ಮಂಗಳೂರು: ಕಳೆದ ಎರಡು ತಿಂಗಳುಗಳಿಂದಲೂ ಹೆಚ್ಚು ಅನಿಯಂತ್ರಿತವಾಗಿ ನಡೆಯುತ್ತಿರುವ ಮಣಿಪುರ ಜನಾಂಗೀಯ ಹತ್ಯೆಯ ಹಿಂದೆ ಸಂಘಪರಿವಾರದ ವ್ಯವಸ್ಥಿತ ಷಡ್ಯಂತ್ರ ಅಡಗಿದೆ ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೊಂಬತ್ತರ ದಶಕದಲ್ಲಿ ಗೋದ್ರೂತ್ತರ ಗುಜರಾತ್ ನಲ್ಲಿ ನಡೆದ ಮುಸ್ಲಿಮರ ವಿರುದ್ಧದ ಸಾಮೂಹಿಕ ಗಲಭೆಯು ರಾಜ್ಯ ಪ್ರೇರಿತ ಮತ್ತು ಸರಕಾರದ ಪ್ರಾಯೋಜಿತ್ವದಲ್ಲಿಯೇ ನಡೆಸಲಾಗಿತ್ತು. ಇಂದು ಮಣಿಪುರದಲ್ಲಿ ನಡೆಯತ್ತಿರುವ ಸುಮಾರು 300 ಕ್ಕೂ ಅಧಿಕ ಜನರ ಹತ್ಯೆ, ಸಾವಿರಾರು ಜನರ ಊನತ್ವ, ಲಕ್ಷಾಂತರ ಜನರ ನಿರಾಶ್ರಯತೆ, ಅಸಂಖ್ಯಾತ ಸ್ತ್ರೀಯರನ್ನು ನಗ್ನ ಮೆರವಣಿಗೆ ಗೊಳಿಸಿ ಬಲಾತ್ಕಾರ ಕೃತ್ಯಗಳು ಕೂಡಾ ಸಂಘ ಪರಿವಾರ ಪ್ರೇರಿತ ಕೃತ್ಯ ಮತ್ತು ಸರಕಾರದ ಪ್ರಾಯೋಜತ್ವದಲ್ಲಿ ನಡೆಯುತ್ತಿದೆ.
ಈ ಹಿಂದೆ ಗುಜರಾತ್ ನಲ್ಲಿ ನಡೆದಂತೆ, ಭಾರತಾದ್ಯಂತ ಮತೀಯ ಉನ್ಮಾದತೆ ಸೃಷ್ಟಿಯೇ ಇಂದರ ಹಿಂದಿನ ಮಹಾ ಷಡ್ಯಂತ್ರವಾಗಿದೆ. ಅಲ್ಪ ಸಂಖ್ಯಾತ ಜನತೆಯ ವಿರುದ್ಧ ಬಹು ಸಂಖ್ಯಾತ ಪರಾಕ್ರಮವನ್ನು ದೇಶಾದಾದ್ಯಂತ ಪ್ರದರ್ಶನ ಗೊಳಿಸುವ ಪ್ರಯತ್ನವೇ ಮಣಿಪುರ ಘಟನೆಯ ಹಿಂದಿನ ಉದ್ದೇಶ ಆಗಿದೆ.
ಬಹು ಸಂಖ್ಯಾತ ಸಾಮಾನ್ಯ ಜನರು ಮತೀಯ ಪಾರಮ್ಯ ಚಿಂತನೆಯಿಂದ ಹೊರ ಬಂದು ಈ ದೇಶದ ಬಹುತ್ವ ಚಿಂತನೆಗೆ ಇನ್ನಾದರೂ ಶಕ್ತಿ ತುಂಬಬೇಕಿದೆ. ಮಣಿಪುರ ಘಟನೆಯನ್ನು ಸರ್ವರೂ ಒಕ್ಕೊರಲಿನಿಂದ ಖಂಡಿಸಬೇಕಿದೆ. ಮಣಿಪುರದಲ್ಲಿ ನಡೆದ ಹತ್ಯೆ, ದೌರ್ಜನ್ಯ, ಸ್ತೀಯರ ನಗ್ನತೆಯ ಪ್ರದರ್ಶನ, ಬಲಾತ್ಕಾರ ನಾಗರಿಕ ವ್ಯವಸ್ಥೆ ನಾಚುವಂತದ್ದು ಮತ್ತು ಖಂಡನೀಯ.
ಕೆ.ಅಶ್ರಫ್( ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
















ಇನ್ನಷ್ಟು ಸುದ್ದಿಗಳು
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
‘ಗಲ್ಫ್ ಪ್ರದೇಶದ ಸಂಘರ್ಷಗಳನ್ನು ಭಾರತಕ್ಕೆ ನಿರ್ಲಕ್ಷಿಸಲು ಸಾಧ್ಯವಿಲ್ಲ’ – ಭಾರತೀಯ ರಾಯಭಾರಿ ಡಾ. ಸುಹೈಲ್ ಅಜಾಝ್ ಖಾನ್
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ: ‘E-GEN ಸ್ಕಾಲರ್ಶಿಪ್’ ಗೆ ಅಧಿಕೃತ ಚಾಲನೆ
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
SჄS ಬೆಳ್ತಂಗಡಿ ಝೋನ್: ಸಾಂತ್ವನ ಫಂಡ್ ಹಸ್ತಾಂತರ