janadhvani

Kannada Online News Paper

ಕೇರಳ: ಯೆಹೋವನ ಅಧಿವೇಶನದಲ್ಲಿ ಸ್ಫೋಟ- ಒಬ್ಬರು ಮೃತ್ಯು, ಐವರ ಸ್ಥಿತಿ ಚಿಂತಾಜನಕ

ಕೊಚ್ಚಿ: ಕಲಮಶ್ಶೇರಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. 33 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಐವರ ಸ್ಥಿತಿ ಚಿಂತಾಜನಕವಾಗಿದೆ. ಯೆಹೋವನ ಅಧಿವೇಶನ ನಡೆಯುತ್ತಿದ್ದ ಕಲಮಶ್ಶೇರಿ ನೆಸ್ಟ್ ಬಳಿಯ ಕನ್ವೆನ್ಷನ್ ಸೆಂಟರ್‌ನಲ್ಲಿ ಬೆಳಗ್ಗೆ 9.30ರ ಸುಮಾರಿಗೆ ಸ್ಫೋಟ ಸಂಭವಿಸಿದೆ.

ಮೂರ್ನಾಲ್ಕು ಸ್ಫೋಟಗಳು ಸಂಭವಿಸಿವೆ ಎಂದು ಸಭಾಂಗಣದಲ್ಲಿದ್ದವರು ಹೇಳಿದರು. ಮೃತರು ಹಾಗೂ ಗಾಯಾಳುಗಳನ್ನು ಕಲಮಶ್ಶೇರಿ ಸರಕಾರಿ ಪ.ಪೂ. ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. 2500 ಮಂದಿ ಕೂರಬಹುದಾದ ಸಭಾಂಗಣವಾಗಿದೆ ಇದು. ಸಭಾಂಗಣದ ಮಧ್ಯಭಾಗದಿಂದ ಸ್ಫೋಟ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಪ್ರಾರ್ಥನೆಯ ಸಮಯವಾದ್ದರಿಂದ ಎಲ್ಲರೂ ಕಣ್ಣು ಮುಚ್ಚಿ ನಿಂತಿದ್ದರು ಎನ್ನುತ್ತಾರೆ ಜನರು. ವರಾಪುಝ, ಅಂಗಮಾಲಿ, ಎಡಪಳ್ಳಿ ಹೀಗೆ ಹಲವೆಡೆಯಿಂದ ಜನರು ಸಮಾವೇಶ ಕೇಂದ್ರಕ್ಕೆ ತಲುಪಿದ್ದರು.

ಏತನ್ಮಧ್ಯೆ, ಸ್ಫೋಟಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

error: Content is protected !! Not allowed copy content from janadhvani.com