಿಂಗ್ ಫಹದ್ ಆಸ್ಪತ್ರೆಯ ಹಿರಿಯ ವೈದ್ಯಾದಿಕಾರಿ ಡಾII ಮುಹಮ್ಮದ್ ಫಿಝಾನ್, ಸಾಮಾಜಿಕ ಕಾರ್ಯಕರ್ತ ಲತೀಫ್ ಶೇರಿ, ಅನ್ಸಾರ್ ಅಲಿ, ಮುಂತಾದವರು ಭಾಗವಹಿಸಿದರು. ಅತಿಥಿಗಳಿಗೆ ಸನ್ಮಾನ ಸ್ವೀಕಾರ ಮಾಡಿ ಇತ್ತೀಚೆಗೆ ಬುರೈದ ದಲ್ಲಿ ಮರಣ ಹೊಂದಿದ ಮರ್ಹೂಂ ಮುಹಮ್ಮದ್ ಕಾಪು ಕುಟುಂಬಕ್ಕೆ ದಾನಿಗಳ ಸಹಾಯದಿಂದ ಸುಮಾರು 75 ಸಾವಿರ ರೂಪಾಯಿಗಳ ಚೆಕ್ ವಿತರಿಸಲಾಯಿತು ಝೋನ್ ಕಾರ್ಯದರ್ಶಿ ಬಶೀರ್ ಕನ್ಯಾನ ಸ್ವಾಗತಿಸಿ ಮುಸ್ತಫಾ ಲತೀಫಿ ವಂದಿಸಿದರು
















ಇನ್ನಷ್ಟು ಸುದ್ದಿಗಳು
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ