ಮಂಗಳೂರು: ಮಂಗಳಾ ದೇವಿ ದಸರಾ ಜಾತ್ರೆ ಮಹೋತ್ಸವದ ಸಂದರ್ಭದಲ್ಲಿ ಸಂತೆ ನಡೆಸುವಂತಹಾ ಸ್ಥಳ ಪಾಲಿಕೆಗೆ ಸೇರಿದ್ದು, ಸರ್ವ ಧರ್ಮೀಯ ವರ್ತಕರಿಗೆ ಮಂಗಳೂರು ಮಹಾ ನಗರ ಪಾಲಿಕೆ ಆದ್ಯತೆಯ ಆಧಾರದಲ್ಲಿ ವರ್ತಕ ಸ್ಟಾಲ್ ( ಮುಂಗಟ್ಟು) ಗಳನ್ನು ಏಲಂ ಪ್ರಕ್ರಿಯೆಯಲ್ಲಿ ಹಂಚಿಕೆ ಮಾಡಬೇಕಿದೆ ಎಂದು ಮಾಜಿ ಮೇಯರ್, ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ರವರು ಹೇಳಿದ್ದಾರೆ.
ಯಾವುದೇ ಧಾರ್ಮಿಕ ಉತ್ಸವಗಳ ಸಮಯದಲ್ಲಿ ಸಂತೆ ವರ್ತಕ ಚಟುವಟಕೆಗಳನ್ನು ಕೋಮು ಭಾವನೆಯಲ್ಲಿ ತಾರತಮ್ಯ ಗೊಳಿಸಿದರೆ, ಸ್ಥಳೀಯ ಆರ್ಥಿಕ ಚಟುವಟಿಕೆ ಸ್ಥಗಿತ ಗೊಳ್ಳುವ ಸಂಭಾವ್ಯ ಅಪಾಯವಿದೆ. ಸಂತೆ ಸ್ಥಳವನ್ನು ಮತೀಯ ವರ್ತಕರ ಸಂಘಟನೆ ಸ್ಥಾಪಿಸುವ ಮೂಲಕ ಸಾಮೂಹಿಕವಾಗಿ ವರ್ತಕ ಸಮುದಾಯಕ್ಕೆ ನಿಷೇಧ ಹೇರಿದರೆ ಅದು ಸಾಂವಿಧಾನಿಕ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಆಗಿದೆ.
ಮಂಗಳಾ ದೇವಿ ಉತ್ಸವದ ಪ್ರಕ್ರಿಯೆಯನ್ನು ಗೌರವಿಸುವುದರೊಂದಿಗೆ ಸರ್ವ ಧರ್ಮೀಯರ ವರ್ತಕರ ಹಕ್ಕುಗಳನ್ನು ಪಾಲಿಸಲು ಆಡಳಿತ ಮಂಡಳಿ ನಿರ್ಧರಿಸಬೇಕಿದೆ.
ಮತೀಯ ವರ್ತಕರ ಸಂಘಟನೆ ಸ್ಥಾಪಿಸಿ ಆ ಮೂಲಕ ಅಕ್ರಮ ಹಫ್ತಾ ವಸೂಲಿ ಅಥವಾ ಸಂತೆ ಸ್ಟಾಲ್ ಬ್ಲಾಕ್ ದಂಧೆ ನಿಲ್ಲಬೇಕಿದೆ.
ಸಂಘಟನೆಯ ಹೆಸರಲ್ಲಿ ಅನ್ಯ ಧರ್ಮೀಯರ ವರ್ತಕ ಹಕ್ಕುಗಳನ್ನು ತಡೆಯುವವರ ಪಾವಿತ್ರ್ಯತೆಯೇ ಮೇಲು ಎಂದಿದ್ದರೆ, ಜಿಲ್ಲೆಯ ಇತರ ವಾಣಿಜ್ಯ ಮಳಿಗೆಗಳಲ್ಲಿ ಅನ್ಯ ಧರ್ಮೀಯ ಗ್ರಾಹಕರನ್ನು ನಿಷೇಧಿಸುವ ಪ್ರಸ್ತಾಪ ಮುಂದಿಟ್ಟು ನೋಡಲಿ. ಹಿಂದಿನ ವರ್ಷ ನಗರ ಮತ್ತು ಹೊರವಲಯದ ಹಲವು ವಾಣಿಜ್ಯ ಉತ್ಸವಗಳಲ್ಲಿನ ಫಲಿತಾಂಶವೇ ಮುಂದೆ ಸಂಭವಿಸಿದರೆ ಆಶ್ಚರ್ಯವಿಲ್ಲ ಎಂದು ಅಶ್ರಫ್ ಹೇಳಿದರು.
ಮಂಗಳೂರಿನ ವಾಣಿಜ್ಯ ಮಂಡಳಿ ಈ ಬಗ್ಗೆ ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸಿ ಸಮಸ್ಯೆಯನ್ನು ಉತ್ತಮ ರೀತಿಯಲ್ಲಿ ನಿಭಾಯಿಸಬೇಕು. ತಪ್ಪಿದಲ್ಲಿ ನಿರ್ಧಿಷ್ಟ ಸಮುದಾಯದ ಜನರು ಬಹು ಅಗತ್ಯ ವ್ಯವಹಾರಗಳನ್ನು ಇತರ ಜಿಲ್ಲೆಗಳಿಗೆ ಒತ್ತಾಯ ಪೂರ್ವಕ ವಿಕೇಂದ್ರೀಕರಿಸಬೇಕಾಗುತ್ತದೆ. ವಾಣಿಜ್ಯ ಸಮುದಾಯ ಇದನ್ನು ತಿಳಿಯುವುದು ಒಳಿತು ಎಂದು ಕೆ.ಅಶ್ರಫ್( ಮಾಜಿ ಮೇಯರ್) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಮಾದಕ ವಸ್ತು ‘ಖಾತ್’ ಮಾರಾಟ: ಭಾರತೀಯ ಪ್ರಜೆ ಸೌದಿಯಲ್ಲಿ ಬಂಧನ
ಅನಿವಾಸಿಗಳಿಗೆ ಶುಭ ಸುದ್ದಿ: ಕುವೈತ್ನಿಂದ ಭಾರತೀಯ ವಿಮಾನ ಸೇವೆಗಳು ಪುನರಾರಂಭ
ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಗುಡ್ ನ್ಯೂಸ್: 20 ಕಿ.ಮೀ ವ್ಯಾಪ್ತಿಯವರಿಗೆ ಡಿಜಿಟಲ್ ಪಾಸ್ ಸೌಲಭ್ಯ!
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ಗೆ ಭರ್ಜರಿ ಗೆಲುವು- ಆಡಳಿತದ ಹಾದಿಗೆ ಸಿಕ್ಕ ಮುದ್ರೆ ಎಂದ ಸಿಎಂ ಡಿ.ಕೆ. ಶಿವಕುಮಾರ್
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
‘ಗಲ್ಫ್ ಪ್ರದೇಶದ ಸಂಘರ್ಷಗಳನ್ನು ಭಾರತಕ್ಕೆ ನಿರ್ಲಕ್ಷಿಸಲು ಸಾಧ್ಯವಿಲ್ಲ’ – ಭಾರತೀಯ ರಾಯಭಾರಿ ಡಾ. ಸುಹೈಲ್ ಅಜಾಝ್ ಖಾನ್
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ: ‘E-GEN ಸ್ಕಾಲರ್ಶಿಪ್’ ಗೆ ಅಧಿಕೃತ ಚಾಲನೆ
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ