janadhvani

Kannada Online News Paper

ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಾಹಿತ್ಯೋತ್ಸವ: ಉಪ್ಪಿನಂಗಡಿ ಡಿವಿಷನ್ ಚಾಂಪಿಯನ್- ಬೆಳ್ತಂಗಡಿ ಡಿವಿಷನ್ ರನ್ನರ್

ಉಪ್ಪಿನಂಗಡಿ : ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವವು ಉಪ್ಪಿನಂಗಡಿ ಸರಳಿಕಟ್ಟೆ ಮಸೀದಿ ಸಭಾಂಗಣದಲ್ಲಿ ನಡೆಯಿತು. ಉಪ್ಪಿನಂಗಡಿ ಡಿವಿಷನ್ 1220 ಅಂಕಗಳೊಂದಿಗೆ ಚಾಂಪಿಯನ್, ಬೆಳ್ತಂಗಡಿ ಡಿವಿಷನ್ 1146 ಅಂಕಗಳೊಂದಿಗೆ ರನ್ನರ್ ತಮ್ಮದಾಗಿಸಿಕೊಂಡಿತು.

ಕ್ರಮವಾಗಿ ಪುತ್ತೂರು ಡಿವಿಷನ್ 962 , ಸುಳ್ಯ ಡಿವಿಷನ್ 848, ವಿಟ್ಲ ಡಿವಿಷನ್ 712, ಕಡಬ ಡಿವಿಷನ್ 710 ಅಂಕಗಳೊಂದಿಗೆ ಉತ್ತಮ ಪೈಪೋಟಿಯನ್ನು ನೀಡಿತು. ಸಬ್ ಜೂನಿಯರ್, ಜೂನಿಯರ್, ಸೀನಿಯರ್, ಜನರಲ್‌ ಹಾಗೂ ಕ್ಯಾಂಪಸ್ ವಿಭಾಗಗಳಲ್ಲಿ 108 ರಷ್ಟು ಸ್ಪರ್ಧೆಯು 5 ವೇದಿಕೆಗಳಲ್ಲಿ ಯಶಸ್ವಿಯಾಗಿ ನಡೆಯಿತು. ಜಿಲ್ಲಾ ವ್ಯಾಪ್ತಿಯ 6 ಡಿವಿಷನ್ ಗಳಿಂದ ಆಯ್ಕೆಯಾದಂತಹ ಸುಮಾರು 950 ರಷ್ಷು ಸ್ಪರ್ಧಾರ್ಥಿಗಳು ಭಾಗವಹಿಸಿದರು.

ಶನಿವಾರ ಮಧ್ಯಾಹ್ನ ಮೂಡಡ್ಕ ದರ್ಗಾ ಝಿಯಾರತ್ ನೊಂದಿಗೆ ಎರಡು ದಿನಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಬ್ಬಾಸ್ ಉಸ್ತಾದ್ ಪೆರ್ನೆ ಧ್ವಜಾರೋಹಣಗೈದು ದುಆ ನೆವೇರಿಸಿದರು. ಸರಳಿಕಟ್ಟೆ ಮುದರ್ರಿಸರಾದ ರಹೀಂ ಸಖಾಫಿ ಉಸ್ತಾದ್ ವೇದಿಕೆಯನ್ನು ಉದ್ಘಾಟಿಸಿದರು.

ಈಸ್ಟ್ ಜಿಲ್ಲಾಧ್ಯಕ್ಷರಾದ ಮುಹಮ್ಮದ್ ಮಿಸ್ಬಾಹಿ ಕಡಬ ರವರ ಅಧ್ಯಕ್ಷತೆಯಲ್ಲಿ ಆದಿತ್ಯವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸಯ್ಯದ್ ಸಾದಾತ್ ತಂಙಳ್ ದುಆ ನೆರವೇರಿಸಿದರು. ರಾಜ್ಯ ಕಾರ್ಯದರ್ಶಿ ಸಫ್ವಾನ್ ಚಿಕ್ಕಮಂಗಳೂರು ಉದ್ಘಾಟನೆಗೈದರು. ಜಿಲ್ಲಾ ವೀಕ್ಷಕರಾದ ಶರೀಫ್ ಕುದುರೆಗುಂಡಿ ಫಲಿತಾಂಶ ವನ್ನು ಪ್ರಕಟಿಸಿದರು.
ಕಾರ್ಯಕ್ರಮದಲ್ಲಿ ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್ ಮುಹಿಮ್ಮಾತ್, ಸಯ್ಯಿದ್ ಸಾಬಿತ್ ತಂಙಳ್, ವಳವೂರು ಉಸ್ತಾದ್, ಕಾಸಿಂ ಉಸ್ತಾದ್,ಮುದರ್ರಿಸ್ ಶುಹೈಬ್ ಸಅದಿ ಸಹಿತ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್ ಜಿಲ್ಲಾ, ಝೋನ್, ಸರ್ಕಲ್, ಬ್ರಾಂಚ್ ಗಳ ನಾಯಕರು, ಎಸ್ಸೆಸ್ಸೆಫ್ ರಾಜ್ಯ ನಾಯಕರು ಭಾಗವಹಿಸಿ ಶುಭಹಾರೈಸಿದರು.

2 ದಿವಸಗಳಲ್ಲಿ ನಡೆದ ಕಾರ್ಯಕ್ರಮಕ್ಕೆ ಸರಳಿಕಟ್ಟೆ ಜಮಾ ಅತ್ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಎಲ್ಲಾ ಸದಸ್ಯರು, ಸರಳಿಕಟ್ಟೆ ಬ್ರಾಂಚ್ ಮುಸ್ಲಿಂ ಜಮಾ ಅತ್, ಎಸ್ ವೈ ಎಸ್, ಎಸ್ಸೆಸ್ಸೆಫ್ ನಾಯಕರು ಹಾಗೂ ಸರ್ವ ಸದಸ್ಯರು ಉತ್ತಮ ರೀತಿಯಲ್ಲಿ ಸಂಪೂರ್ಣವಾಗಿ ಸಹಕರಿಸಿದರು. ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದವರು ಫೆಬ್ರವರಿ 9,10, 11 ರಂದು ಭಟ್ಕಳ ತಾಲೂಕು ಮೈದಾನದಲ್ಲಿ ನಡೆಯುವ ರಾಜ್ಯ ಮಟ್ಟದ ಸಾಹಿತ್ಯೋತ್ಸವದಲ್ಲಿ ಪ್ರತಿನಿಧಿಸಲಿದ್ದಾರೆ

error: Content is protected !! Not allowed copy content from janadhvani.com