ಮಂಗಳೂರು: ಮಂಗಳಾ ದೇವಿ ದಸರಾ ಜಾತ್ರೆ ಮಹೋತ್ಸವದ ಸಂದರ್ಭದಲ್ಲಿ ಸಂತೆ ನಡೆಸುವಂತಹಾ ಸ್ಥಳ ಪಾಲಿಕೆಗೆ ಸೇರಿದ್ದು, ಸರ್ವ ಧರ್ಮೀಯ ವರ್ತಕರಿಗೆ ಮಂಗಳೂರು ಮಹಾ ನಗರ ಪಾಲಿಕೆ ಆದ್ಯತೆಯ ಆಧಾರದಲ್ಲಿ ವರ್ತಕ ಸ್ಟಾಲ್ ( ಮುಂಗಟ್ಟು) ಗಳನ್ನು ಏಲಂ ಪ್ರಕ್ರಿಯೆಯಲ್ಲಿ ಹಂಚಿಕೆ ಮಾಡಬೇಕಿದೆ ಎಂದು ಮಾಜಿ ಮೇಯರ್, ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ರವರು ಹೇಳಿದ್ದಾರೆ.
ಯಾವುದೇ ಧಾರ್ಮಿಕ ಉತ್ಸವಗಳ ಸಮಯದಲ್ಲಿ ಸಂತೆ ವರ್ತಕ ಚಟುವಟಕೆಗಳನ್ನು ಕೋಮು ಭಾವನೆಯಲ್ಲಿ ತಾರತಮ್ಯ ಗೊಳಿಸಿದರೆ, ಸ್ಥಳೀಯ ಆರ್ಥಿಕ ಚಟುವಟಿಕೆ ಸ್ಥಗಿತ ಗೊಳ್ಳುವ ಸಂಭಾವ್ಯ ಅಪಾಯವಿದೆ. ಸಂತೆ ಸ್ಥಳವನ್ನು ಮತೀಯ ವರ್ತಕರ ಸಂಘಟನೆ ಸ್ಥಾಪಿಸುವ ಮೂಲಕ ಸಾಮೂಹಿಕವಾಗಿ ವರ್ತಕ ಸಮುದಾಯಕ್ಕೆ ನಿಷೇಧ ಹೇರಿದರೆ ಅದು ಸಾಂವಿಧಾನಿಕ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಆಗಿದೆ.
ಮಂಗಳಾ ದೇವಿ ಉತ್ಸವದ ಪ್ರಕ್ರಿಯೆಯನ್ನು ಗೌರವಿಸುವುದರೊಂದಿಗೆ ಸರ್ವ ಧರ್ಮೀಯರ ವರ್ತಕರ ಹಕ್ಕುಗಳನ್ನು ಪಾಲಿಸಲು ಆಡಳಿತ ಮಂಡಳಿ ನಿರ್ಧರಿಸಬೇಕಿದೆ.
ಮತೀಯ ವರ್ತಕರ ಸಂಘಟನೆ ಸ್ಥಾಪಿಸಿ ಆ ಮೂಲಕ ಅಕ್ರಮ ಹಫ್ತಾ ವಸೂಲಿ ಅಥವಾ ಸಂತೆ ಸ್ಟಾಲ್ ಬ್ಲಾಕ್ ದಂಧೆ ನಿಲ್ಲಬೇಕಿದೆ.
ಸಂಘಟನೆಯ ಹೆಸರಲ್ಲಿ ಅನ್ಯ ಧರ್ಮೀಯರ ವರ್ತಕ ಹಕ್ಕುಗಳನ್ನು ತಡೆಯುವವರ ಪಾವಿತ್ರ್ಯತೆಯೇ ಮೇಲು ಎಂದಿದ್ದರೆ, ಜಿಲ್ಲೆಯ ಇತರ ವಾಣಿಜ್ಯ ಮಳಿಗೆಗಳಲ್ಲಿ ಅನ್ಯ ಧರ್ಮೀಯ ಗ್ರಾಹಕರನ್ನು ನಿಷೇಧಿಸುವ ಪ್ರಸ್ತಾಪ ಮುಂದಿಟ್ಟು ನೋಡಲಿ. ಹಿಂದಿನ ವರ್ಷ ನಗರ ಮತ್ತು ಹೊರವಲಯದ ಹಲವು ವಾಣಿಜ್ಯ ಉತ್ಸವಗಳಲ್ಲಿನ ಫಲಿತಾಂಶವೇ ಮುಂದೆ ಸಂಭವಿಸಿದರೆ ಆಶ್ಚರ್ಯವಿಲ್ಲ ಎಂದು ಅಶ್ರಫ್ ಹೇಳಿದರು.
ಮಂಗಳೂರಿನ ವಾಣಿಜ್ಯ ಮಂಡಳಿ ಈ ಬಗ್ಗೆ ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸಿ ಸಮಸ್ಯೆಯನ್ನು ಉತ್ತಮ ರೀತಿಯಲ್ಲಿ ನಿಭಾಯಿಸಬೇಕು. ತಪ್ಪಿದಲ್ಲಿ ನಿರ್ಧಿಷ್ಟ ಸಮುದಾಯದ ಜನರು ಬಹು ಅಗತ್ಯ ವ್ಯವಹಾರಗಳನ್ನು ಇತರ ಜಿಲ್ಲೆಗಳಿಗೆ ಒತ್ತಾಯ ಪೂರ್ವಕ ವಿಕೇಂದ್ರೀಕರಿಸಬೇಕಾಗುತ್ತದೆ. ವಾಣಿಜ್ಯ ಸಮುದಾಯ ಇದನ್ನು ತಿಳಿಯುವುದು ಒಳಿತು ಎಂದು ಕೆ.ಅಶ್ರಫ್( ಮಾಜಿ ಮೇಯರ್) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್