ಅಹ್ಲುಸುನ್ನತ್ ವಲ್ ಜಮಾಅತ್ತಿನ ಆಶಯ ಆದರ್ಶವನ್ನು ಎತ್ತಿ ಹಿಡಿಯಲೆಂದೇ ಸ್ಥಾಪಿತವಾದ ಸುನ್ನಿ ಯುವಜನ ಸಂಘ ಅದರ ಜನ್ಮನಾಡಾದ ಕೇರಳದಲ್ಲಿ 1954ರಲ್ಲಿ ಪ್ರಾರಂಭಗೊಂಡು ಇದೀಗ 70 ಪೂರ್ತಿಯಾದ ಸಂಭ್ರಮದಲ್ಲಿದೆ.
ಕರ್ನಾಟಕದಲ್ಲಿಯೂ ಮಹಾನ್ ವಿದ್ವಾಂಸರಾದ ತಾಜಲ್ ಫುಖಹಾ ಬೇಕಲ್ ಉಸ್ತಾದ್ ರವರ ನೇತೃತ್ವದಲ್ಲಿ 1994ರಲ್ಲಿ ಅಸ್ತಿತ್ವಕ್ಕೆ ಬಂದ ಸಂಘವು, ಇದೀಗ 30ರ ಸಡಗರ ಸಂಭ್ರಮವನ್ನು ಆಚರಿಸುತ್ತಿದೆ. ಅದರ 30ನೇ ವರ್ಷಾಚರಣೆಯು ‘ಪರಂಪರೆಯ ಪ್ರತಿನಿಧಿಗಳಾಗೋಣ’ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಇದೇ ಬರುವ ಜನವರಿ 24, 2024ರ ಬುಧವಾರದಂದು ಅಡ್ಯಾರಿನ ಶಾಗಾರ್ಡನ್ ಗ್ರೌಂಡಿನಲ್ಲಿ ಅದ್ದೂರಿಯ ಮಹಾ ಸಮ್ಮೇಳನ ನಡೆಯುತ್ತಿದೆ.
ಪ್ರಕಾಂಡ ಸಯ್ಯಿದ್ ಕುಟುಂಬಸ್ತರು, ವಿದ್ವಾಂಸರುಗಳು, ರಾಜಕೀಯ ಮುಖಂಡರುಗಳು, ಸಾಮಾಜಿಕ ಧುರೀಣರು ,ಸುನ್ನೀ ಕಾರ್ಯಕರ್ತರ ದಂಡೇ ಆಗಮಿಸಲಿದೆ. ಪ್ರಸ್ತುತ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸಅದಿ ವಿದ್ವಾಂಸರುಗಳು ಪ್ರಚಾರಗಳನ್ನು ಗೈಯುತ್ತಾ ಸದರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮಜ್ಲಿಸು ಉಲಮಾಉಸ್ಸಅದಿಯ್ಯೀನ್ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಬಹು ಅಬ್ದುಲ್ ರಹ್ಮಾನ್ ಸಅದಿ ಕಂಕನಾಡಿರವರು ಕರೆ ನೀಡಿದ್ದಾರೆ.
ವರದಿ -ಇಂಜಿನಿಯರ್ ಇಸ್ಮಾಯಿಲ್ ಮನ್ಸೂರ್ ಅಹ್ಮದ್ ಸಅದಿ ಅಲ್ ಕಾಮಿಲ್ ಬಜ್ಪೆ (ಪ್ರಧಾನ ಕಾರ್ಯದರ್ಶಿ,ಮಜ್ಲಿಸು ಉಲಮಾಉಸ್ಸಅದಿಯ್ಯೀನ್ ದಕ್ಷಿಣ ಕನ್ನಡ)
















ಇನ್ನಷ್ಟು ಸುದ್ದಿಗಳು
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್