ಮಂಗಳೂರು: ಇತ್ತೀಚೆಗೆ ಶಾಸಕ ಹರೀಶ್ ಪೂಂಜಾರವರು ಹೇಳಿಕೆ ನೀಡಿ,ಮುಸ್ಲಿಮ್ ಸಮುದಾಯದ ಕುಟುಂಬಗಳು ನಾಲ್ಕು ಸಂತತಿಯನ್ನು ಹೊಂದಿದರೆ ದೇಶದ ಮುಸ್ಲಿಮರ ಜನಸಂಖ್ಯೆ ಎಂಬತ್ತು ಕೋಟಿ ತಲುಪುತ್ತದೆ ಎಂದಿದ್ದಾರೆ.
ಪೂಂಜಾರವರ ಈ ಹೇಳಿಕೆ ಇಲ್ಲಿನ ಮುಸ್ಲಿಮೇತರ ಸಮುದಾಯವನ್ನು ಮೂರ್ಖರನ್ನಾಗಿಸುವುದಾಗಿದೆ. ದೇಶದ ಜನಸಂಖ್ಯೆಯ ಬಗ್ಗೆ ಈಗಾಗಲೇ ಸಾಮಾಜಿಕ ತಜ್ಞರು ನೀಡಿದ ವರದಿಯನ್ನು ಇನ್ನೂ ಪೂಂಜಾರವರು ಅರಿತಿಲ್ಲ. ಯತೇಚ್ಛ ಮಾನವ ಸಂಪನ್ಮೂಲವನ್ನು ಹೊಂದಿದ ನಮ್ಮ ದೇಶ ಇಂದು ಅಭಿವೃದ್ಧಿ ಹೊಂದಿರುವುದು ಮಾನವ ಸಂಪನ್ಮೂಲಗಳಿಂದಲೇ ಎಂದು ಪೂಂಜಾ ತಿಳಿಯಲಿ.
ಪೂಂಜಾ ಅವರು ಈ ದೇಶಕ್ಕೆ ನಾರಿ ಸಂತಾನ ವೊಂದನ್ನಾದರೂ ಕೊಡುಗೆ ನೀಡಿದರೆ ಅವರು ಇತರ ಸಮುದಾಯಗಳಿಗೆ ನೀಡುತ್ತಿರುವ ಸಂತಾನ ಮಿತಿಯನ್ನು ಮೀರಿದಂತೆ ಕೂಡಾ ಆಗುತ್ತದೆ. ಪೂಂಜಾ ಅವರಿಗೆ ಹಾಲಿ ಇರುವ ದ್ವಿಪುತ್ರ ಭಾಗ್ಯ ದೊಂದಿಗೆ ಪುತ್ರಿ ಭಾಗ್ಯವೂ ಲಭಿಸಿದಂತಾಗುತ್ತದೆ. ಶೀಘ್ರ ಪೂಂಜಾ ಅವರಿಗೆ ಪುತ್ರಿ ಭಾಗ್ಯ ಪ್ರಾಪ್ತಿ ಆಗಲಿ. ಹಾಗಾದರೆ, ಅಧಿಕ ಸಂತೋಷ ಪಡುವ ಸಮುದಾಯ ಇದ್ದರೆ ಅದು ಮುಸ್ಲಿಮ್ ಸಮುದಾಯ ಆಗಿರುತ್ತದೆ. ಶೀಘ್ರಮ್ ಪುತ್ರಿ ಭಾಗ್ಯ ಮ್ ಪ್ರಾಪ್ತಿ ರಸ್ತು ಎಂದು ಕೆ.ಅಶ್ರಫ್( ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಪತ್ರಿಕಾ ಪ್ರಕಟಣೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಹಜ್ ಯಾತ್ರಿಕರಿಗೆ ಡಿಜಿಟಲ್ ದಾಖಲೆಗಳ ಸೌಲಭ್ಯ- ಪಾಸ್ಪೋರ್ಟ್ಗಳ ಅಗತ್ಯವಿಲ್ಲ
ವೈದ್ಯಕೀಯ-ಇಂಜಿನಿಯರಿಂಗ್ ಕನಸುಗಳಾಚೆಗೆ ನಾಗರಿಕ ಸೇವೆಗಳತ್ತ ಯುವಶಕ್ತಿ ಮುಖ ಮಾಡಲಿ: ಇಕ್ಬಾಲ್ ಬಾಳಿಲ ಕರೆ
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ