janadhvani

Kannada Online News Paper

ಎಚ್ಚರಿಕೆಗಳ ಹೊರತಾಗಿಯೂ ದಾಳಿ ಮುಂದುವರಿಸಿದ ಇಸ್ರೇಲ್- ಅರಬ್ ಲೀಗ್ ತುರ್ತು ಸಭೆ

ಇಸ್ರೇಲ್ ತನ್ನ ನಿಲುವನ್ನು ಬದಲಾಯಿಸಲು ಸಿದ್ಧವಾಗಿಲ್ಲದಿದ್ದರೆ, ಇದು ಕೊನೆಯ ಯುದ್ಧ ಆಗಿರಲ್ಲ ಎಂದು ಅರಬ್ ಲೀಗ್‌ ಎಚ್ಚರಿಸಿದೆ

ರಿಯಾದ್: ಇಸ್ರೇಲ್ ಗಾಜಾ ಪ್ರವೇಶಿಸಲಿರುವ ಹಿನ್ನೆಲೆಯಲ್ಲಿ ಅರಬ್ ಲೀಗ್ ತುರ್ತು ಸಭೆ ಕರೆದಿದೆ. ಪುನರಾವರ್ತಿತ ಎಚ್ಚರಿಕೆಗಳ ಹೊರತಾಗಿಯೂ ಇಸ್ರೇಲ್ ತನ್ನ ನಿಲುವನ್ನು ಬದಲಾಯಿಸದ ಕಾರಣ ಪ್ರಸ್ತುತ ಘಟನೆಗಳನ್ನು ಅರಬ್ ಲೀಗ್ ಖಂಡಿಸಿದೆ. ಇಸ್ರೇಲ್ ತನ್ನ ನಿಲುವನ್ನು ಬದಲಾಯಿಸಲು ಸಿದ್ಧವಾಗಿಲ್ಲದಿದ್ದರೆ, ಇದು ಕೊನೆಯ ಯುದ್ಧ ಆಗಿರಲ್ಲ ಎಂದು ಅರಬ್ ಲೀಗ್‌ನ ಸಹ ಮುಖ್ಯಸ್ಥರು ಎಚ್ಚರಿಸಿದ್ದಾರೆ. ಅರಬ್ ಲೀಗ್ ಸೌದಿ ಅರೇಬಿಯಾ, ಯುಎಇ ಮತ್ತು ಕತಾರ್ ಸೇರಿದಂತೆ 22 ರಾಷ್ಟ್ರಗಳ ಒಕ್ಕೂಟವಾಗಿದೆ.

ಗಾಜಾದ ಗಡಿಯಲ್ಲಿ ಲಕ್ಷಕ್ಕೂ ಮಿಕ್ಕ ಇಸ್ರೇಲಿ ಸೈನಿಕರು ತಮ್ಮ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಘರ್ಷಣೆಯ ನಂತರ ಗಾಜಾವನ್ನು ಪ್ರವೇಶಿಸುವುದು ಗುರಿಯಾಗಿದೆ. ಇಸ್ರೇಲ್ ಗಾಜಾಕ್ಕೆ ನೀರು, ಆಹಾರ ಮತ್ತು ವಿದ್ಯುತ್ ಅನ್ನು ಕಡಿತಗೊಳಿಸಿದೆ. ಇಸ್ರೇಲ್ ಸಾಮಾನ್ಯ ಜನರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಏತನ್ಮಧ್ಯೆ, ಅರಬ್ ಲೀಗ್ ತುರ್ತು ಸಭೆಯನ್ನು ಕರೆದಿದೆ. ಸಭೆಯು ನಾಳೆ ಕೈರೋದಲ್ಲಿ ನಡೆಯಲಿದೆ. ಇಸ್ರೇಲ್ ಮೇಲೆ ಆರೋಪ ಹೊರಿಸಿ ಅರಬ್ ಲೀಗ್ ನ ಪ್ರಧಾನ ಕಾರ್ಯದರ್ಶಿಯ ಹೇಳಿಕೆಯೂ ಹೊರಬಿದ್ದಿದೆ.

ಅರಬ್ ಲೀಗ್‌ನ ಸಹ ಮುಖ್ಯಸ್ಥ ಹೊಸ್ಸಾಮ್ ಸಾಕಿ, ಬಿಕ್ಕಟ್ಟು ಪರಿಹಾರಕ್ಕೆ ಒಪ್ಪಿಕೊಳ್ಳದೆ, ಇಸ್ರೇಲ್ ಸ್ವತಃ ಪ್ರಸ್ತುತ ಪರಿಸ್ಥಿತಿಗೆ ತಂದಿದೆ ಎಂದು ಆರೋಪಿಸಿದ್ದಾರೆ. ಇಸ್ರೇಲ್ ತನ್ನ ನಿಲುವನ್ನು ಬದಲಾಯಿಸಲು ಸಿದ್ಧವಾಗದಿದ್ದರೆ ಇದು ಕೊನೆಯ ಯುದ್ಧ ಆಗಿರುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ. ಅರಬ್ ಲೀಗ್‌ನ ತುರ್ತು ಸಭೆಗಾಗಿ ಪ್ಯಾಲೆಸ್ತೀನ್ ನಿನ್ನೆ ಕರೆ ನೀಡಿತ್ತು.

ಪ್ರಸ್ತುತ, ಸಂಘರ್ಷವು ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವೆ ಇದೆ, ಆದರೂ ನೇರ ಮಧ್ಯಪ್ರವೇಶವಿಲ್ಲದೆ ಎರಡೂ ಕಡೆಯವರು ವಿವಿಧ ದೇಶಗಳ ಬೆಂಬಲವನ್ನು ಹೊಂದಿದ್ದಾರೆ.ಇಸ್ರೇಲ್‌ನ ಬಲಪಂಥೀಯ ಸರ್ಕಾರವು ದ್ವಿರಾಷ್ಟ್ರ ಸೂತ್ರವನ್ನು ತಿರಸ್ಕರಿಸಿತ್ತು. ಪ್ಯಾಲೆಸ್ತೀನ್‌ನಲ್ಲಿ ಪ್ರತಿ ತಿಂಗಳು ನೂರಾರು ಜನರು ಇಸ್ರೇಲಿ ಸೇನೆಯಿಂದ ಕೊಲ್ಲಲ್ಪಡುತ್ತಾರೆ. ಇದಕ್ಕೆ ಪ್ರತೀಕಾರವಾಗಿ ಮತ್ತು 6000 ಕೈದಿಗಳ ಬಿಡುಗಡೆಗಾಗಿ, ಗಾಜಾದಿಂದ ಇತಿಹಾಸದಲ್ಲಿ ಅತಿದೊಡ್ಡ ಆಘಾತ ಇಸ್ರೇಲ್‌ಗೆ ಸಂಭವಿಸಿದೆ. ಪರಿಸ್ಥಿತಿ ಹತೋಟಿಗೆ ಬಾರದಿದ್ದರೆ ಮುಂದೆ ಏನು ಮಾಡಬೇಕು ಎಂಬುದನ್ನೂ ಅರಬ್ ಲೀಗ್ ಚರ್ಚಿಸಲಿದೆ.

error: Content is protected !! Not allowed copy content from janadhvani.com