SSF ಕರ್ನಾಟಕ ರಾಜ್ಯ ಸಮಿತಿಯು ಹಮ್ಮಿಕೊಂಡ ಖಿಯಾದ ರಾಜ್ಯ ಪ್ರತಿನಿಧಿ ಸಮಾವೇಶ ಮಾರ್ಚ್ 18, 19 ದಿನಾಂಕಗಳಲ್ಲಿ ಉಜಿರೆ ಪ್ರತಿಷ್ಠಿತ ವಿದ್ಯಾಸಂಸ್ಥೆ ಮಲ್ಜಅ ಕ್ಯಾಂಪಸ್ ನಲ್ಲಿ ನಡೆಯಲಿದ್ದು, ಇದರ ಪ್ರಚಾರಾರ್ಥ ಪೂರ್ವಭಾವಿ ಸಭೆಯು ಫೆ. 28 ರಂದು ಮಲ್ಜಅ ನಲ್ಲಿ ನಡೆಯಿತು.
ಅನ್ಸಾರ್ ಟೀಂ ಚೆಯರ್ಮ್ಯಾನ್ ಸಲೀಂ ಕನ್ಯಾಡಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಸಂಸ್ಥೆಯ ಮ್ಯಾನೆಜರ್ ಮೆಹಬೂಬ್ ಸಖಾಫಿ ಕಿನ್ಯ ಉದ್ಘಾಟಿಸಿದರು.
SSF ರಾಜ್ಯ ಕೋಶಾಧಿಕಾರಿ ಹಾಫಿಲ್ ಸುಫ್ಯಾನ್ ಸಖಾಫಿ ವಿಷಯ ಮಂಡಿಸಿದರು. ತಾಲೂಕಿನ ಸಿದ್ಧತೆಯ ಬಗ್ಗೆ SYS ಬೆಳ್ತಂಗಡಿ ಝೋನ್ ಪ್ರ.ಕಾರ್ಯದರ್ಶಿ ಅಶ್ರಫ್ ಅಲಿಕುಂಞಿ ಮುಂಡಾಜೆ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ SSF ರಾಜ್ಯ ನಾಯಕರಾದ ಇಸ್ಮಾಯಿಲ್ ಮಾಸ್ಟರ್, ಮುನೀರ್ ಸಖಾಫಿ, ರಶೀದ್ ಮಡಂತ್ಯಾರು, ಜಿಲ್ಲಾ ಕೋಶಾಧಿಕಾರಿ ಇಕ್ಬಾಲ್ ಮಾಚಾರು, ಸದಸ್ಯ ಶರೀಫ್ ನಾವೂರು, ಸಾದಿಕ್ ಮಲೆಬೆಟ್ಟು, ಮುಸ್ಲಿಂ ಜಮಾಅತ್ ಬೆಳ್ತಂಗಡಿ ಝೋನ್ ಅಧ್ಯಕ್ಷ SM ತಂಙಳ್ ಉಜಿರೆ, SSF ಬೆಳ್ತಂಗಡಿ ಡಿವಿಷನ್ ಅಧ್ಯಕ್ಷ ಶಾಫಿ ಮದನಿ ಪಾಂಡವರಕಲ್ಲು, KMJ ಉಜಿರೆ ಸರ್ಕಲ್ ಅಧ್ಯಕ್ಷ ಹೈದರ್ ಮದನಿ, KMJ ವೇಣೂರು ಸರ್ಕಲ್ ಅಧ್ಯಕ್ಷ ಸಯ್ಯಿದ್ ಶರಫುದ್ದೀನ್ ತಂಙಳ್ ಪಡ್ಡಂದಡ್ಕ, ಅನ್ಸಾರ್ ಟೀಂ ಕೋಶಾಧಿಕಾರಿ ಅಬೂಬಕ್ಕರ್ ಸಮಾಡೈನ್, SMA ರಾಜ್ಯ ಉಪಾಧ್ಯಕ್ಷ ಇಸ್ಮಾಈಲ್ ಉಳ್ತೂರು, ಬೆಳ್ತಂಗಡಿ ಝೋನಲ್ ಅಧ್ಯಕ್ಷ ಅಬ್ದುಲ್ ಹಮೀದ್ ಮುಂಡಾಜೆ, SMA ಉಜಿರೆ ರೀಜಿನಲ್ ಅಧ್ಯಕ್ಷ ಮುಹಿಯುದ್ದೀನ್ ನಜಾತ್ ಉಜಿರೆ, SJM ಜಿಲ್ಲಾ ನಾಯಕ ಸಿರಾಜುದ್ದೀನ್ ಸಖಾಫಿ, ಸುನ್ನೀ ಸಂಯುಕ್ತ ಜಮಾಅತ್ ಪ್ರ.ಕಾರ್ಯದರ್ಶಿ ಅಬ್ದುರ್ರಝಾಖ್ ಸಖಾಫಿ ಮಡಂತ್ಯಾರು, ಉಸ್ಮಾನ್ ಪಣಕಜೆ ಹಾಗೂ ಬೆಳ್ತಂಗಡಿ ತಾಲೂಕಿನ KMJ, SYS, SSF, SMA ನ ಸರ್ಕಲ್ ಹಾಗೂ ಸೆಕ್ಟರ್ ನಾಯಕರು ಭಾಗವಹಿಸಿದ್ದರು.
SYS ಬೆಳ್ತಂಗಡಿ ಝೋನ್ ಅಧ್ಯಕ್ಷ ಕಾಸಿಂ ಮುಸ್ಲಿಯಾರ್ ಮಾಚಾರು ಸ್ವಾಗತಿಸಿ ವಂದಿಸಿದರು.