janadhvani

Kannada Online News Paper

ಬ್ರದರ್ಸ್ ಟಿಪ್ಪುನಗರ ಇದರ 7ನೇ ವಾರ್ಷಿಕೋತ್ಸವ ಪ್ರಯುಕ್ತ – ಬೃಹತ್ ಹಿಜಾಮ ಚಿಕಿತ್ಸಾ ಶಿಬಿರ

ಬಂಟ್ವಾಳ: ಬ್ರದರ್ಸ್ ಟಿಪ್ಪುನಗರ ಇದರ 7ನೇ ವಾರ್ಷಿಕೋತ್ಸವದ ಅಂಗವಾಗಿ ಸತತ 3ನೇ ಬಾರಿ ಹಿಜಾಮ ಕಾರ್ಯಕ್ರಮ ಬಂಟ್ವಾಳ ಟಿಪ್ಪುನಗರ ಲೋರೆಟ್ಟೋ ಪದವಿನಲ್ಲಿ ನಡೆಯಿತು. ಶಿಭಿರದಲ್ಲಿ 41 ಫಲಾನುಭವಿಗಳು ಇದರ ಸದುಪಯೋಗವನ್ನು ಪಡೆದರು.

ಬದ್ರ್ ಜುಮಾ ಮಸೀದಿ ಖತೀಬರಾದ ಅಬ್ದುಲ್ ಗಫ್ಫಾರ್ ಹನೀಫಿ ದುಆ ಆಶೀರ್ವಚನ ನೀಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಬ್ರದರ್ಸ್ ಟಿಪ್ಪುನಗರ ಇದರ ಅಧ್ಯಕ್ಷ ರಾದ ಆಶಿಕ್ TM, ಎಮರ್ಜೆನ್ಸಿ ಹೆಲ್ಪ್ ಲೈನ್ (ರಿ)ಸಂಸ್ಥೆಯ ಅಧ್ಯಕ್ಷರಾದ ಇಬ್ರಾಹಿಂ ನಂದಾವರ,ಬದ್ರ್ ಜುಮಾ ಮಸೀದಿ ಕಾರ್ಯದರ್ಶಿ ಅಲ್ತಾಫ್ ಟಿಪ್ಪುನಗರ, ನುಸ್ರತುಲ್ ಯಂಗ್ ಮೆನ್ಸ್ ಟಿಪ್ಪುನಗರ ಕಾರ್ಯದರ್ಶಿ ಫರ್ವೀಝ್,B,Y,A ಬರೆಕ್ಕಾಡ್ ಇದರ ಕಾರ್ಯದರ್ಶಿ ಕಳಂದರ್ ಕಂದು ಉಪಸ್ಥಿತರಿದ್ದರು. ಸಫೀಖ್ ಟಿಪ್ಪುನಗರ ಧನ್ಯವಾದ ಸಲ್ಲಿಸಿದರು.

error: Content is protected !! Not allowed copy content from janadhvani.com